This page has not been fully proofread.

ವಿವೇಕಚೂಡಾಮಣಿ
 
4 ಆತ್ಮನಿಗೂ ಬ್ರಹ್ಮಕ್ಕೂ ಯಾವ ಭೇದವೂ ಇಲ್ಲ.
ಆಯಮಾತಾ ಬ್ರಹ್ಮ (ಮಾಂಡೂಕ್ಯ ಉ. ೧. ೨).
೭ ಪಾಪಪುಣ್ಯಗಳಿಲ್ಲದವನು.
 
2
 
೮ ಮೃತ್ಯುರಹಿತನೂ ಶೋಕರಹಿತನ' ವಿಮೃತ್ಯುರ್ನಿಶೋಕಃ (ಛಾಂದೋಗ್ಯ
ಉ. ೮, ೭. ೧).
 
೯ ಅವನು ಯಾವುದಕ್ಕೂ ಹೆದರುವುದಿಲ್ಲ' ನ ಬಿಭೇತಿ ಕುತಶ್ಚನೇತಿ (ತೈತ್ತಿ
ರೀಯ ಉ. ೨. ೯).]
 
೧೨೦
 
[೨೨೩
 
( ಈ ಆತ್ಮನು ಬ್ರಹ್ಮ
 
ಬ್ರಹ್ಮಾಭಿನ್ನತ್ವವಿಜ್ಞಾನಂ ಭವಮೋಕ್ಷಸ್ಯ ಕಾರಣಮ್ ।
ಯೇನಾದ್ವಿತೀಯಮಾನಂದಂ ಬ್ರಹ್ಮ ಸಂಪದ್ಯತೇ ಬುಧೈಃ ॥ ೨೨೩ ॥
 
ಬ್ರಹ್ಮ. ಅಭಿನ್ನತ್ವ, ವಿಜ್ಞಾನಂ - ಬ್ರಹ್ಮ ಆತ್ಮಕಜ್ಞಾನವೇ ಭವಮೋಕ್ಷಸ್ಯ -
ಸಂಸಾರಬಂಧದ ಬಿಡುಗಡೆಗೆ ಕಾರಣಂ = ಕಾರಣವು; ಯೇನ = ಯಾವುದರಿಂದ
ಅದ್ವಿತೀಯಂ= ಅದ್ವಯವೂ ಆನಂದಂ- ಆನಂದಸ್ವರೂಪವೂ ಆದ ಬ್ರಹ್ಮ ಬ್ರಹ್ಮವು
ಬುದ್ಧ - ಜ್ಞಾನಿಗಳಿಂದ ಸಂಪದ್ಯತೇ = ಹೊಂದಲ್ಪಡುತ್ತದೆಯೊ,
 
೨೨೩. ಜೀವಾತ್ಮ ಪರಮಾತ್ಮ- ಇವರ ಐಕ್ಯಜ್ಞಾನವೇ ಸಂಸಾರದಿಂದ
ಬಿಡುಗಡೆಯನ್ನು ಹೊಂದಲು ಕಾರಣವಾಗಿರುತ್ತದೆ. ಜ್ಞಾನಿಗಳು ಈ ಐಕ್ಯ
ಜ್ಞಾನದಿಂದಲೇ ಅನ್ವಯವೂ ಆನಂದಸ್ವರೂಪವೂ ಆದ ಬ್ರಹ್ಮವನ್ನು
ಸಾಕ್ಷಾತ್ಕರಿಸುತ್ತಾರೆ.
 
[೧ ನಾನೇ ಬ್ರಹ್ಮನಾಗಿದ್ದೇನೆ' ಅಹಂ ಬ್ರಹ್ಮಾಸ್ಮಿ (ಬೃಹದಾರಣ್ಯಕ ಉ.
೧. ೪. ೧೦). ]
 
ಬ್ರಹ್ಮಭೂತಸ್ತು ಸಂಸ್ಕೃತೈ ವಿದ್ವಾನ್ನಾವರ್ತತೇ ಪುನಃ ।
ವಿಜ್ಞಾತವ್ಯಮತಃ ಸಮೃಹ್ಮಾಭಿನ್ನತ್ವಮಾತ್ಮನಃ
 
॥ ೨೨೪ ॥
 
ತು. ಆದರೆ ಬ್ರಹ್ಮಭೂತಃ = ಬ್ರಹ್ಮಸ್ವರೂಪನಾದ ವಿದ್ವಾನ್ - ಜ್ಞಾನಿಯು
ಸಂಸ್ಕೃತ್ಯ - ಸಂಸಾರಕ್ಕೆ ಪುನಃ = ಮತ್ತೆ ನ ಆವರ್ತತೇ – ಬರುವುದಿಲ್ಲ; ಅತಃ =
ಆದುದರಿಂದ ಆತ್ಮನಃ – ತನ್ನ ಬ್ರಹ್ಮ ಅಭಿನ್ನತ್ವಂ = ಬ್ರಹ್ಮಕ್ಯವು ಸಮ್ಯಕ್ -
ಚೆನ್ನಾಗಿ ವಿಜ್ಞಾತವ್ಯಂ - ತಿಳಿಯಲ್ಪಡತಕ್ಕದ್ದು.
 
೨೨೪, ಆದರೆ ಬ್ರಹ್ಮಸ್ವರೂಪನಾದ ಜ್ಞಾನಿಯು ಪುನಃ ಸಂಸಾರಕ್ಕೆ
ಬರುವುದಿಲ್ಲ. ಆದುದರಿಂದ ತಾನು ಬ್ರಹ್ಮಕ್ಕಿಂತ ಬೇರೆಯಲ್ಲವೆಂಬುದನ್ನು
ಚೆನ್ನಾಗಿ ತಿಳಿದುಕೊಳ್ಳಬೇಕು.
 
[೧ ಅವನು ಹಿಂತಿರುಗುವುದಿಲ್ಲ' ನ ಚ ಪುನರಾವರ್ತ (ಛಾಂದೋಗ್ಯ ಉ.
೮. ೧೫. ೧). ]