This page has not been fully proofread.

೧೪೬
 
ವಿವೇಕಚೂಡಾಮಣಿ
 
[೨೭೨
 
ಜಲಾದಿ-ಸಂಸರ್ಗ-ವಶಾತ್ ಪ್ರಭೂತ
ದುರ್ಗ೦ಧ-ಧೂತಾಗರು-ದಿವ್ಯವಾಸನಾ ।
ಸಂಘರ್ಷಣೇನೈವ ವಿಭಾತಿ ಸಮ್ಯಗ್
ವಿಧೂಯಮಾನೇ ಸತಿ ಬಾಹ್ಯ ಗಂಧ
 
। ೨೭೨
 
ಜಲ. ಆ ದಿ. ಸಂಸರ್ಗವಶಾತ್ - ನೀರು ಮೊದಲಾದುವುಗಳ ಸಂಪರ್ಕದ ವಶ
ದಿಂದ ಪ್ರಭೂತ-ದುರ್ಗಂಧ- ಧೂತ- ಅಗರು- ದಿವ್ಯವಾಸನಾ ಹೆಚ್ಚಾದ ದುರ್ವಾ
ಸನೆಯಿಂದ ತಿರಸ್ಕರಿಸಲ್ಪಟ್ಟ ಅಗರಿನ ದಿವ್ಯವಾಸನೆಯು ಸಂಘರ್ಷಣೇನ ಏವ ತೇಯು
ವುದರಿಂದಲೇ ಬಾಹ್ಯ ಗಂಧೇ ವಿಧೇಯನಾನೇ ಸತಿ = ಹೊರಗಿನ ದುರ್ಗಂಧವು
ಹೋದಮೇಲೆಯೇ ಸಮ್ಯಕ್ ಚೆನ್ನಾಗಿ ವಿಭಾತಿ ಪರಿಮಳ ಬೀರುತ್ತದೆ.
 
೨೭೨, ನೀರೇ ಮೊದಲಾದುವುಗಳ ಸಂಪರ್ಕದಿಂದ ಉಂಟಾದ ವಿಶೇಷ.
ದುರ್ಗಂಧದಿಂದ ಮುಚ್ಚಲ್ಪಟ್ಟಿರುವ ಅಗರಿನ ದಿವ್ಯವಾಸನೆಯು ಅದನ್ನು
ತೇದು ಹೊರಗಿನ ದುರ್ವಾಸನೆಯು ಹೋದ ಮೇಲೆಯೇ ಚೆನ್ನಾಗಿ ಪರಿಮಳ
ಬೀರುತ್ತದೆ.
 
ಅಂತಃಶ್ರಿತಾನಂತ-ದುರಂತವಾಸನಾ-
ಧೂಲೀ-ವಿಲಿಸ್ತಾ ಪರಮಾತ್ಮ-ವಾಸನಾ ।
ಪ್ರಜ್ಞಾತಿಸಂಘರ್ಷಣತೋ ವಿಶುದ್ಧಾ
 
ಪ್ರತೀಯತೇ ಚಂದನ-ಗಂಧವತ್ ಸ್ಪುಟಮ್ ॥೨೭೩॥
 
ಅಂತಃ- ಶ್ರಿತ. ಆನಂತ ದುರಂತ ವಾಸನಾ- ಧೂಲೀ, ಖಲಿಸ್ತಾ- ಅಂತಃಕರಣ
ವನ್ನಾಶ್ರಯಿಸಿಕೊಂಡಿರುವ ಬಹುವಿಧವೂ ದುಷ್ಪಲಪ್ರದವೂ ಆದ ದುರ್ವಾಸನೆಗಳ
ಧೂಳಿನಿಂದ ಮುಚ್ಚಲ್ಪಟ್ಟ ಪರಮಾತ್ಮ-ವಾಸನಾ - ಪರಮಾತ್ಮವಾಸನೆಯು ಪ್ರಜ್ಞಾ.
ಅತಿ ಸಂಘರ್ಷಣತಃ - ಪ್ರಜ್ಞೆಯನ್ನು ಚೆನ್ನಾಗಿ ತೇಯುವುದರಿಂದ ವಿಶುದ್ಧಾ - ಪರಿ
ಶುದ್ಧವಾಗಿ ಚಂದನಗಂಧವತ್ - ಚಂದನದ ಗಂಧದಂತೆ ಸ್ಪುಟಂ ಪ್ರತೀಯತೇ
ಚೆನ್ನಾಗಿ ಪ್ರಕಾಶಿಸುತ್ತದೆ.
 
೨೭೩. (ಹೀಗೆಯೇ) ಅಂತಃಕರಣವನ್ನು ಆಶ್ರಯಿಸಿಕೊಂಡಿರುವ ಬಹು
ವಿಧವೂ ದುಷ್ಪಲಪ್ರದವೂ ಆದ ದುರ್ವಾಸನೆಗಳ ಧೂಳಿನಿಂದ ಮುಚ್ಚಲ್ಪಟ್ಟ
ಪರಮಾತ್ಮವಾಸನೆಯು ಪ್ರಜ್ಞೆಯನ್ನು ಚೆನ್ನಾಗಿ ತೇಯುವುದರಿಂದ ಪರಿಶುದ್ಧ
ವಾಗಿ ಚಂದನದ ಗಂಧದಂತೆ ಪ್ರಕಾಶಿಸುತ್ತದೆ.
 
[೧ 'ಧೀಮಂತನಾದ ಬ್ರಾಹ್ಮಣನು ಆತ್ಮನನ್ನೇ ತಿಳಿದುಕೊಂಡು ಪ್ರಜ್ಞೆಯನ್ನು
ಅವಲಂಬಿಸಬೇಕು' ತಮೇವ ಧೀರೋ ವಿಜ್ಞಾಯ ಪ್ರಜ್ಞಾಂ ಕುರ್ವಿತ ಬ್ರಾಹ್ಮಣಃ