This page has not been fully proofread.

ವಿವೇಕಚೂಡಾಮಣಿ
 
[೨೦೪
 
ತತ್ – ಆ ಸಮ್ಯಗ್ ಜ್ಞಾನವು ಆತ್ಮ. ಅನಾತ್ಮನೋಃ = ಆತ್ಮ, ಅನಾತ್ಮ-
ಇವುಗಳ ಸಮ್ಮಕ್ ವಿವೇಕೇನ ಏವ = ಸರಿಯಾದ ವಿವೇಚನದಿಂದಲೇ ಸಿದ್ಧತಿ =
ಸಿದ್ಧಿಸುತ್ತದೆ; ತತಃ - ಆದುದರಿಂದ ಪ್ರತ್ಯಗಾತ್ಮ. ಅಸದಾತ್ಮನೋಃ = ಪ್ರತ್ಯಗಾತ್ಮ
ಮತ್ತು ಮಿಥ್ಯಾತ್ಮ ಇವರ ವಿವೇಕಃ - ವಿವೇಚನವು ಕರ್ತವ್ಯಃ = ಮಾಡತಕ್ಕದ್ದು.
೨೦೩. ಜೀವಾತ್ಮ ಪರಮಾತ್ಮರ ಅಭೇದಜ್ಞಾನವು ಆತ್ಮ ಅನಾತ್ಮ
ವಸ್ತುಗಳ ವಿವೇಚನದಿಂದಲೇ ಸಿದ್ಧಿಸುತ್ತದೆ. ಆದುದರಿಂದ ಪ್ರತ್ಯಗಾತ್ಮ
ಮತ್ತು ಅನಾತ್ಮ- ಇವೆರಡರ ವಿವೇಚನವನ್ನು ಮಾಡಬೇಕು.
 
೧೧೦
 
ಜಲಂ ಪಂಕವದತ್ಯಂತಂ ಪಂಕಾಪಾಯೇ ಜಲಂ ಸ್ಪುಟಮ್ ।
ಯಥಾ ಭಾತಿ ತಥಾಽತ್ಮಾsಪಿ ದೋಷಾಭಾವೇ ಸ್ಪುಟಪ್ರಭಃ
 
॥ ೨೦೪ ॥
 
ಅತ್ಯಂತಂ ಪಂಕವತ್ ಜಲಂ = ಬಹಳ ಕೆಸರಾಗಿರುವ ನೀರು ಪಂಕ-
ಅಪಾಯೇ - ಕೆಸರು ಹೋದಮೇಲೆ ಯಥಾ - ಹೇಗೆ ಜಲಂ = ನೀರು ಸ್ಪುಟಂ
ಭಾತಿ – ಸ್ವಚ್ಛವಾಗಿ ತೋರುವುದೊ ತಥಾ - ಹಾಗೆಯೇ ಆತ್ಮಾ ಅಪಿ - ಆತ್ಮನೂ
ಕೂಡ ದೋಷ. ಅಭಾವೇ - ದೋಷವಿಲ್ಲದಿರುವಾಗ ಸ್ಪುಟಪ್ರಭಃ – ಸ್ವಚ್ಛವಾಗಿ
ಪ್ರಕಾಶಿಸುತ್ತಾನೆ.
 
೨೦೪. ಬಹಳ ಕೆಸರಾಗಿರುವ ನೀರು ಕೆಸರು ಹೋದಮೇಲೆ ಹೇಗೆ
ಸ್ವಚ್ಛವಾಗಿ ತೋರುವುದೊ ಹಾಗೆಯೇ ಆತ್ಮನೂ ಕೂಡ ದೋಷವಿಲ್ಲದಿರು
ವಾಗ ಸ್ಪುಟವಾಗಿ ಪ್ರಕಾಶಿಸುತ್ತಾನೆ.
 
[೧ (ಆತ್ಮನು) ನೀರಿನಂತೆ (ಸ್ವಚ್ಛನಾಗಿರುತ್ತಾನೆ)' ಸಲಿಲ ಏಕಃ (ಬೃಹದಾರಣ್ಯಕ
 
ಉ. ೪. ೩. ೩೨). ]
 
ಅಸನ್ನಿವೃತ್ ತು ಸದಾತ್ಮನಾ ಸ್ಪುಟಂ
ಪ್ರತೀತಿರೇತಸ್ಯ ಭವೇತ್ ಪ್ರತೀಚಃ ।
 
ತತೋ
 
ನಿರಾಸಃ ಕರಣೀಯ ಏವಾ-
ಸದಾತ್ಮನಃ ಸಾಧ್ಯಹಮಾದಿವಸ್ತುನಃ । ೨೦೫
 
ಅಸತ್ ನಿವೃತ್ ತು - ಅಸದ್ವಸ್ತುವು ತೊಲಗಿದಾಗ ಏತಸ್ಯ ಪ್ರತೀಚಃ =
ಈ ಪ್ರತ್ಯಗಾತ್ಮನಿಗೆ ಸದಾತ್ಮನಾ - ಸದ್ರೂಪದಿಂದ ಪ್ರತೀತಿಃ - ಸಾಕ್ಷಾತ್ಕಾರವು
ಭವೇತ್ = ಉಂಟಾಗುತ್ತದೆ; ತತಃ = ಆದುದರಿಂದ ಅಸದಾತ್ಮನಃ- ಅಸದ್ರೂಪವಾದ
ನಃ = ಅಹಂಕಾರಾದಿ ವಸ್ತುವಿನ ನಿರಾಸಃ = ನಿರಾಕರಣವು ಸಾಧು
 
ಅಹಮಾದಿ.
 
H
 
ಕರಣೀಯಃ ಏವ = ಮಾಡಲ್ಪಡಲೇ ಬೇಕು.
 
-