This page has not been fully proofread.

೩೧೨]
 
ವಿವೇಕಚೂಡಾಮಣಿ
 
ಯಿತಾ ಕಥಂ ಸ್ಯಾತ್ - ಹೇಗೆ ತಾನೇ ಕಾಮಿಯಾದಾನು? ಅತಃ = ಆದುದರಿಂದ
ಅರ್ಥ ಸಂಧಾನ ಪರತ್ವಮ್ ಏವ - ವಿಷಯಚಿಂತನೆಯಲ್ಲಿ ಆಸಕ್ತನಾಗುವಿಕೆಯೇ
ಭೇದಪ್ರಸಾ = ಭೇದಕ್ಕೆ ಅವಕಾಶವನ್ನು ಕೊಡುವುದರ ಮೂಲಕ ಭವಬಂಧ.
ಹೇತುಃ = ಸಂಸಾರಬಂಧಕ್ಕೆ ಕಾರಣವಾಗಿರುತ್ತದೆ.
 
H
 
೧೬೩
 
೩೧೦, ದೇಹವೇ ತಾನೆಂದು ಅರಿತಿರುವವನೇ ಕಾಮಿಯು, ತಾನು
ದೇಹಕ್ಕಿಂತ ಬೇರೆಯಾದವನೆಂದು ಅರಿತಿರುವವನು ಹೇಗೆ ಕಾಮಿಯಾದಾನು??
ಆದುದರಿಂದ ವಿಷಯಗಳನ್ನು ಮನಸ್ಸಿನಲ್ಲಿ ಚಿಂತಿಸುವುದೇ ಭೇದಕ್ಕೆ ಅವಕಾಶ
ವನ್ನು ಕೊಡುವುದರ ಮೂಲಕ ಸಂಸಾರಬಂಧಕ್ಕೆ ಕಾರಣವಾಗಿರುತ್ತದೆ.
 
[೧ 'ಪರಮಾತ್ಮನನ್ನು "ಇವನೇ ನಾನು" ಎಂದು ಅರಿತುಕೊಂಡರೆ, ಯಾವುದನ್ನು
ಬಯಸುತ್ತ, ಯಾವ ಪ್ರಯೋಜನಕ್ಕಾಗಿ ಶರೀರದ ಜ್ವರವನ್ನು ಅನುಸರಿಸಿ ದುಃಖ
ಹಡುವನು?' ಆತ್ಮಾನಂ ಚೇದ್ವಿಜಾನೀಯಾದ ಯಮತಿ ಪೂರುಷಃ । ಕಿಮಿ.
ಚೈನ್ ಕಸ್ಯ ಕಾಮಾಯ ಶರೀರವನುಸಂಜ್ವ ರೇತ್ । (ಬೃಹದಾರಣ್ಯಕ ಉ.
೪೪. ೧೨) ಎಂದು ಶ್ರುತಿಯು ಹೇಳುತ್ತದೆ.]
 
ಕಾರ್ಯಪ್ರವರ್ಧನಾಜ-ಪ್ರವೃದ್ಧಿಃ ಪರಿದೃಶ್ಯತೇ ।
ಕಾರ್ಯನಾಶಾಜನಾಶಸ್ತ ಸ್ಮಾತ್ಕಾರ್ಯ೦
 
ನಿರೋಧಯೇತ್ ॥ ೩೧೧ ॥
 
ಕಾರ್ಯ- ಪ್ರವರ್ಧನಾತ್ ಕಾಮ್ಯ ಕರ್ಮಗಳು ಪ್ರವರ್ಧಿಸುವುದರಿಂದ ಬೀಜ-
ಪ್ರವೃದ್ಧಿ : - ವಿಷಯವಾಸನೆಯೆಂಬ ಬೀಜಗಳ ಪ್ರವೃದ್ಧಿಯು ಪರಿದೃಶ್ಯತೇ ಕಂಡು
ಬರುತ್ತದೆ; ಕಾರ್ಯನಾಶಾತ್ ಕರ್ಮನಾಶದಿಂದ ಬೀಜನಾಶಃ ಬೀಜಗಳ ನಾಶವು
[ಕಂಡುಬರುತ್ತದೆ]; ತಸ್ಮಾತ್ ಆದುದರಿಂದ ಕಾರ್ಯ೦- ಕರ್ಮವನ್ನು ನಿರೋಧ.
ಯೇತ್ - ತಡೆಯಬೇಕು.
 
z
 
೩೧೧. ಕಾಮ್ಯ ಕರ್ಮವು ಪ್ರವರ್ಧಿಸಿದರೆ ವಿಷಯವಾಸನೆಯೆಂಬ ಬೀಜ
ಗಳ ಪ್ರವೃದ್ಧಿಯೂ ಕಂಡುಬರುತ್ತದೆ. ಕರ್ಮವು ಇಲ್ಲದಿದ್ದರೆ ಬೀಜವೂ
ಇರುವುದಿಲ್ಲ. ಆದುದರಿಂದ ಕರ್ಮವನ್ನು ತಡೆಯಬೇಕು.
 

 
ವಾಸನಾವೃದ್ಧಿಃ ಕಾರ್ಯಂ ಕಾರ್ಯವೃದ್ಧಾ ಚ ವಾಸನಾ ।
ವರ್ಧತೇ ಸರ್ವಥಾ ಪುಂಸಃ ಸಂಸಾರೋ ನ ನಿವರ್ತತೇ ॥ ೩೧೨ ॥
 
ವಾಸನಾವೃದ್ಧಿತಃ- ವಿಷಯವಾಸನೆಯ ವೃದ್ಧಿಯಿಂದ ಕಾರ್ಯಂ ಕರ್ಮವೂ
ಕಾರ್ಯವೃದ್ಧಾ = ಕಾವ್ಯ ಕರ್ಮದ ವೃದ್ಧಿಯಿ
ಯಿಂದ ವಾಸನಾ ಚ = ವಾಸನೆಯೂ