This page has not been fully proofread.

೧೭೨
 
ವಿವೇಕಚೂಡಾಮಣಿ
 
[೩೩೧
 
೩೩೦. ಶ್ರುತಿ, ಸ್ಮೃತಿ ಮತ್ತು ನೂರಾರು ಯುಕ್ತಿಗಳು ನಿಷೇಧಿಸಿರುವ
ಈ ದೃಶ್ಯ ಜಗತ್ತಿನಲ್ಲಿ ಯಾವನು 'ನಾನು' ಎಂಬ ಬುದ್ಧಿಯನ್ನು ಮಾಡುತ್ತಾ
ನೆಯೊ ಅವನು ಮಾಡಬಾರದ್ದನ್ನು ಮಾಡುವ ಕಳ್ಳನಂತೆ-ದುಃಖಗಳ
ಮೇಲೆ ದುಃಖವನ್ನು ಹೊಂದುತ್ತಾನೆ.
 
ಸತ್ಯಾಭಿಸಂಧಾನರತೋ
 
ವಿಮುಕ್ತ
ಮಹತ್ವ ಮಾಯಮುತಿ ನಿತ್ಯಮ್ ।
ಮಿಥ್ಯಾಭಿಸಂಧಾನರತಸ್ತು ನಶ್ಯದ್
ದೃಷ್ಟಂ ತದೇತದ ಚೋರ ಚೋರಯೋ
 
॥ ೩೩೧ I
 
ಸತ್ಯ. ಅಭಿಸಂಧಾನ.ರತಃ – ಸತ್ಯಬ್ರಹ್ಮವನ್ನು ಅನುಸಂಧಾನಮಾಡುತ್ತಿರು
ವವನು ವಿಮುಕ್ತಃ - ಮುಕ್ತನಾಗಿ ಆತ್ಮೀಯಂ – ತನ್ನ ನಿತ್ಯಂ - ಶಾಶ್ವತವಾದ
ಮಹತ್ವ = ಮಹಿಮೆಯನ್ನು ಉಪೈತಿ - ಹೊಂದುತ್ತಾನೆ; ತು - ಆದರೆ
 
ಮಿಥ್ಯಾ ಅಭಿಸಂಧಾನ ರತಃ ಮಿಥ್ಯಾವಸ್ತುವನ್ನೇ ಅನುಸಂಧಾನಮಾಡುತ್ತಿರುವವನು
ನಶೆತ್ - ನಾಶವಾಗುತ್ತಾನೆ; ಯತ್ = ಏಕೆಂದರೆ, ತತ್ ಏತತ್ : ಆ ಇದು
ಅಚೋರ-ಚೋರಯೋಃ – ಚೋರನು ಚೋರನಲ್ಲದವನು- ಇವರ ವಿಷಯದಲ್ಲಿ
ದೃಷ್ಟಂ = ನೋಡಲ್ಪಟ್ಟಿದೆ.
 
೩೩೧. ಯಾವನು ಸತ್ಯಬ್ರಹ್ಮವನ್ನೇ ಅನುಸಂಧಾನಮಾಡುತ್ತಿರುವನೋ
ಅವನು (ಸಂಸಾರದಿಂದ) ಬಿಡುಗಡೆಯನ್ನು ಹೊಂದಿದವನಾಗಿ ತನ್ನ ಶಾಶ್ವತ
ವಾದ ಮಹಿಮೆಯನ್ನು ಹೊಂದುತ್ತಾನೆ; ಆದರೆ ಯಾವನು ಮಿಥ್ಯಾರೂಪ
ವಾಗಿರುವ (ದೇಹಾದಿಗಳನ್ನೇ ಆತ್ಮವಸ್ತುವೆಂದು) ಅನುಸಂಧಾನಮಾಡುತ್ತಾ
ನೆಯೋ ಅವನು ನಾಶವಾಗುತ್ತಾನೆ. ಆ ಇದು ಚೋರನು ಚೋರನಲ್ಲದವನು-
ಇವರ ವಿಷಯದಲ್ಲಿ ನೋಡಲ್ಪಟ್ಟಿದೆ.?
 
[೧ ಹಿಂದಿನ ಕಾಲದಲ್ಲಿ ಒಂದು ಕೊಡಲಿಯನ್ನು ಕಾಯಿಸಿ ಅದನ್ನು ಆಪಾದಿತನು
ಮುಟ್ಟುವ ಹಾಗೆ ಮಾಡುತ್ತಿದ್ದರು; ಅವನ ಕೈಸುಡದಿದ್ದರೆ ಅವನು ನಿರಪರಾಧಿ
ಯೆಂದೂ ಸುಟ್ಟರೆ ಅಪರಾಧಿಯೆಂದೂ ನಿರ್ಧರಿಸುತ್ತಿದ್ದರು. ಇದು ಛಾಂದೋಗ್ಯಪ
ನಿಷತ್ತಿನ ೬. ೧೬ರಲ್ಲಿ ಬರುವ ಅಗ್ನಿ ಪರೀಕ್ಷೆಯನ್ನು ಸೂಚಿಸುತ್ತದೆ.
 
ಯತಿರಸದನುಸಂಧಿಂ ಬಂಧಹೇತುಂ ವಿಹಾಯ
 
ಸ್ವಯಮಯಮಹಮತ್ಯಾತ್ಮದೃನ ತಿಷ್ಯತ್ ।
ಸುಖಯತಿ ನನು ನಿಷ್ಠಾ ಬ್ರಹ್ಮಣಿ ಸ್ವಾನುಭೂತ್ಯಾ
ಹರತಿ ಪರಮವಿದ್ಯಾಕಾರ್ಯದುಃಖಂ ಪ್ರತೀತಮ್ ॥ ೩೩೨ ॥