This page has not been fully proofread.

೨೪೬]
 
ವಿವೇಕಚೂಡಾಮಣಿ
 
ಅಥ = ಈಗ ಆತಃ = ಆದುದರಿಂದ ಆದೇಶಃ = ನಿರ್ದೇಶವು ಇತಿ = ಎಂಬ
ಶ್ರುತಿಃ - ಉಪನಿಷದ್ವಾಕ್ಯವು ಸ್ವಯಂ = ತಾನಾಗಿಯೇ ಬ್ರಹ್ಮಣಿ - ಬ್ರಹ್ಮದಲ್ಲಿ
ಕಲ್ಪಿತಂ - ಕಲ್ಪಿತವಾದ ದ್ವಯಂ- ಎರಡು ಉಪಾಧಿಗಳನ್ನು ನಿಷೇಧತಿ ನಿಷೇಧಿಸು
ಇದೆ; ಶ್ರುತಿ ಪ್ರಮಾಣ ಅನುಗೃಹೀತ ಬೋಧಾತ್ - ಶ್ರುತಿಪ್ರಮಾಣದಿಂದ ಅನು
ಗೃಹೀತವಾದ ಜ್ಞಾನದಿಂದ ತಯೋಃ = ಅವೆರಡರ ನಿರಾಸಃ = ತಿರಸ್ಕಾರವು
ಏವಮ್ - ಹೀಗೆ ಕರಣೀಯಃ - ಮಾಡತಕ್ಕದ್ದು.
 
೧೩೧
 
೨೪೫. " ಈಗ ಆದುದರಿಂದ (ಬ್ರಹ್ಮದ) ನಿರ್ದೆಶ" ಎಂಬ ಶ್ರುತಿಯು
ಬ್ರಹ್ಮದಲ್ಲಿ ಕಲ್ಪಿತವಾದ ಈ ಎರಡು ಉಪಾಧಿಗಳನ್ನು ತಾನೇ ನಿಷೇಧಿಸುತ್ತದೆ.
ಶ್ರುತಿವ್ರಮಾಣದಿಂದ ಅನುಗೃಹೀತವಾದ ಜ್ಞಾನದಿಂದ ಅವೆರಡನ್ನೂ ಹೀಗೆ
 
ನಿರಾಸಮಾಡಬೇಕು.
 
(೧ "ಹೀಗಲ್ಲ ಹೀಗಲ್ಲ' ನೇತಿ ನೇತಿ (ಬೃಹದಾರಣ್ಯಕ ಉ. ೨. ೩. ೬).
 
- ಜೀವನ
ಮಾಯೆ-ಇವೆರಡನ್ನೂ
 
ಉಪಾಧಿಯಾದ ಪಂಚಕೋಶಗಳು, ಈಶ್ವರನ ಉಪಾಧಿಯಾದ
 
ನೇದಂ ನೇದಂ ಕಲ್ಪಿತತ್ವಾನ ಸತ್ಯಂ
 
ರಜ್ಜು ದೃಷ್ಟ-ವ್ಯಾಲವತ್ ಸ್ವಪ್ನವಮ್ ।
ಇತ್ಥಂ ದೃಶ್ಯಂ ಸಾಧುಯುಕ್ತಾ ವ್ಯಪೋಹ್ಯ
ಜೇಯಃ ಪಶ್ಚಾದೇಕಭಾವಸ್ತಯೋರ್ಯಃ ॥ ೨೪೬ ॥
 
ನ ಇದಂ- ಈ [ಮಾಯೆಯೂ] ಅಲ್ಲ ನ ಇದಂ= ಈ [ಪಂಚಕೋಶವೂ]
ಅಲ್ಲ, ರಜ್ಜು ದೃಷ್ಟ ವ್ಯಾಲವತ್ - ಹಗ್ಗದಲ್ಲಿ ಕಂಡುಬರುವ ಹಾವಿನಂತೆಯೂ ಸ್ವಪ್ನ.
ವತ್ ಚಮತ್ತು ಕನಸಿನಂತೆಯೂ ಕಲ್ಪಿತತ್ವಾತ್ ಕಲ್ಪಿತವಾದುದರಿಂದ ನ ಸತ್ಯಂ
ಸತ್ಯವಾದುದಲ್ಲ; ಇತ್ಥಂ - ಹೀಗೆ ದೃಶ್ಯಂ ದೃಶ್ಯವಾದುದನ್ನು ಸಾಧು ಯುಕ್ತಾ
ಸರಿಯಾದ ಯುಕ್ತಿಯಿಂದ ವ್ಯಪೋಹ-ನಿರಾಕರಿಸಿ ಪಶ್ಚಾತ್ ಅನಂತರ ತಯೋಃ
ಜೀವಾ ಪರರಿಗೆ ಏಕಭಾವಃ = ಐಕ್ಯವು ಜೇಯಃ = -
 
ತಿಳಿಯತಕ್ಕದ್ದು.
 
=
 
೨೪೬, (ಆತ್ಮನು) ಈ (ಮಾಯೆಯೂ) ಅಲ್ಲ, ಈ (ಪಂಚಕೋಶವೂ)
ಅಲ್ಲ. (ಇವೆರಡೂ) ಹಗ್ಗದಲ್ಲಿ ಕಂಡುಬರುವ ಹಾವಿನಂತೆಯೂ, ಕನಸಿ
ನಂತೆ ಕಲ್ಪಿತವಾಗಿರುವುದರಿಂದ ಸತ್ಯವಲ್ಲ. ಹೀಗೆ ದೃಶ್ಯವಾದ ಜಗತ್ತನ್ನು
ಸರಿಯಾದ ಯುಕ್ತಿಯಿಂದ ನಿರಾಕರಿಸಿ ಅನಂತರ ಈ ಜೀವ. ಪರಮಾತ್ಮರಿಗೆ
ಐಕ್ಯವನ್ನು ತಿಳಿದುಕೊಳ್ಳಬೇಕು.