This page has been fully proofread once and needs a second look.



ಸ್ವನುಭವಃ = ಸ್ವಾತ್ಮಾನುಭವ, ಬ್ರಹ್ಮಾತ್ಮನಾ ಸಂಸ್ಥಿತಿಃ = ಬ್ರಹ್ಮಾತ್ಮ-ಭಾವದಲ್ಲಿರು-
ವುದು [ಇವು ಕ್ರಮವಾಗಿ ಒಂದಕ್ಕಿಂತ ಒಂದು ಅಧಿಕವಾದುವು]; ಮುಕ್ತಿಃ =
ಮೋಕ್ಷವು, ಶತಕೋಟಿ -ಜನ್ಮ ಸುಕೃತೈಃ ಪುಣೈಃ ವಿನಾ=ನೂರು ಕೋಟಿ ಜನ್ಮಗಳಲ್ಲಿ
ಸಂಪಾದಿಸಿದ ಪುಣ್ಯವಿಲ್ಲದೆ, ನೋ ಲಭ್ಯತೇ - ಲಭಿಸುವುದಿಲ್ಲ.
 
[]. ಪ್ರಾಣಿಗಳಿಗೆ ಮನುಷ್ಯ ಜನ್ಮವು ಕಷ್ಟಸಾಧ್ಯವಾದುದು, ಮನುಷ್ಯ
ಜನ್ಮಕ್ಕಿಂತಲೂ ಪುರುಷತ್ವವು ದುರ್ಲಭವು, ಪುರುಷತ್ವಕ್ಕಿಂತಲೂ ಬ್ರಾಹ್ಮಣ
ತ್ವವು ದುರ್ಲಭವು, ಬ್ರಾಹ್ಮಣತ್ವಕ್ಕಿಂತಲೂ ವೈದಿಕ-ಧರ್ಮಮಾರ್ಗದಲ್ಲಿ
ವಿಶ್ವಾಸವು ದುರ್ಲಭವು, ಇದಕ್ಕಿಂತಲೂ ಶಾಸ್ತ್ರಪಾಂಡಿತ್ಯವು ಅಧಿಕವಾ
ದುದು; ಆತ್ಮ ಅನಾತ್ಮ ಇವುಗಳ ವಿಚಾರ, ಸ್ವಾತ್ಮಾನುಭವ, ಬ್ರಹ್ಮಾತ್ಮ-
ಭಾವದಲ್ಲಿರುವುದು[^೧] (ಇವು ಕ್ರಮವಾಗಿ ಒಂದಕ್ಕಿಂತ ಒಂದು ಅಧಿಕವಾದುವು).
(ಇಂಥ) ಮೋಕ್ಷವು ನೂರು ಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯವಿಲ್ಲದೆ
ಲಭಿಸುವುದಿಲ್ಲ[^೨]
[೧ ಅಹಂ ಬ್ರಹ್ಮಾಸ್ಮಿ ಎಂಬ ಸ್ಥಿತಿಯಲ್ಲಿರುವುದು.
[೨ ಆದುದರಿಂದ ಸರ್ವದಾ ಪುಣ್ಯವನ್ನು ಸಂಪಾದಿಸಲು ಪ್ರಯತ್ನಿಸಬೇಕು.]
 
ದುರ್ಲಭಂ ತ್ರಯಮೇವೈತದ್ದ್ಯೆ ವಾನುಗ್ರಹ-ಹೇತುಕಮ್ ।
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷ-ಸಂಶ್ರಯಃ ॥ ೩ ॥
 
ದೈವಾನುಗ್ರಹ - ಹೇತುಕಂ= ಭಗವಂತನ ಅನುಗ್ರಹವೇ ಕಾರಣವಾಗಿರುವ,
ಏತತ್ ತ್ರಯಂ=ಈ ಮೂರು, ದುರ್ಲಭಂ ಏವ=ಕಷ್ಟ ಸಾಧ್ಯವೇ; ಮನುಷ್ಯತ್ವಂ =
ಮನುಷ್ಯ ಜನ್ಮ, ಮುಮುಕ್ಷುತ್ವಂ = ಮೋಕ್ಷೇಚ್ಛೆ, ಮಹಾಪುರುಷ-ಸಂಶ್ರಯಃ =
ಮಹಾತ್ಮರ ಸಂಗ,
 
[]. ಭಗವಂತನ ಅನುಗ್ರಹವೇ ಕಾರಣವಾಗಿರುವ ಈ ಮೂರು ಕಷ್ಟ
ಸಾಧ್ಯವೇ: ಮನುಷ್ಯ ಜನ್ಮ, ಮೋಕ್ಷವನ್ನು ಪಡೆಯಬೇಕೆಂಬ ಇಚ್ಛೆ ಮತ್ತು
ಮಹಾತ್ಮರ ಸಂಗ (ಅಥವಾ ಆಶ್ರಯ).
 
[ಭಗವಂತನ ಅನುಗ್ರಹವಿಲ್ಲದಿದ್ದರೆ ಮನುಷ್ಯತ್ವವೇ ಮೊದಲಾದುವನ್ನು ಪಡೆಯು-
ವುದು ಕಷ್ಟ ಎಂದು ಭಾವ.]
 
ಲಬ್ಧ್ವಾ ಕಥಂಚಿನ್ನರಜನ್ಮ ದುರ್ಲಭಂ
ತತ್ರಾಪಿ ಪುಂಸ್ತ್ವಂ ಶ್ರುತಿ-ಪಾರದರ್ಶನಮ್ ।
ಯಸ್ತ್ವಾ ತ್ಮಮುಕ್ತೌ ನ ಯತೇತ ಮೂಢಧೀಃ
ಸ ಆತ್ಮಹಾ ಸ್ವಂ ವಿನಿಹಂತ್ಯಸದ್ಗ್ರಹಾತ್ ||೪||