This page has not been fully proofread.

ವಿವೇಕಚೂಡಾಮಣಿ
 
೧೮೩]
 
ಮಾಡಿ, ಸರ್ವಕರ್ಮ - ಸಕಲಕರ್ಮಗಳನ್ನೂ ಸಂನ್ಯಸ್ಯ = ತ್ಯಜಿಸಿ ಯಃ
ಯಾವನು ಸತ್ ಶ್ರದ್ಧ ಯಾ - ಉತ್ತಮವಾದ ಶ್ರದ್ಧೆಯಿಂದ ಶ್ರವಣಾದಿನಿಷ್ಠ
ಶ್ರವಣಾದಿಗಳಲ್ಲಿ ನೆಲೆಗೊಳ್ಳುತ್ತಾನೆಯೊ ಸಃ = ಆತನು ಬುದ್ಧಃ = ಬುದ್ಧಿಯ
ರಜಃಸ್ವಭಾವಂ = ರಜಸ್ಸಿನ ಸ್ವಭಾವವನ್ನು ಧುನೋತಿ - ಹೋಗಲಾಡಿಸಿಕೊಳ್ಳು
ತಾನೆ.
 
೯೯
 
E
 
೧೮೨. ಮೋಕ್ಷದಲ್ಲಿಯೇ ಆಸಕ್ತಿಯಿಟ್ಟು, ವಿಷಯಗಳಲ್ಲಿರುವ ಅಭಿ
ಲಾಷೆಯನ್ನು ನಿರ್ಮೂಲಮಾಡಿ, ಸಕಲ ಕರ್ಮಗಳನ್ನೂ ತ್ಯಜಿಸಿ, ಉತ್ತಮ
ವಾದ ಶ್ರದ್ಧೆಯಿಂದ ಯಾವನು ಶ್ರವಣಾದಿಗಳಲ್ಲಿ ನೆಲೆಗೊಳ್ಳುತ್ತಾನೆಯೊ
ಅವನು ಮನಸ್ಸಿನಲ್ಲಿರುವ ರಜಸ್ಸಿನ ಸ್ವಭಾವವನ್ನು ನಾಶಪಡಿಸಿಕೊಳ್ಳುತ್ತಾನೆ.
 
[ಮನಸ್ಸಿನ ನೈರ್ಮಲ್ಯವು ಸಾತಿಶಯದಿಂದ ಉಂಟಾಗುತ್ತದೆ; ಸಾತಿಶಯವು
ಬುದ್ಧಿಯು ತನ್ನ ರಜಃಸ್ವಭಾವವನ್ನು ಹೋಗಲಾಡಿಸಿಕೊಳ್ಳುವ ವರೆಗೂ ಉಂಟಾಗು
ವುದಿಲ್ಲ. ಆದುದರಿಂದ ಮನಸ್ಸಿನಲ್ಲಿರುವ ರಾಜಸ, ಸ್ವಭಾವವನ್ನು ಕಳೆದುಕೊಳ್ಳ
 
ಬೇಕೆಂದು ಹೇಳಿದೆ.
 
೧ ಜೀವಬ್ರಹ್ಮ ಕ್ಯ ವಿಷಯವಾಗಿ ಗುರುಮುಖೇನ ಕೇಳುವುದು, ಮನನ-ನಿದಿ
ಧ್ಯಾಸನಗಳನ್ನು ಮಾಡುವುದು.]
 
ಮನೋಮಯೋ ನಾಪಿ ಭವೇತ್ ಪರಾತ್ಮಾ
ಹ್ಯಾದ್ಯಂತವಾತ್ ಪರಿಣಾಮಿ-ಭಾವಾತ್ ।
ದುಃಖಾತ್ಮಕತ್ವಾದ್ ವಿಷಯತ್ನ ಹೇತೋ-
ರ್ದಷ್ಟಾ ಹಿ ದೃಶ್ಯಾತ್ಮತೆಯಾ ನ ದೃಷ್ಟಃ ॥ ೧೮೩
 
=
 
ಮನೋಮಯಃ ಅಪಿ = ಮನೋಮಯಕೋಶವು ಕೂಡ ಆದಿ. ಅಂತ
ವಾತ್ = ಆದಿ ಅಂತಗಳನ್ನು ಪಡೆದಿರುವುದರಿಂದಲೂ ಪರಿಣಾಮಿ. ಭಾವಾತ್.
ಪರಿಣಾಮವನ್ನು ಹೊಂದುವುದರಿಂದಲೂ ದುಃಖಾತ್ಮಕತ್ವಾತ್ = ದುಃಖಸ್ವರೂಪ
ವಾಗಿರುವುದರಿಂದಲೂ ವಿಷಯ ಹೇತೋಃ = ದೃಶ್ಯವಾಗಿರುವುದರಿಂದಲೂ ಪರಾತ್ಮಾ
ನ ಭವೇತ್ = ಪರಮಾತ್ಮನಾಗುವುದಿಲ್ಲ; ಹಿ = ಏಕೆಂದರೆ ದೃಷ್ಟಾ - ದೃಷ್ಟವು
ದೃಶ್ಯಾತ್ಮತಯಾ - ದೃಶ್ಯ ಪದಾರ್ಥರೂಪದಿಂದ ನ ದೃಷ್ಟಃ = ನೋಡಲ್ಪಟ್ಟಿಲ್ಲ.
 
=
 
೧೮೩, ಮನೋಮಯಕೋಶವು ಪರಮಾತ್ಮನಲ್ಲ; ಏಕೆಂದರೆ ಇದಕ್ಕೆ
ಆದಿ.ಅಂತಗಳಿವೆ, ಪರಿಣಾಮವನ್ನು ಹೊಂದುವ ಸ್ವಭಾವವುಳ್ಳದ್ದು, ದುಃಖ
ಸ್ವರೂಪವಾದದ್ದು, ದೃಶ್ಯರೂಪವಾದದ್ದು. ದ್ರಷ್ಟವಾದ ಆತ್ಮನು ದೃಶ್ಯ
ಪದಾರ್ಥರೂಪದಿಂದ ಎಂದಿಗೂ ನೋಡಲ್ಪಟ್ಟಿಲ್ಲ.