This page has been fully proofread once and needs a second look.

ಯಲ್ಲಿ ಬ್ರಹ್ಮಸ್ವರೂಪದಿಂದಲೇ ಯಾವನು ವಾಸಮಾಡುತ್ತಾನೆಯೊ, ಹೇ
ಶಿಷ್ಯನೆ, ಅವನಿಗೆ ಪುನಃ ಶರೀರವೆಂಬ ಗುಹೆಯಲ್ಲಿ ಪ್ರವೇಶವಿರುವುದಿಲ್ಲ.
 
['ವಿಜ್ಞಾನಮಯನೂ ಇಂದ್ರಿಯಗಳಲ್ಲಿರುವವನೂ ಬುದ್ಧಿಯಲ್ಲಿರುವ ಸ್ವಯಂ
ಜ್ಯೋತಿಯೂ ಆದ ಈ ಪುರುಷನು' ಯೋsಯಂ ವಿಜ್ಞಾನಮಯಃ ಪ್ರಾಣೇಷು
ಹೃದ್ಯಂತಜೋತಿಃ ಪುರುಷಃ (ಬೃಹದಾರಣ್ಯಕ ಉ. ೪. ೩. ೭)-ಇವೇ ಮೊದಲಾದ
ಶ್ರುತಿಗಳ ಪ್ರಕಾರ ಬುದ್ಧಿಯನ್ನು ಬಿಟ್ಟು ಆತ್ಮನನ್ನು ಅರಿತುಕೊಳ್ಳುವುದು ಅಶಕ್ಯ-
ವೆಂದು ಹೇಳಿದೆ.]
 
ಜ್ಞಾತೇ ವಸ್ತುನ್ಯಪಿ ಬಲವತೀ ವಾಸನಾಽನಾದಿರೇಷಾ
ಕರ್ತಾ ಭೋಕಾಕ್ತಾಽಪ್ಯಹಮಿತಿ ದೃಢಾ ಯಾಽಸ್ಯ ಸಂಸಾರಹೇತುಃ ।
ಪ್ರತ್ಯಗ್ ದೃಷ್ಟಾಽಽತ್ಮನಿ ನಿವಸತಾ ಸಾಽಪನೇಯಾ ಪ್ರಯತ್ನಾ-
ನ್ಮುಕ್ತಿಂ ಪ್ರಾಹುಸ್ತದಿಹ ಮುನಯೋ ವಾಸನಾ-ತಾನನಂವಂ ಯತ್ ॥ ೨೬೬ ॥
 
ಜ್ಞಾತೇ ವಸ್ತುನಿ ಅಪಿ = ಆತ್ಮನನ್ನು ಅರಿತುಕೊಂಡಮೇಲೂ, ಅಹಂ =
ನಾನು, ಕರ್ತಾ = ಕರ್ತೃ, ಅಪಿ = ಮತ್ತು, ಭೋಕ್ತಾ = ಭೋಕ್ತೃ, ಇತಿ = ಎಂಬ
ಯಾ = ಯಾವ, ಅನಾದಿಃ = ಅನಾದಿಯಾದ, ವಾಸನಾ = ಸಂಸ್ಕಾರವು, ಬಲವತೀ =
ಪ್ರಬಲವೂ, ದೃಢಾ = ದೃಢವೊ [ಆಗಿರುತ್ತದೆ]; ಏಷಾ = ಇದು, ಅಸ್ಯ = ಈ ಮನುಷ್ಯನ,
ಸಂಸಾರಹೇತುಃ = ಸಂಸಾರಕ್ಕೆ ಕಾರಣವಾಗಿರುತ್ತದೆ; ಪ್ರತ್ಯಗ್ ದೃಷ್ಟ್ಯಾ = ಪ್ರತ್ಯ-
ಗಾತ್ಮದೃಷ್ಟಿಯಿಂದ, ಆತ್ಮನಿ = ಆತ್ಮನಲ್ಲಿಯೇ, ನಿವಸತಾ = ನೆಲಸಿರುವ ಬ್ರಹ್ಮನಿಷ್ಠ-
ನಿಂದ, ಸಾ = ಆ ಸಂಸ್ಕಾರವು, ಪ್ರಯತ್ನಾತ್ = ಪ್ರಯತ್ನದಿಂದ, ಅಪನೇಯಾ =
ಪರಿಹರಿಸಿಕೊಳ್ಳತಕ್ಕದ್ದು ; ಯತ್ = ಯಾವುದು, ವಾಸನಾ-ತಾನನಂ = ಸಂಸ್ಕಾರದ
ಕೃಶತೆಯೊ, ತತ್ = ಅದನ್ನೇ, ಮುನಯಃ = ಮುನಿಗಳು, ಇಹ = ಇಲ್ಲಿ, ಮುಕ್ತಿಂ =
ಮುಕ್ತಿಯೆಂದು, ಪ್ರಾಹುಃ = ಹೇಳುತ್ತಾರೆ.
 
೨೬೬,. ಆತ್ಮನನ್ನು ಅರಿತುಕೊಂಡಮೇಲೂ 'ನಾನು ಕರ್ತೃ ಮತ್ತು
ಭೋಗ್ಯಕ್ತೃ' ಎಂಬ ಈ ಅನಾದಿ -ಸಂಸ್ಕಾರವು ಪ್ರಬಲವೂ ದೃಢವೂ ಆಗಿರುತ್ತದೆ.
ಇದೇ ಈ ಮನುಷ್ಯನ ಸಂಸಾರಕ್ಕೆ ಕಾರಣವಾಗಿರುತ್ತದೆ. ಪ್ರತ್ಯಗಾತ್ಮನೇ
ತಾನು ಎಂಬ ದೃಷ್ಟಿಯಿಂದ ಆತ್ಮನಲ್ಲಿಯೇ ನೆಲಸಿರುವ ಬ್ರಹ್ಮನಿಷ್ಠನು ಆ
ಸಂಸ್ಕಾರವನ್ನು ಪ್ರಯತ್ನಪೂರ್ವಕವಾಗಿ ಪರಿಹರಿಸಿಕೊಳ್ಳಬೇಕು. ಇಂಥ
ಸಂಸ್ಕಾರದ ಕ್ಷಯವನ್ನೇ ಮುನಿಗಳು ಇಲ್ಲಿ ಮುಕ್ತಿಯೆಂದು ಹೇಳುತ್ತಾರೆ.
 
ಅಹಂ ಮಮೇತಿ ಯೋ ಭಾವೋ ದೇಹಾಕ್ಷಾದಾವನಾತ್ಮನಿ ।
ಅಧ್ಯಾಸೋಽಯಂ ನಿರಸ್ತವ್ಯೂಯೋ ವಿದುಷಾ ಸ್ವಾತ್ಮನಿಷ್ಠಯಾ ॥ ೨೬೭ ॥