This page has not been fully proofread.

೨೩೫]
 
ವಿವೇಕಚೂಡಾಮಣಿ
 
೨ ಅನಂತತ್ವವು ಹೋದರೆ ಸತ್ಯಂ ಜ್ಞಾನಮ್ ಅನಂತಂ ಬ್ರಹ್ಮ (ತೈತ್ತಿರೀಯ
ಉ. ೨. ೧) ಮೊದಲಾದ ವಾಕ್ಯಗಳು ಬಾಧಿತವಾಗುತ್ತವೆ.
 
೩ ಪರಮ ಆಪ್ತನೂ ಸರ್ವಜ್ಞನೂ ಆದ ಈಶ್ವರನ ಮಾತು ಸುಳ್ಳಾಗ ಕೂಡದು.
ಈಶ್ವರೋ
 
ವಸ್ತು ತತ್ತ್ವಜ್ಞ ನ ಚಾಹಂ ತೇಷ್ಟವಸ್ಥಿತ
ತಃ ।
ನ ಚ ಮತಾನಿ ಭೂತಾನೀವಮೇವ ವ್ಯಚೀಕ್ಲಪತ್ । ೨೩೩ ॥
 
೧೨೫
 
1
 
ವಸ್ತು ತತ್ತ್ವಜ್ಞಃ – ವಸ್ತುತತ್ತ್ವವನ್ನು ಬಲ್ಲ ಈಶ್ವರಃ – ಈಶ್ವರನು- ಅಹಂ-
ನಾನು ತೇಷು - ಅವುಗಳಲ್ಲಿ ನ ಅವಸ್ಥಿತಃ = ಇರುವುದಿಲ್ಲ, ಚಭೂತಾನಿ - ಮತ್ತು
ಪ್ರಾಣಿಗಳು ನ ಮತ್ ಸ್ಥಾನಿ - ನನ್ನಲ್ಲಿರುವುದಿಲ್ಲ ಇತಿ = ಎಂದು ಏವಮ್ ಏವ
ಹೀಗೆಯೇ ವ್ಯಪತ್- ವ್ಯವಸ್ಥೆ ಮಾಡಿದ್ದಾನೆ.
 
೨೩೩, ವಸ್ತುತತ್ತ್ವವನ್ನು ಬಲ್ಲ ಈಶ್ವರನು 'ನಾನು ಅವುಗಳಲ್ಲಿ ಇಲ್ಲ
ನನ್ನಲ್ಲಿ ಪ್ರಾಣಿಗಳು ಇರುವುದಿಲ್ಲ' ಎಂದು ಹೀಗೆಯೇ ವ್ಯವಸ್ಥೆ ಮಾಡಿದ್ದಾನೆ.
[ಪ್ರಪಂಚದ ಮಿಥ್ಯಾತ್ವವನ್ನು ಸಾಧಿಸಲು ಭಗವದ್ಗೀತೆಯನ್ನೂ ಉದಾಹರಿಸಿದೆ.
* ಭಗವದ್ಗೀತಾ ೯.೪.
 

 
೨ ಭಗವದ್ಗೀತಾ ೯. ೫.]
 
ಯದಿ ಸತ್ಯಂ ಭವೇದ್ವಿಶ್ವಂ ಸುಷುಪ್ತಾವು ಪಲಭ್ಯತಾಮ್ ।
ಯನ್ನೋಪಲಭ್ಯತೇ ಕಿಂಚಿದತೋsಸತ್ ಸ್ವಪ್ನವನಸಾ ॥ ೨೩೪ ॥
 
ವಿಶ್ವಂ ವಿಶ್ವವು ಸತ್ಯಂ ಭವೇತ್ ಯದಿ= ಸತ್ಯವಾಗಿರುವುದಾದರೆ ಸುಷುಪ್ತ
ಸುಷುಪ್ತಿಯಲ್ಲಿ ಉಪಲಭ್ಯತಾಂ=ಗೋಚರವಾಗಲಿ; ಯತ್ = ಯಾವ ಕಾರಣದಿಂದ
ಕಿಂಚಿತ್ - ಸ್ವಲ್ಪವೂ ನ ಉಪಲಭ್ಯತೇ = ಗೋಚರಿಸುವುದಿಲ್ಲವೋ ಅತಃ ಆ ಕಾರಣ
ದಿಂದಲೇ ಅಸತ್ = ಅಸತ್ತೆ, ಸ್ವಪ್ನವತ್ - ಸ್ವಪ್ನದಂತೆ ಮೃಷಾ = ಸುಳ್ಳು.
 
೨೩೪. ವಿಶ್ವವು ಸತ್ಯವಾಗಿರುವುದಾದರೆ ಸುಷುಪ್ತಿಯಲ್ಲಿ ಗೋಚರ
ವಾಗಲಿ! ಅಲ್ಲಿ ಸ್ವಲ್ಪವೂ ಗೋಚರಿಸುವುದಿಲ್ಲವಾದುದರಿಂದ ಅದು ಅಸದ್ವ
ಸುವೇ, ಸ್ವಪ್ನದಂತೆ ಸುಳ್ಳೇ
 
ಅತಃ ಪೃಥಜಾಸ್ತಿ ಜಗತ್ ಪರಾತ್ಮನಃ
ಪೃಥಕ್ ಪ್ರತೀತಿಸ್ತು ಮೃಷಾ ಗುಣಾದಿವತ್ ।
ಆರೋಪಿತಸ್ಯಾಸಿ ಕಿಮರ್ಥವತ್ತಾ
 
ಧಿಷ್ಟಾನಮಾಭಾತಿ ತಥಾ ಭ್ರಮೇಣ । ೨೩೫ ।