This page has not been fully proofread.

೨೪೯]
 
ವಿವೇಕಚೂಡಾಮಣಿ
 
೧೩೩
 
ಸ ದೇವದತ್ತೊಯಮಿತೀಹ ವೈಕತಾ
ವಿರುದ್ಧಧರ್ಮಾಂಶಮಪಾಸ್ಯ ಕಥ್ಯತೇ ।
ಯಥಾ ತಥಾ ತತ್ತ್ವಮಸೀತಿವಾಕ್ಯ
ವಿರುದ್ಧಧರ್ಮಾನುಭಯತ್ರ ಹಿತ್ವಾ ॥ ೨೪೮ ॥
 
ಸಂಲಕ್ಷ ಚಿನ್ಮಾತ್ರತಯಾ ಸದಾತ್ಮನೋ
ರಖಂಡಭಾವಃ ಪರಿಚೀಯತೇ ಬುಧೈಃ ।
ಏವಂ ಮಹಾವಾಕ್ಯಶತೇನ ಕಥ್ಯತೇ
 
ಬ್ರಹ್ಮಾತ್ಮನೋರೈಕ್ಯಮಖಂಡಭಾವಃ ॥ ೨೪೯ ॥
 
ಹೇಳಲ್ಪಡು
 
ಸಃ ಅಯಂ ದೇವದತ್ತಃ = ಆ ದೇವದತ್ತನು ಇವನೇ ಇತಿ ಇಹ ವಾ =
ಎಂಬ ವಾಕ್ಯದಲ್ಲಿ ವಿರುದ್ಧ ಧರ್ಮಾಂಶಂ – ವಿರುದ್ಧವಾದ ಧರ್ಮಗಳ ಭಾಗವನ್ನು
ಅಪಾಸ್ಯ = ಬಿಟ್ಟು ಏಕತಾ - ಐಕ್ಯವು ಯಥಾ ಕಥ್ಯತೇ = ಹೇಗೆ
ಇದೆಯೊ ತಥಾ - ಹಾಗೆಯೇ ತತ್ ತ್ವಮ್ ಆಸಿ . ಅದೇ ನೀನಾಗಿರುವೆ ಇತಿ
ವಾಕ್ಯ - ಎಂಬ ವಾಕ್ಯದಲ್ಲಿಯೂ ಉಭಯತ್ರ- ಎರಡು ಕಡೆಯಲ್ಲಿಯೂ ವಿರುದ್ಧ.
ಧರ್ಮಾನ್ ಹಿತ್ವಾ - ವಿರುದ್ಧ ಭಾಗಗಳನ್ನು ಬಿಟ್ಟು ಚಿನ್ಮಾತ್ರತಯಾ - ಕೇವಲ
ಚಿದ್ರೂಪದಿಂದ ಸಂಲಕ್ಷ್ಯ-ಗುರುತಿಸಿ ಸತ್-ಆತ್ಮನೋ- ಈಶ್ವರ ಜೀವರ ಅಖಂಡ.
ಭಾವಃ = ಐಕ್ಯವು ಬುಧೈಃ – ಜ್ಞಾನಿಗಳಿಂದ ಪರಿಚೀಯತೇ - ಗ್ರಹಿಸಲ್ಪಡುತ್ತದೆ;
ಏವಂ = ಹೀಗೆ ಬ್ರಹ್ಮ. ಆತ್ಮನೋಃ = ಬ್ರಹ್ಮ ಆತ್ಮರ ಐಕ್ಯಂ - ಐಕ್ಯವು [ಮತ್ತು]
ಅಖಂಡಭಾವಃ = ಅಖಂಡಭಾವವು ಮಹಾವಾಕ್ಯಶತೇನ= ನೂರಾರು ಮಹಾವಾಕ್ಯ
ಗಳಿಂದ ಕಥ್ಯತೇ = ಹೇಳಲ್ಪಡುತ್ತದೆ.
 
೨೪೮ ೨೪೯, (ಆ ದೇವದತ್ತನು ಇವನೇ' ಎಂಬ ವಾಕ್ಯದಲ್ಲಿ ವಿರುದ್ಧ
ಧರ್ಮಗಳ ಭಾಗವನ್ನು ಬಿಟ್ಟು ಐಕ್ಯವನ್ನು ಹೇಗೆ ಸಾಧಿಸುತ್ತಾರೆಯೊ
ಹಾಗೆಯೇ ಅದೇ ನೀನಾಗಿರುವೆ' ಎಂಬ ವಾಕ್ಯದಲ್ಲಿ ಜ್ಞಾನಿಗಳು ಎರಡು
ಕಡೆಯಲ್ಲಿಯೂ ವಿರುದ್ಧ ಭಾಗಗಳನ್ನು ಬಿಟ್ಟು (ಜೀವ ಈಶ್ವರ ಇವರ
ಸ್ವರೂಪವಾದ) ಕೇವಲ ಚಿದ್ರೂಪವನ್ನೇ ಗುರುತಿಸಿ ಅವರ ಅಖಂಡಭಾವ
ವನ್ನು ಗ್ರಹಿಸುತ್ತಾರೆ. ಹೀಗೆ ನೂರಾರು ಉಪನಿಷದ್ ವಾಕ್ಯಗಳು ಜೀವ.
ಪರಮಾತ್ಮರ ಐಕ್ಯವನ್ನೂ ಅಖಂಡಭಾವವನ್ನೂ ಹೇಳುತ್ತವೆ.
 
[೧ ಆ ದೇಶ ಈ ದೇಶ, ಆ ಕಾಲ ಈ ಕಾಲ-ಎಂಬ.
 
೨ ಕಾರಣೋಪಾಧಿ ಕಾರ್ಯೋಪಾಧಿ, ಪ್ರತ್ಯಕ್ಷ- ಪರೋಕ್ಷತ್ವ, ಅದ್ವಿತೀಯತ್ವ-
ಸದ್ವಿತೀಯತ್ವ ಇವೇ ಮೊದಲಾದ ವಿರುದ್ಧ ಭಾವಗಳನ್ನು.]