This page has not been fully proofread.

ವಿವೇಕಚೂಡಾಮಣಿ
 
ಸ್ವನುಭವಃ – ಸ್ವಾತ್ಮಾನುಭವ ಬ್ರಹ್ಮಾತ್ಮನಾ ಸಂಸ್ಕೃತಿಃ = ಬ್ರಹ್ಮಾತ್ಮ-ಭಾವದಲ್ಲಿರು
ವುದು [ಇವು ಕ್ರಮವಾಗಿ ಒಂದಕ್ಕಿಂತ ಒಂದು ಅಧಿಕವಾದುವು; ಮುಕ್ತಿಃ =
ಮೋಕ್ಷವು ಶತಕೋಟಿ. ಜನ್ಮ ಸುಕೃತೈಃ ಪುಣೈಃ ವಿನಾ ನೂರು ಕೋಟಿ ಜನ್ಮಗಳಲ್ಲಿ
ಸಂಪಾದಿಸಿದ ಪುಣ್ಯವಿಲ್ಲದೆ ನೋ ಲಭ್ಯತೇ - ಲಭಿಸುವುದಿಲ್ಲ.
 
೨. ಪ್ರಾಣಿಗಳಿಗೆ ಮನುಷ್ಯ ಜನ್ಮವು ಕಷ್ಟಸಾಧ್ಯವಾದುದು, ಮನುಷ್ಯ
ಜನ್ಮಕ್ಕಿಂತಲೂ ಪುರುಷತ್ವವು ದುರ್ಲಭವು, ಪುರುಷತ್ವಕ್ಕಿಂತಲೂ ಬ್ರಾಹ್ಮಣ
ತ್ವವು ದುರ್ಲಭವು, ಬ್ರಾಹ್ಮಣತ್ವಕ್ಕಿಂತಲೂ ವೈದಿಕ.ಧರ್ಮಮಾರ್ಗದಲ್ಲಿ
ವಿಶ್ವಾಸವು ದುರ್ಲಭವು, ಇದಕ್ಕಿಂತಲೂ ಶಾಸ್ತ್ರಪಾಂಡಿತ್ಯವು ಅಧಿಕವಾ
ದುದು; ಆತ್ಮ ಅನಾತ್ಮ ಇವುಗಳ ವಿಚಾರ, ಸ್ವಾತ್ಮಾನುಭವ, ಬ್ರಹ್ಮಾತ್ಮ
ಭಾವದಲ್ಲಿರುವುದು (ಇವು ಕ್ರಮವಾಗಿ ಒಂದಕ್ಕಿಂತ ಒಂದು ಅಧಿಕವಾದುವು).
(ಇಂಥ) ಮೋಕ್ಷವು ನೂರು ಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯವಿಲ್ಲದೆ
ಲಭಿಸುವುದಿಲ್ಲ.
 
[೩
 
[೧ ಅಹಂ ಬ್ರಹ್ಮಾಸ್ಮಿ ಎಂಬ ಸ್ಥಿತಿಯಲ್ಲಿರುವುದು.
 
೨ ಆದುದರಿಂದ ಸರ್ವದಾ ಪುಣ್ಯವನ್ನು ಸಂಪಾದಿಸಲು ಪ್ರಯತ್ನಿಸಬೇಕು.]
ದುರ್ಲಭಂ ತ್ರಯಮೇವೈತವಾನುಗ್ರಹ-ಹೇತುಕಮ್ ।
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷ-ಸಂಶ್ರಯಃ ॥ ೩ ॥
 
ದೈವಾನುಗ್ರಹ ಹೇತುಕಂ= ಭಗವಂತನ ಅನುಗ್ರಹವೇ ಕಾರಣವಾಗಿರುವ
ಏತತ್ ತ್ರಯಂ-ಈ ಮೂರು ದುರ್ಲಭಂ ಏವ ಕಷ್ಟ ಸಾಧ್ಯವೇ; ಮನುಷ್ಯತ್ವಂ =
ಮನುಷ್ಯ ಜನ್ಮ ಮುಮುಕ್ಷುತ್ವಂ = ಮೋಬೈ ಮಹಾಪುರುಷ ಸಂಶ್ರಯಃ =
ಮಹಾತ್ಮರ ಸಂಗ,
 
೩. ಭಗವಂತನ ಅನುಗ್ರಹವೇ ಕಾರಣವಾಗಿರುವ ಈ ಮೂರು ಕಷ್ಟ
ಸಾಧ್ಯವೇ: ಮನುಷ್ಯ ಜನ್ಮ, ಮೋಕ್ಷವನ್ನು ಪಡೆಯಬೇಕೆಂಬ ಇಚ್ಛೆ ಮತ್ತು
ಮಹಾತ್ಮರ ಸಂಗ (ಅಥವಾ ಆಶ್ರಯ).
 
[ಭಗವಂತನ ಅನುಗ್ರಹವಿಲ್ಲದಿದ್ದರೆ ಮನುಷ್ಯತ್ವವೇ ಮೊದಲಾದುವನ್ನು ಪಡೆಯು
ವುದು ಕಷ್ಟ ಎಂದು ಭಾವ.]
 
ಲಾ ಕಥಂಚಿನ್ನರಜನ್ಮ ದುರ್ಲಭಂ
 
ತತ್ರಾಪಿ ಪುಂಸ್ಕೃಂ ಶ್ರುತಿ-ಪಾರದರ್ಶನಮ್ ।
ಯಾತ್ಮಮುಕ್ತ ನ ಯತೇತ ಮೂಢಧೀ
ಸ ಆತ್ಮಹಾ ಸ್ವಂ ವಿನಿಹಂತ್ಯ ಸಹಾತ್