This page has not been fully proofread.

ವಿವೇಕಚೂಡಾಮಣಿ
 
[೨೪೪
 
ತಯೋಃ = ಅವರಿಬ್ಬರಿಗೆ [ತೋರುವ] ಅಯಂ ವಿರೋಧಃ- ಈ ವಿರೋಧವು
ಉಪಾಧಿಕಲ್ಪಿತಃಉಪಾಧಿಯಿಂದ ಕಲ್ಪಿತವಾಗಿರುತ್ತದೆ; ಏಷಃ ಕಶ್ಚಿತ್ ಉಪಾಧಿ
ಈ ಯಾವ ಉಪಾಧಿಯೂ ನ ವಾಸ್ತವಃ = ವಾಸ್ತವವಾದುದಲ್ಲ; ಶೃಣು = ಕೇಳು,
ಈಶಸ್ಯ ಈಶ್ವರನಿಗೆ ಮಹದಾದಿ. ಕಾರಣಂ ಮಹತ್ ಮೊದಲಾದುವುಗಳಿಗೆ ಕಾರಣ
ವಾದ ಮಾಯಾ - ಮಾಯೆಯೂ, ಜೀವಸ್ಯ - ಜೀವನಿಗೆ ಕಾರ್ಯ೦ = ಕಾರ್ಯ
ವಾದ ಪಂಚಕೋಶಂ = ಪಂಚಕೋಶವೂ [ಉಪಾಧಿಯು].
 
೧೩೦
 
೨೪೩. ಜೀವ ಪರಮಾತ್ಮರಿಗೆ ತೋರುವ ಈ ವಿರೋಧವು ಉಪಾಧಿ
ಯಿಂದ ಕಲ್ಪಿತವಾಗಿರುತ್ತದೆ. ಈ ಯಾವ ಉಪಾಧಿಯೂ ವಾಸ್ತವವಾದು
ದಲ್ಲ. ಕೇಳು, ಈಶ್ವರನಿಗೆ ಮಹತ್
 
ಮೊದಲಾದುವುಗಳಿಗೆ ಕಾರಣವಾದ
 
ಮಾಯೆಯೂ, ಜೀವನಿಗೆ ಕಾರ್ಯವಾದ ಪಂಚಕೋಶವೂ (ಉಪಾಧಿಯು).
 
[೧ ಇದು ಮಾಯೆಯ ಮೊದಲನೆಯ ಕಾರ್ಯ
೨೧೨೫ನೆಯ ಶ್ಲೋಕದ ೨ನೆಯ ಟಿಪ್ಪಣಿಯನ್ನು ನೋಡಿ.
ಏತಾವುಪಾಧೀ ಪರಜೀವಯೋಸಯೋ
ಸಮ್ಯರಾಸೇ ನ ಪರೋ ನ ಜೀವಃ ।
ರಾಜ್ಯಂ ನರೇಂದ್ರಸ್ಯ ಭಟಸ್ಯ ಖೇಟಕ
ಆಯೋರಪೋಹೇ ನ ಭಟೋ
 
ನ ರಾಜಾ ॥ ೨೪೪ ।
 
ತಯೋಃ ಪರ.ಜೀವಯೋಃ = ಆ ಪರಮಾತ್ಮ ಜೀವಾತ್ಮರಿಗೆ ಏತ್ - ಈ
ಎರಡು ಉಪಾಧೀ = ಉಪಾಧಿಗಳಾಗಿವೆ, [ಅವುಗಳ ಸಮ್ಯಕ್ ನಿರಾಸೇ … ಚೆನ್ನಾಗಿ
ನಿರಾಸವಾದಾಗ ಪರಃ ನ ಈಶ್ವರನೂ ಅಲ್ಲ ಜೀವಃ ನ ಜೀವನೂ ಅಲ್ಲ; ನರೇಂದ್ರಸ್ಯ =
ರಾಜನಿಗೆ ರಾಜ್ಯಂ - ರಾಜ್ಯವೂ ಭಟಸ್ಯ = ಯೋಧನಿಗೆ ಖೇಟಕ - ಗುರಾಣಿಯೂ
[ಉಪಾಧಿಗಳು]; ತಯೋಃ -- ಅವುಗಳ ಅಪೋಹ - ಪರಿತ್ಯಾಗವಾದಾಗ ರಾಜಾ ನ
ರಾಜನೂ ಅಲ್ಲ ಭಟಃ ನ = ಯೋಧನೂ ಅಲ್ಲ.
 
೨೪೪, ಮಾಯೆ ಪಂಚಕೋಶ ಎಂಬ ಉಪಾಧಿಗಳನ್ನು ಚೆನ್ನಾಗಿ
ತಿರಸ್ಕರಿಸಿದರೆ ಈಶ್ವರನೂ ಅಲ್ಲ, ಜೀವನೂ ಅಲ್ಲ.
ರಾಜನಿಗೆ ರಾಜ್ಯವೂ
ಯೋಧನಿಗೆ ಗುರಾಣಿಯೂ ಉಪಾಧಿಗಳು; ಅವೆರಡೂ ಇಲ್ಲದಿದ್ದರೆ ರಾಜನೂ
ಅಲ್ಲ, ಯೋಧನೂ ಅಲ್ಲ.
 
ಅಥಾತ ಆದೇಶ ಇತಿ ಶ್ರುತಿಃ ಸ್ವಯಂ
 
ನಿಷೇಧತಿ ಬ್ರಹ್ಮಣಿ ಕಲ್ಪಿತಂ ದ್ವಯಮ್ ।
ಶ್ರುತಿ ಪ್ರಮಾಣಾನುಗೃಹೀತ ಬೋಧಾತ್
 
ತಯೋರ್ನಿರಾಸಃ ಕರಣೀಯ ಏವಮ್ !! ೨೪೫ ॥