This page has not been fully proofread.

೧೦೬
 
ವಿವೇಕಚೂಡಾಮಣಿ
 
[೧೯೫
 
೧೯೪, ಶ್ರೀಗುರುವು ಹೇಳಿದನು- ಎಲೈ ಬುದ್ಧಿವಂತನೆ, ನೀನು ಚೆನ್ನಾಗಿ
ಪ್ರಶ್ನಿಸಿರುವೆ. ಅದನ್ನು ಸಾವಧಾನವಾಗಿ ಕೇಳು: ಭ್ರಾಂತಿಯಿಂದ ಮೋಹಿತ
ರಾದವರ ಕಲ್ಪನೆಯು ನಿಜವಾಗುವುದಿಲ್ಲ.
 
ಭ್ರಾಂತಿಂ ವಿನಾ ತ್ವಸಂಗಸ್ಯ ನಿಯಸ್ಯ ನಿರಾಕೃರ್ತೇ ।
ನ ಘಟೇತಾರ್ಥಸಂಬಂಧ ನಭಸೋ ನೀಲತಾದಿವತ್ ॥ ೧೯೫
 
ತು- ಆದರೆ ಅಸಂಗಸ್ಯ - ಅಸಂಗನಾದ ನಿಯಸ್ಯ - ನಿಷ್ಕ್ರಿಯನಾದ
ನಿರಾಕೃತೇ ನಿರಾಕಾರನಾದ [ಆತ್ಮನಿಗೆ] ಭ್ರಾಂತಿಂ ವಿನಾ-ಭ್ರಾಂತಿಯನ್ನು ಬಿಟ್ಟರೆ
ನಭಸಃ=ಆಕಾಶಕ್ಕೆ ನೀಲತಾದಿವತ್ - ನೀಲತ್ವವೇ ಮೊದಲಾದುವುಗಳ ಸಂಬಂಧದ
ಹಾಗೆ- ಅರ್ಥಸಂಬಂಧಃ = ದೃಶ್ಯ ವಸ್ತುಗಳ ಸಂಬಂಧವು ನ ಘಟೇತ ಉಂಟಾಗ
 
ಲಾರದು.
 
೧೯೫. ಆದರೆ ಅಸಂಗನೂ ನಿಷ್ಕ್ರಿಯನೂ ನಿರಾಕಾರನೂ ಆದ
ಆತ್ಮನಿಗೆ ಭ್ರಾಂತಿಯಿಂದಲ್ಲದೆ-ಆಕಾಶಕ್ಕೆ ನೀಲತ್ವವೇ ಮೊದಲಾದುವುಗಳ
ಸಂಬಂಧದಂತೆ- ದೃಶ್ಯವಸ್ತುಗಳ ಸಂಬಂಧವು ಉಂಟಾಗಲಾರದು.
 
[೧ ಈ ಪುರುಷನು ಅಸಂಗನು' ಅಸಂಗೋ ಹೈಯಂ ಪುರುಷಃ (ಬೃಹದಾರಣ್ಯಕ
 
ಉ. ೪. ೩. ೧೫).
 
೨ ಅವನು ನಿಷ್ಕಲನು ಮತ್ತು ನಿಷ್ಕ್ರಿಯನು' ನಿಷ್ಕಲಂ ನಿಯಮ್ (ಶ್ವೇತಾ.
ಶ್ವತರ ಉ. ೬. ೧೯).
 
೩ " ಅದು ಅಸ್ಕೂಲ, ಅನಣು' ಅಸ್ಕೂಲಮನಣು ಹದಾರಣ್ಯಕ ಉ.
 
೩. ೮. ೮).
 

 
* ಸ್ಕೂಲ. ಸೂಕ್ಷ್ಮ ಕಾರಣ- ಶರೀರಗಳಲ್ಲಿ ಇರುವ ಅಭಿಮಾನದಿಂದಲ್ಲದೆ.
 
೫ ಅವಿವೇಕಿಗಳು ಆಕಾಶವು ನೀಲವು, ಕೆಂಪುಬಣ್ಣವುಳ್ಳದ್ದು ಎಂದು ಕಲ್ಪಿಸಿಕೊಂಡರೆ
ಆ ಗುಣಗಳು ನಿಜವಾಗುವುದಿಲ್ಲ. ಹೀಗೆಯೇ ಪರಮಾತ್ಮನಲ್ಲಿ ಜೀವಭಾವವೂ ಕೂಡ
ಅಪ್ರಾಮಾಣಿಕವು.]
 
ಸ್ವಸ್ಯ ದ್ರಷ್ಟುರ್ನಿಗರ್ುಣಸ್ಯಾಕ್ರಿಯಸ್ಯ
 
ಪ್ರತ್ಯ ಗೋಧಾನಂದರೂಪಸ್ಯ ಬುದ್ದೇಃ ।
ಭ್ರಾಂತ್ಯಾ ಪ್ರಾಪೋ ಜೀವಭಾವೋ ನ ಸತ್ಯೋ
 
ಮೋಹಾಪಾಯೇ ನಾಸ್ತವಸ್ತು ಸ್ವಭಾವಾತ್ ॥ ೧೯೬ H
 
ದ್ರಷ್ಟುಃ ಸಾಕ್ಷಿಯಾದ ನಿರ್ಗುಣಸ್ಯ-ನಿರ್ಗುಣನಾದ ಅಕ್ರಿಯಸ್ಯ -ಕ್ರಿಯಾ
ಶೂನ್ಯನಾದ ಪ್ರತ್ಯಕ್ ಬೋಧ. ಆನಂದ ರೂಪಸ್ಯ = ಒಳಗೆ ಚಿದಾನಂದಸ್ವರೂಪನಾಗಿ