This page has been fully proofread once and needs a second look.

ವಿವೇಕಚೂಡಾಮಣಿ
 

 
[೧೩
 
(
ಫಲಾಭಿಸಂಧಿಯಿಲ್ಲದೆ ಮಾಡಿದ ಕರ್ಮವು ಚಿತ್ತ ಶುದ್ಧಿಯ ಮೂಲಕ ಆತ್ಮಜ್ಞಾನಕ್ಕೆ

ಅವಕಾಶವನ್ನುಂ
ಎಂ
ಟುಮಾಡುತ್ತದೆ ಎಂಬುದು ಅಭಿಪ್ರಾಯ.
 

 
]
 
ಸಮ್ಯಗ್ವಿಚಾರತಃ ಸಿದ್ಧಾ ರಜ್ಜು-ತಾತತ್ತ್ವಾ ವಧಾರಣಾ ।

ಭ್ರಾಂತ್ಯೋದಿತ-ಮಹಾಸರ್ಪ-ಭಯದುಃಖವಿನಾಶಿನೀ || ೧೨
 
||
 
ಭ್ರಾಂತ್ಯಾ = ಭ್ರಾಂತಿಯಿಂದ, ಉದಿತ-ಮಹಾಸರ್ಪ-ಭಯದುಃಖ, -ವಿನಾ-

ಶಿನೀ -= ಉದಿತವಾದ ಮಹಾಸರ್ಪದಿಂದ ಉಂಟಾದ ಭಯದುಃಖಗಳನ್ನು ಹೋಗ
-
ಲಾಡಿಸುವ,
ರಜ್ಜು-ತತ್ತ್ವ-ಅವಧಾರಣಾ -= ಹಗ್ಗವೆಂಬ ನಿಜಸ್ಥಿತಿಯ ನಿಶ್ಚಯವು
,
ಸಮ್ಯಗ್ - ವಿಚಾರತಃ = ಸಮ್ಯಗ್ವಿಚಾರದಿಂದಲೇ, ಸಿದ್ಧಾ -= ಸಿದ್ಧವಾಗುವುದು.
 
ಲಾಡಿಸುವ
 
a
 

 
೧೨. ಭ್ರಾಂತಿಜನಿತವಾದ ಮಹಾಸರ್ಪದಿಂದ ಉಂಟಾಗುವ ಭಯ

ದುಃಖಗಳನ್ನು ಹೋಗಲಾಡಿಸುವ ಹಗ್ಗವೆಂಬ ನಿಜಸ್ಥಿತಿಯ ನಿಶ್ಚಯವು

ಸಮ್ಯಗ್ವಿಚಾರದಿಂದಲೇ ಸಿದ್ಧವಾಗುವುದು.
 

 
[ನಸುಗತ್ತಲೆಯಲ್ಲಿ ಬಿದ್ದಿರುವ ಹಗ್ಗವನ್ನು ಹಾವೆಂದು ಭಾವಿಸಿಕೊಂಡು ಹೆದರಿದ

ಮನುಷ್ಯನು ಒಂದು ದೀಪವನ್ನು ತಂದು 'ಇದು ಹಗ್ಗ, ಹಾವಲ್ಲ' ಎಂದು ವಿಚಾರದ

ಮೂಲಕ ವಸ್ತು ತತ್ತ್ವವನ್ನು ಅರಿತುಕೊಂಡು ಭಯವನ್ನು ಬಿಡುವುದು ಎಲ್ಲರಿಗೂ

ತಿಳಿದ ವಿಷಯ. ಹೀಗೆಯೇ ಶರೀರೇಂದ್ರಿಯ -ಸಂಘಾತವನ್ನು ಆತ್ಮನೆಂದು ಭಾವಿಸಿ
-
ಕೊಂಡವನು ಆತ್ಮನ ಸ್ವರೂಪವನ್ನು ನಿರ್ಧರಿಸಿದ ಮೇಲೆ ಭ್ರಾಂತಿಯಿಂದ ಉಂಟಾಗಿದ್ದ

ಭಯದುಃಖಗಳನ್ನು ಬಿಡುತ್ತಾನೆ.
 
]
 
ಅರ್ಥಸ್ಯ ನಿಶ್ಚಯೋ ದೃಷ್ಟೋ ವಿಚಾರೇಣ ಹಿತೋಕ್ತಿತಃ ।

ನ ಸ್ನಾನೇನ ನ ದಾನೇನ ಪ್ರಾಣಾಯಾಮ-ಶತೇನ ವಾ ॥ ೧೩ ॥
 

 
ಅರ್ಥಸ್ಯ - ತತ್ತ್ವದ= ತತ್ತ್ವದ, ನಿಶ್ಚಯಃ = ನಿಶ್ಚಯವು, ಹಿತೋಕ್ತಿತಃ -= ಆಪ್ತವಾಕ್ಯ
-
ದಿಂದಲೂ, ವಿಚಾರೇಣ - =ವಿಚಾರದಿಂದಲೂ, ದೃಷ್ಟಃ = ಕಂಡುಬರುತ್ತದೆ; ಸ್ನಾನೇನ
=
ಸ್ನಾನಮಾಡುವುದರಿಂದಲೂ, ನ- ಇಲ್ಲ, ದಾನೇನ -= ದಾನದಿಂದಲೂ ವಾ , ವಾ =ಅಥವಾ
,
ಪ್ರಾಣಾಯಾಮ-ಶತೇನ -= ನೂರಾರು ಪ್ರಾಣಾಯಾಮಗಳಿಂದಲೂ, ನ = ಇಲ್ಲ.
 
P
 
C
 

 
೧೩. ತತ್ತ್ವನಿಶ್ಚಯವು ಆಪ್ತವಾಕ್ಯವನ್ನು[^೧] ಅನುಸರಿಸಿದ ವಿಚಾರದಿಂದ
[^೨]
ಸಿದ್ಧಿಸುತ್ತದೆಯೇ ವಿನಾ ಸ್ನಾನದಿಂದಾಗಲಿ ದಾನದಿಂದಾಗಲಿ ಅಥವಾ ನೂರಾರು

ಪ್ರಾಣಾಯಾಮಗಳಿಂದಾಗಲಿ ಸಿದ್ಧಿಸುವುದಿಲ್ಲ.
 

 
[^] ಆಪ್ತರಾದ ಆಚಾರ್ಯರು ಉಪದೇಶಮಾಡುವ ಯಥಾರ್ಥವಾದ ತು

ಹಿತೋಕ್ತಿ ಎನಿಸುವುದು.