This page has not been fully proofread.

ವಿವೇಕಚೂಡಾಮಣಿ
 
೧೧]
 
೩ 'ಮನಸ್ಸಿನಿಂದಲೇ ತನ್ನನ್ನು ಉದ್ಧರಿಸಿಕೊಳ್ಳಬೇಕು, ತನ್ನನ್ನು ಕುಗ್ಗಿಸಿಕೊಳ್ಳ
ಬಾರದು; ಏಕೆಂದರೆ (ಶುದ್ಧವಾದ) ಮನಸ್ಸೇ ತನ್ನ ಬಂಧು, (ವಿಷಯಗಳಲ್ಲಿ ಅನು
ರಕ್ತವಾದ) ಮನಸ್ಸೇ ತನ್ನ ಶತ್ರು' ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವ
ಸಾದಯೇತ್ । ಆತ್ಮವ ಹ್ಯಾತ್ಮನೋ ಬಂಧುರಾವ ರಿಪುರಾತ್ಮನಃ । (ಗೀತಾ
 
೬, ೫.)]
 

 
ಸಂನ್ಯಸ್ಯ ಸರ್ವಕರ್ಮಾಣಿ ಭವಬಂಧ-ವಿಮುಕ್ತಯೇ ।
ಯತ್ಯತಾಂ ಪಂಡಿತೈರ್ಧಿರೈರಾತ್ಮಾಭ್ಯಾಸ ಉಪಸ್ಥಿತೈಃ ॥ ೧೦ ॥
 
ಸರ್ವಕರ್ಮಾಣಿ - ಸರ್ವಕರ್ಮಗಳನ್ನು ಸಂನ್ಯಸ್ಯ - ತ್ಯಜಿಸಿ ಭವಬಂಧ-
ವಿಮುಕ್ತಯೇ- ಸಂಸಾರವೆಂಬ ಕಟ್ಟಿನಿಂದ ಬಿಡಿಸಿಕೊಳ್ಳಲು ಆತ್ಮಾಭ್ಯಾಸೇ – ಆತ್ಮ
ಚಿಂತನದಲ್ಲಿ ಉಪಸ್ಥಿತೈಃ = ನಿಷ್ಠರಾದ ಧೀರೈಃ = ಧೀಮಂತರಾದ ಪಂಡಿತೈಃ-ವಿವೇಕಿ
ಗಳಿ೦ದ ಯತ್ಯ ತಾಂ = ಪ್ರಯತ್ನವು ಮಾಡಲ್ಪಡಲಿ.
 
೧೦. ಆತ್ಮಚಿಂತನದಲ್ಲಿ ನಿಷ್ಠೆಯುಳ್ಳವರೂ ಧೀಮಂತರೂ ಆದ
ವಿವೇಕಿಗಳು ಸರ್ವಕರ್ಮಗಳನ್ನೂ ತ್ಯಜಿಸಿ ಸಂಸಾರವೆಂಬ ಕಟ್ಟಿನಿಂದ ಬಿಡಿಸಿ
ಕೊಳ್ಳಲು ಪ್ರಯತ್ನಿಸಲಿ.
 
[೧ ಬ್ರಹ್ಮವಿಷಯವನ್ನೇ ಯಾವಾಗಲೂ ಚಿಂತಿಸುತ್ತ, ಅದನ್ನೇ ಮಾತಾಡುತ್ತ,
ಅದಕ್ಕೆ ವಿರುದ್ಧವಾದ ಭಾವನೆಗಳನ್ನು ನಿರಾಕರಿಸುತ್ತ, ಅದರಲ್ಲೇ ತನ್ಮಯವಾಗಿರು
ವುದು ಆತ್ಮಾಭ್ಯಾಸ, ತಚ್ಚಿಂತನಂ ತತ್ಕಥನ ಮನ್ಯಂ ತತ್ವ ಬೋಧನಮ್ ।
ಏತದೇಕಪರತ್ವಂ ಚ ಬ್ರಹ್ಮಾಭ್ಯಾಸಂ ವಿದುರ್ಬುಧಾಃ।
 

 
ತಮ್ಮ ಬುದ್ಧಿಯನ್ನು ವಶದಲ್ಲಿಟ್ಟಿರುವವರು.
 
2
 
ಕರ್ಮಕಾಂಡದಲ್ಲಿ ಹೇಳಿರುವ ಕಾಮ್ಯಕರ್ಮಗಳನ್ನು.]
 
ಚಿತ್ತಸ್ಯ ಶುದ್ಧಯೇ ಕರ್ಮ ನ ತು ವಸ್ತೂಪಲಬ್ಧಯೇ ।
ವಸ್ತು ಸಿದ್ಧಿರ್ವಿಚಾರೇಣ ನ ಕಿಂಚಿತ್ ಕರ್ಮಕೋಟಿಭಿಃ । ೧೧ ।
 
ಕರ್ಮ - ಕರ್ಮವು ಚಿತ್ರಸ್ಯ - ಚಿತ್ರದ ಶುದ್ಧಯೇ - ಶುದ್ಧಿಗಾಗಿ, ವಸ್ತು.
ಉಪಲಬ್ಧಯೇ - ಪರವಸ್ತುವಿನ ಸಾಕ್ಷಾತ್ಕಾರಕ್ಕಾಗಿನ ತು- ಅಲ್ಲ; ವಸ್ತು ಸಿದ್ಧಿ-
ವಸ್ತು ಸಾಕ್ಷಾತ್ಕಾರವು ವಿಚಾರೇಣ - ವಿಚಾರದಿಂದ [ಉಂಟಾಗುವುದು], ಕರ್ಮ.
ಕೋಟಿಭಿಃ = ಕೋಟಿ ಕರ್ಮಗಳಿಂದಲೂ ನ ಕಿಂಚಿತ್ = ಏನೂ ಆಗುವುದಿಲ್ಲ.
 
೧೧. ಕರ್ಮವು ಚಿತ್ತ ಶುದ್ಧಿಗಾಗಿ ಇರುವುದೇ ಹೊರತು ಪರವಸ್ತುವಿನ
ಸಾಕ್ಷಾತ್ಕಾರಕ್ಕಾಗಿ ಅಲ್ಲ. ವಸ್ತುಸಾಕ್ಷಾತ್ಕಾರವು ವಿಚಾರದಿಂದ ಉಂಟಾಗು
ವುದೇ ವಿನಾ ಕೋಟಿಕರ್ಮಗಳಿಂದಲೂ ಆಗುವುದಿಲ್ಲ.