This page has not been fully proofread.

ಗಿಂತ ಬೇರೆಯಾಗಿರುವ, ನಿಷ್ಕಲಂ = ಅವಯವರಹಿತವಾದ, ನಿರ್-ಉಪಮಾನವತ್
ಹಿ = ಉಪಮಾನರಹಿತವಾದ, ತತ್ ಬ್ರಹ್ಮ... ಭಾವಯ [ಅನ್ವಯ ಹಿಂದಿನಂತೆಯೆ].
 
೨೫೬, ಭ್ರಮೆಯಿಂದ ಕಲ್ಪಿತವಾದ ಪ್ರಪಂಚವೆಂಬ ಅಂಶಕ್ಕೆ ಆಶ್ರಯ
ವಾಗಿರುವ, (ಆದರೆ) ತನಗೆ ಬೇರೆ ಯಾವ ಆಶ್ರಯವೂ ಇಲ್ಲದಿರುವ, ಸತ್
ಅಸತ್-- ಇವುಗಳಿಗಿಂತ ಬೇರೆಯಾಗಿರುವ, ಅವಯವರಹಿತವಾದ, ಯಾವು
ದೊಂದು ಉಪಮಾನವನ್ನೂ ಕೊಡುವುದಕ್ಕೆ ಆಗದಿರುವ ಬ್ರಹ್ಮವೇ ನೀನಾ
ಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
 
ಜನ್ಮವೃದ್ಧಿ-ಪರಿಣತ್ಯ ಪಕ್ಷಯ-
ವ್ಯಾಧಿ-ನಾಶನ-ವಿಹೀನಮವ್ವಮ್ ।
ವಿಶ್ವ ಸ್ಪಸೃಷ್ಟ್ಯವವಿಘಾತಕಾರಣಂ

ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ । ೨೫೭ ।।
 
ಜನ್ಮ -ವೃದ್ಧಿ- ಪರಿಣತಿ. -ಅಪಕ್ಷಯ -ವ್ಯಾಧಿ-ನಾಶನ -ವಿಹೀನಂ = ಜನ್ಮ ವೃದ್ಧಿ
ಪರಿಣಾಮ ಕ್ಷಯ ವ್ಯಾಧಿ ನಾಶ--ಇವುಗಳಿಲ್ಲದ, ಅವ್ಯಯಂ -= ವಿಕಾರಶೂನ್ಯವಾದ,
ವಿಶ್ವ -ಸೃಷ್ಟಿ. ಅವ -ಅವ-ವಿಘಾತ -ಕಾರಣಂ = ವಿಶ್ವದ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾದ,
ತತ್ ಬ್ರಹ್ಮ = ಆ ಬ್ರಹ್ಮವೇ, ತ್ವಂ ಆಸಿ = ನೀನಾಗಿರುವೆ, ಆತ್ಮನಿ ಭಾವಯ,.
 
೨೫೭. ಜನ್ಮ ವೃದ್ಧಿ ಪರಿಣಾಮ ಕ್ಷಯ ರೋಗ ವಿನಾಶ - ಇವು
ಗಳಿಲ್ಲದ, (ಆದುದರಿಂದಲೇ) ಅವ್ಯಯವಾದ, ವಿಶ್ವದ ಸೃಷ್ಟಿ ಸ್ಥಿತಿ-ಲಯಗಳಿಗೆ
ಕಾರಣವಾಗಿರುವ ಆ ಬ್ರಹ್ಮವೇ ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನು

ಸಂಧಾನಮಾಡು.
 
ಅಸ್ತಭೇದಮನಪಾಸ್ತ-ಲಕ್ಷಣಂ
ನಿಸ್ತರಂಗ-ಜಲರಾಶಿ-ನಿಶ್ಚಲಮ್ ।
ನಿತ್ಯ ಮುಕ್ತಮವಿಭಕ್ತ-ಮೂರ್ತಿ ಯಕ್ದ್
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ
 
೨೫೮ ॥
 
ಅಸ್ತಭೇದಂ = ಭೇದವಿಲ್ಲದ, ಅನಪಾಸ್ತ್ರ.ತ-ಲಕ್ಷಣಂ = ನಾಶವಾಗದ ಸ್ವರೂಪ
ವುಳ್ಳ, ನಿಸ್ತರಂಗ-ಜಲರಾಶಿ. -ನಿಶ್ಚಲಂ = ಅಲೆಗಳಿಲ್ಲದ ಸಮುದ್ರದಂತೆ ನಿಶ್ಚಲವಾಗಿ
ರುವ, ನಿತ್ಯಮುಕ್ತಂ=ಯಾವಾಗಲೂ ಮುಕ್ತವಾದ, ಅವಿಭಕ್ತಮೂರ್ತಿ = ಅಖಂಡ
ರೂಪವುಳ್ಳ, ಯತ್ ಬ್ರಹ್ಮ• • • ಭಾವಯ [ಅನ್ವಯ ಹಿಂದಿನಂತೆಯೆ,
 
].