This page has not been fully proofread.

೧೯೪]
 
ವಿವೇಕಚೂಡಾಮಣಿ
 
೧೦೫
 
ಶಿಷ್ಯ ಉವಾಚ
 
ಭ್ರಮೇಣಾಪ್ಯನ್ಯಥಾ ವಾಸ್ತು ಜೀವಭಾವಃ ಪರಾತ್ಮನಃ ।
ತದುಪಾಧೇರನಾದಿತ್ವಾನ್ನಾನಾದೇರ್ನಾಶ ಇಷ್ಯತೇ ॥ ೧೯೨ ॥
ಅತೋಸ್ಯ ಜೀವಭಾವೋsಪಿ ನಿತೋ
 
ಭವತಿ ಸಂಸ್ಕೃತಿಃ ।
 
ನ ನಿವರ್ತೆತ ತನ್ನೋಕ್ಷಃ ಕಥಂ ಮೇ ಶ್ರೀಗುರೋ ವದ ॥ ೧೯೩ ॥
 
ಶಿಷ್ಯಃ - ಶಿಷ್ಯನು ಉವಾಚ - ಕೇಳಿದನು- ಶ್ರೀಗುರೋ - ಹೇ ಗುರುವೆ,
ಪರಾತ್ಮನಃ ಪರಮಾತ್ಮನಿಗೆ ಭ್ರಮೇಣ ಅಪಿ-ಭ್ರಾಂತಿಯಿಂದಾಗಲಿ ಅನ್ಯಥಾವಾ-
ಬೇರೆ ಯಾವ ಕಾರಣದಿಂದಾಗಲಿ ಜೀವಭಾವಃ = ಜೀವಭಾವವು ಅಸ್ತು = ಉಂಟಾ
ಗಿರಲಿ, ತತ್ ಉಪಾಧೇಃ ಅನಾದ್ವಿತಾತ್ – ಆ ಉಪಾಧಿಯು ಅನಾದಿಯಾಗಿರು
ವುದರಿಂದ ಅನಾದೇಃ - ಅನಾದಿಯಾದ ಅದಕ್ಕೆ ನಾಶಃ ನ ಇಷ್ಯತೇ = ನಾಶವನ್ನು
ಅಪೇಕ್ಷಿಸಕೂಡದಷ್ಟೆ? ಆತಃ = ಆದುದರಿಂದ ಅತ್ಯ- ಇವನ ಜೀವಭಾವಃ ಅಪಿ =
ಜೀವಭಾವವು ಕೂಡ ನಿತ್ಯಃ ಭವತಿ = ನಿತ್ಯವಾಗುತ್ತದೆ, ಸಂಸ್ಕೃತಿಃ – ಸಂಸಾರವು
ನ ನಿವರ್ತೆತ ಹೋಗುವುದಿಲ್ಲ; ತತ್ - ಹೀಗಿರುವಾಗ ಮೋಕ್ಷ – ಮೋಕ್ಷವು
ಕಥಂ - ಹೇಗೆ ಸಂಭವಿಸುತ್ತದೆ? [ಇದನ್ನು] ಮೇ - ನನಗೆ ವದ- ಹೇಳು.
 
-
 
೧೯೨-೧೯೩, ಶಿಷ್ಯನು ಪ್ರಶ್ನಿಸಿದನು: ಶ್ರೀಗುರುವೆ, ಪರಮಾತ್ಮನ ಜೀವ
ತ್ವವು ಭ್ರಾಂತಿಯಿಂದಾಗಲಿ ಅಥವಾ ಬೇರೆ ಯಾವ ಕಾರಣದಿಂದಾಗಲಿ
ಉಂಟಾಗಿರಲಿ, ಉಪಾಧಿಯು ಅನಾದಿಯಾಗಿರುವುದರಿಂದ ಅನಾದಿಯಾದ
 
ಪಾಧಿಗೆ ನಾಶವನ್ನು ಅಪೇಕ್ಷಿಸಕೂಡದಷ್ಟೆ? ಆದುದರಿಂದ ಇವನ ಜೀವ
ತ್ವವೂ ನಿತ್ಯವಾಗುತ್ತದೆ, ಸಂಸಾರವು ಹೋಗುವುದೇ ಇಲ್ಲ. ಹೀಗಿರುವಾಗ
ಇವನಿಗೆ ಮೋಕ್ಷವು ಹೇಗೆ ಸಂಭವಿಸುತ್ತದೆ. ಇದನ್ನು ನನಗೆ ಹೇಳು.
 
ಶ್ರೀಗುರುರುವಾಚ
 
ಸಮ್ಯಕ್ ದೃಷ್ಟಂ ತ್ವಯಾ ವಿದ್ವನ್ ಸಾವಧಾನೇನ ತಕ್ಷಣ ।
ಪ್ರಾಮಾಣಿಕೀ ನ ಭವತಿ ಭ್ರಾಂತ್ಯಾ ಮೋಹಿತಕಲ್ಪನಾ ॥ ೧೯೪ ।
 
ಶ್ರೀಗುರುಃ ಗುರುವು ಉವಾಚ - ಹೇಳಿದನು-ವಿದ್ವನ್ ಬುದ್ಧಿವಂತನೆ,
ತ್ವಯಾ = ನಿನ್ನಿಂದ ಸಮ್ಯಕ್ ದೃಷ್ಟಂ = ಚೆನ್ನಾಗಿ ಪ್ರಶ್ನಿಸಲ್ಪಟ್ಟಿತು, ತತ್ ಅದನ್ನು
ಸಾವಧಾನೇನ = ಸಾವಧಾನವಾಗಿ ಶೃಣು - ಕೇಳು; ಭ್ರಾಂತ್ಯಾ - ಭ್ರಾಂತಿಯಿಂದ
ಮೋಹಿತಕಲ್ಪನಾ = ಮೋಹಗೊಳಿಸಲ್ಪಟ್ಟವರ ಕಲ್ಪನೆಯು ಪ್ರಾಮಾಣಿಕೀ ನ
ಭವತಿ = ನಿಜವಾಗುವುದಿಲ್ಲ.