This page has been fully proofread once and needs a second look.

ತೃತೀಯೋsಧ್ಯಾಯಃ
 
ತೃತೀಯೋsಧ್ಯಾಯಃ
 

 
ಪ್ರತಿಮಾಲಕ್ಷಣ
 

 
ಪ್ರತಿಷ್ಠಾಂ ಕಾರಯನ್ ವಿಷ್ಟೋಃ ಕುರ್ಯಾತ್ ಸುಪ್ರತಿಮಾಂ ಬುಧಃ ।

ಲೋಹೈರ್ವಾ ಶಿಲಯಾ ದಾರ್ವಾ ಮೃದಾ ವಾ5ಪಿ ಯಥಾಕ್ರಮಮ್ ॥1
 
75
 
೧ ॥
 
ಅರ್ಥ - ವಿಷ್ಣುವಿನ ಪ್ರತಿಷ್ಠೆಯನ್ನು ಮಾಡಿಸುವ ಭಕ್ತನು ಮೊದಲು ಲೋಹ-
ಗಳಿಂದಾಗಲೀ, ಶಿಲೆಯಿಂದಾಗಲೀ, ಮರ- ದಿಂದಾಗಲೀ, ಅಥವಾ ಮಣ್ಣಿನಿಂದಾಗಲೀ
ಲಕ್ಷಣಯುಕ್ತವಾದ ಪ್ರತಿಮೆಯನ್ನು[^1] ಮಾಡಿಸಬೇಕು.
 

 
[^
1]. ವಿಶೇಷಾಂಶ -
 

'ಪೂಜ್ಯಶ್ಚ ಭಗವಾನ್ ನಿತ್ಯಂ' ಎಂಬುದಾಗಿ ವಿಷ್ಣುವನ್ನು ಪೂಜಿಸ ಬೇಕೆಂದು ತಿಳಿಸಲಾಯಿತು.
ಅಪ್ರಬುದ್ಧರೂ, ಅಜ್ಞಾನಿಗಳೂ ಆದ ನಮ್ಮಂತಹವರಿಗೆ 'ಪ್ರತಿಮಾಪೂಜೆ' ವಿಹಿತವಾಗಿದೆ.

'ಪ್ರತಿಮಾಸು ಅಪ್ರಬುದ್ಧಾನಾಮ್' ಎಂದು ಹೇಳಲ್ಪಟ್ಟಿದೆ. ಆದರೆ ಶಾಸ್ತ್ರೋಕ್ತರೀತಿಯಲ್ಲಿ ಪ್ರತಿಷ್ಠೆ
ಮಾಡದ ಹಾಗೂ ಅಗ್ನಿ...…...... ಆಗದ ಪ್ರತಿಮೆಯನ್ನು ಪೂಜಿಸಲು ನಿಷೇಧವೂ ಇದೆ.

'
ಅಪ್ರತಿಷ್ಠಿತಬಿಂಬಸ್ಯ ಪೂಜನಂ ಸಿದ್ಧಿಹಾನಿಕೃತ್
 
'
ಆದುದರಿಂದ ಆಚಾರ್ಯರು ಈ ಮೂರನೆಯ ಅಧ್ಯಾಯದಲ್ಲಿ ಪ್ರತಿಮಾಲಕ್ಷಣ, ಪ್ರತಿಷ್ಠಾ
ವಿಧಾನ, ಪ್ರತಿಮಾನಿರ್ಮಾಣವಿಧಿ, ಪ್ರತಿಮಾಸ್ಥಾಪನೆಗಾಗಿ ದೇವಾಲಯನಿರ್ಮಾಣವಿಧಿ,
 
ಜೀರ್ಣ- ದೇವಾಲಯದ ಉದ್ಧಾರಾದಿಗಳನ್ನು ನಿರೂಪಿಸುತ್ತಿದ್ದಾರೆ.
 

ಪ್ರತಿಮೆಯನ್ನು ಸುವರ್ಣ, ರಜತ, ತಾಮ್ರ ಮೊದಲಾದ ಲೋಹ ಗಳಿಂದಲೂ; ಶಿಲೆ, ಮರ,
ಮಣ್ಣುಗಳಿಂದಲೂ ಮಾಡಿಸಬಹುದು. (ಪ್ರತಿಮೆಗಾಗಿ ಬಳಸುವ ಪದಾರ್ಥಕ್ಕನುಗುಣವಾಗಿ
ಫಲಗಳನ್ನೂ ಹೇಳಲಾಗಿದೆ. ತದ್ಯಥಾ?)
 

ಸುವರ್ಣಪ್ರತಿಮ – ಸರ್ವಸಂಪತ್ತನ್ನು ನೀಡುತ್ತದೆ.

ರಜತಪ್ರತಿಮೆ
 
-
 
- ಧನ-ಪಶು-ವಿಜಯ-ವಿಜ್ಞಾನಗಳನ್ನು ನೀಡುತ್ತದೆ.

ತಾಮ್ರಪ್ರತಿಮೆ – ಧರ್ಮ, ಬಹುಸೌಖ್ಯ ವೃದ್ಧಿಯನ್ನು ನೀಡುತ್ತದೆ.

ಶಿಲಾಪ್ರತಿಮೆ - ಖೇದವನ್ನು ಪರಿಹರಿಸುತ್ತದೆ.

ಮರದ ಪ್ರತಿಮೆ - ತೇಜಸ್ಸನ್ನು ವೃದ್ಧಿಮಾಡುತ್ತದೆ.

ಮಣ್ಣಿನ ಪ್ರತಿಮೆ - ನಿರಂತರಶುಭವನ್ನು ನೀಡುತ್ತದೆ.

ಹಿತ್ತಾಳೆಯ ಪ್ರತಿಮೆ - ಶತ್ರುನಾಶಕವಾಗಿದೆ.

'ಹಿರಣ್ಮಯೀ ಪ್ರತಿಕೃತಿಃ ಸರ್ವಸಂಪತ್ಕರೀ ಭವೇತ್ ।

ವಿತ್ತಂ ಪಶೂಂಶ್ಚ ವಿಜಯಂ ವಿಜ್ಞಾನಂ ರಾಜತೀ ಫಲಮ್ ॥
 
1