This page has been fully proofread once and needs a second look.

ಯತ್ = ಯಾವುದು, ಪರಾತ್ = ಹಿರಣ್ಯಗರ್ಭನಿಗಿಂತಲೂ, ಪರಂ = ಶ್ರೇಷ್ಠವೊ,
ಅನಪರಂ = ತನಗಿಂತ ಶ್ರೇಷ್ಠವಾದುದು ಇಲ್ಲದಿರುವುದೊ, ಚಕಾಸ್ತಿ = ಪ್ರಕಾಶಿಸು-
ತ್ತಿರುವುದೊ, ಪ್ರತ್ಯಕ್-ಏಕರಸಂ = ಸರ್ವಾಂತರವೊ, ಆತ್ಮ-ಲಕ್ಷಣಂ = ಆತ್ಮಲಕ್ಷಣ
ದಿಂದ ಕೂಡಿರುವುದೊ, ಸತ್ಯ-ಚಿತ್-ಸುಖಂ = ಸಚ್ಚಿದಾನಂದಸ್ವರೂಪವೊ, ಅನಂತಂ =
ಅನಂತವೋ, ಅವ್ಯಯಂ = ಅವ್ಯಯವೊ [ಉಳಿದುದು ಹಿಂದಿನಂತೆಯೆ].
 
೨೬೨. ಯಾವುದು ಹಿರಣ್ಯಗರ್ಭನಿಗಿಂತಲೂ ಶ್ರೇಷ್ಠವಾಗಿ ತನಗಿಂತ
ಶ್ರೇಷ್ಠವಾದುದಿಲ್ಲದೆ ಪ್ರಕಾಶಿಸುತ್ತಿರುವುದೊ, ಸರ್ವಾಂತರವೊ, ಆತ್ಮಲಕ್ಷಣ-
ದಿಂದ[^೧] ಕೂಡಿರುವುದೊ, ಸಚ್ಚಿದಾನಂದಸ್ವರೂಪವೊ, ಅನಂತವೊ, ಅವ್ಯ-
ಯವೊ--ಆ ಬ್ರಹ್ಮವೇ ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನ
ಮಾಡು.
 
[^೧] ಯಚ್ಚಾಜ್ಯೋತಿ ಯದಾದತ್ತೇ ಯಚ್ಚಾ ವಿಷಯಾನಿಹ ।
ಯಚ್ಚಾಸ್ಯ ಸಂತತೋ ಭಾವಃ ತಸ್ಮಾದಾತ್ಮಾ ಪ್ರಕೀರ್ತಿತಃ ॥ ಎಂದು
ಆತ್ಮನ ಲಕ್ಷಣವನ್ನು ಹೇಳಿದೆ.]
 
ಉಕ್ತಮರ್ಥಮಿಮಮಾತ್ಮನಿ ಸ್ವಯಂ
ಭಾವಯೇತ್ ಪ್ರಥಿತಯುಕ್ತಿಭಿರ್ಧಿಯಾ ।
ಸಂಶಯಾದಿರಹಿತಂ ಕರಾಂಬುವತ್
ತೇನ ತತ್ತ್ವನಿಗಮೋ ಭವಿಷ್ಯತಿ ॥ ೨೬೩ ॥
 
ಉಕ್ತಂ = ಇದುವರೆಗೆ ಹೇಳಿದ, ಇಮಮ ಅರ್ಥಂ = ಈ ತತ್ತ್ವವನ್ನು, ಸ್ವಯಂ =
ನೀನೇ, ಆತ್ಮನಿ = ನಿನ್ನಲ್ಲಿಯೇ, ಧಿಯಾ = ಬುದ್ಧಿಯಿಂದ, ಪ್ರಥಿತ-ಯುಕ್ತಿಭಿಃ =
ಪ್ರಸಿದ್ಧವಾದ ಯುಕ್ತಿಗಳ ಮೂಲಕ, ಭಾವಯೇತ್ = ಭಾವಿಸಬೇಕು; ತೇನ =
ಅದರಿಂದ, ಕರಾಂಬುವತ್ = ಅಂಗೈಯಲ್ಲಿರುವ ನೀರಿನಂತೆ, ಸಂಶಯಾದಿರಹಿತಂ =
ಸಂಶಯಾದಿಗಳಿಲ್ಲದೆ, ತತ್ವನಿಗಮಃ = ತಮ್ಮನಿರ್ಣಯವು, ಭವಿಷ್ಯತಿ = ಉಂಟಾಗು-
ವುದು.
 
೨೬೩. ಇದುವರೆಗೆ ಹೇಳಿದ[^೧] ಈ ತತ್ತ್ವವನ್ನು ಪ್ರಸಿದ್ಧ ಯುಕ್ತಿಗಳ[^೨]
ಮೂಲಕ ನಿನ್ನಲ್ಲಿಯೇ ಬುದ್ಧಿಯಿಂದ ಅನುಸಂಧಾನಮಾಡಬೇಕು. ಅಂಥ
ಅನುಸಂಧಾನದಿಂದ ಸಂಶಯವೇ ಮೊದಲಾದುವುಗಳಿಲ್ಲದೆ ಅಂಗೈಯಲ್ಲಿರುವ
ನೀರಿನಂತೆ ತತ್ತ್ವನಿರ್ಣಯವಾಗುವುದು.
 
[^೧] ಹಿಂದಿನ ಹತ್ತು ಶ್ಲೋಕಗಳಲ್ಲಿ.
[^೨] ಶ್ರುತಿಗಳಿಗೆ ವಿರುದ್ಧವಾಗದ.]