This page has been fully proofread once and needs a second look.

೩೨೧]
 
ವಿವೇಕಚೂಡಾಮಣಿ
 
ಹೊರಗೂ ಒಳಗೂ, ಸಮಾಹಿತಃ ಸನ್ = ಸಮಾಹಿತನಾಗಿ, ಕರ್ಮಬಂಧೇ ಸತಿ -
=
ಪ್ರಾರಬ್ಧ ಕರ್ಮವು ಇನ್ನೂ ಇದ್ದರೆ, ಕಾಲಂ = ಕಾಲವನ್ನು, ನಯಥಾಃ -= ಕಳೆ.

 
೩೧೯.
ಕಾಣುತ್ತಿರುವ ದೃಶ್ಯ ಜಗತ್ತನ್ನು ಲಯಮಾಡಿಕೊಂಡು ಸನ್ಮಾ
-
ತ್ರವೂ ಆನಂದಘನವೂ ಆದ ಬ್ರಹ್ಮವನ್ನೇ ಭಾವಿಸುತ್ತ, ಒಳಗೂ ಹೊರಗೂ

ಸಮಾಹಿತನಾಗಿ, ಕರ್ಮಬಂಧವು ಇನ್ನೂ ಇದ್ದರೆ ಕಾಲವನ್ನು ಕಳೆ.
 
೩೧೯
 
೧೬೭
 

 
[
ಒಂದು ವೇಳೆ ಪ್ರಾರಬ್ಧವಶದಿಂದ ಪ್ರಪಂಚವು ತೋರುತ್ತಿದ್ದರೆ ಆಗ ಏನು ಮಾಡ
-
ಬೇಕೆಂದು ಹೇಳಿದೆ.]
 

 
ಪ್ರಮಾದೋ ಬ್ರಹ್ಮನಿಷ್ಠಾಯಾಂ ನ ಕರ್ತವ್ಯಃ ಕದಾಚನ ।

ಪ್ರಮಾದೋ ಮೃತ್ಯುರಿತ್ಸಾಯಾಹ ಭಗವಾನ್ ಬ್ರಹ್ಮಣಃ ಸುತಃ ॥ ೩೨೦ ॥
 

 
ಬ್ರಹ್ಮನಿಷ್ಠಾಯಾಂ -= ಬ್ರಹ್ಮನಿಷ್ಠೆಯಲ್ಲಿ, ಪ್ರಮಾದಃ -= ಅನವಧಾನತೆಯು
,
ಕದಾಚನ= ಎಂದಿಗೂ, ನ ಕರ್ತವ್ಯ-ಯಃ= ಮಾಡತಕ್ಕದ್ದಲ್ಲ; ಪ್ರಮಾದಃ-= ಪ್ರಮಾದವೇ
,
ಮೃತ್ಯು –ಯುಃ = ಮೃತ್ಯುವು, ಇತಿ -= ಎಂದು, ಭಗವಾನ್ -= ಭಗವಂತನಾದ, ಬ್ರಹ್ಮಣಃ

ಸುತಃ = ಬ್ರಹ್ಮಕುಮಾರನು, ಆಹ = ಹೇಳುತ್ತಾನೆ.
 

 
೩೨೦. ಬ್ರಹ್ಮನಿಷ್ಠೆಯಲ್ಲಿ ಎಂದಿಗೂ ಎಚ್ಚರತಪ್ಪ ಕೂಡದು. 'ಪ್ರಮಾ
-
ದವೇ ಮೃತ್ಯುವು' ಎಂದು ಭಗವಂತನಾದ ಬ್ರಹ್ಮಕುಮಾರನು ಹೇಳುತ್ತಾನೆ.
 
[^]
 
[^೧]
ಇಲ್ಲಿ ಬ್ರಹ್ಮಕುಮಾರನೆಂದು ಸೂಚಿಸಿರುವುದು ಸನತ್ಕುಮಾರನನ್ನು, ಇವನು

ಧೃತರಾಷ್ಟ್ರನಿಗೆ ಮಾಡಿದ ಉಪದೇಶದಲ್ಲಿ 'ಪ್ರಮಾದವನ್ನೇ ಮೃತ್ಯುವೆಂದು ನಾನು

ಹೇಳುತ್ತೇನೆ' ಪ್ರಮಾದಂ ವೈ ಮೃತ್ಯು ಮಹಂ ಬ್ರವೀಮಿ ಎಂಬ ಪ್ರಸಿದ್ಧವಾದ

ವಾಕ್ಯವು ಕಂಡುಬರುತ್ತದೆ. ಮಹಾಭಾರತದ ಉದ್ಯೋಗ ಪರ್ವದ೪೦-೪೫ ಅಧ್ಯಾಯ
-
ಗಳನ್ನು ಸನತ್ಸುಜಾತ- ಸಂವಾದವು ಒಳಕೊಂಡಿದೆ.]
 

 
ನ ಪ್ರಮಾದಾದನರ್ಥೋಽನೋನ್ಯೋ ಜ್ಞಾನಿನಃ ಸ್ವಸ್ವರೂಪತಃ ।

ತತೋ ಮೋಹಸ್ತತೋsಹಂಧೀಸ್ತತೋ ಬಂಧಸ್ತತೋ ವ್ಯಥಾ
 
=
 
|| ೩೨೧ ||
 
ಜ್ಞಾನಿನಃ-=ಜ್ಞಾನಿಯಾದವನಿಗೆ, ಸ್ವಸ್ವರೂಪತಃ= ತನ್ನ ಸ್ವರೂಪದಿಂದ ಪ್ರಮಾ
, ಪ್ರಮಾ-
ದಾತ್ -= ಎಚ್ಚರತಪ್ಪುವುದಕ್ಕಿಂತ, ಅನ್ಯಃ -
8
= ಬೇರೆ, ಅನರ್ಥಃ = ಕೇಡು, ನ= ಇರು
-
ವುದಿಲ್ಲ; ತತಃ -= ಅದರಿಂದ, ಮೋಹಃ= ಮೋಹವೂ, ತತಃ= ಅದರಿಂದ, ಅಹಂ-ಧೀಃ-
=
ಅಹಂಕಾರವೂ, ತತಃ = ಅದರಿಂದ, ಬಂಧಃ = ಬಂಧವೂ, ತತಃ = ಅದರಿಂದ, ವ್ಯಥಾ.
=
ವ್ಯಥೆಯೂ [ಉಂಟಾಗುತ್ತವೆ].