This page has not been fully proofread.

ದ್ವಿತೀಯೋಧ್ಯಾಯಃ
 
ಹೋಮದ ವಸ್ತುಗಳು, ಸಮಿತ್ತುಗಳು
 
ಆಜೈನ ವಾ ಪಾಯಸೇನ ಸಮಿದ್ದಿ; ಕ್ಷೀರಿಣಾಮಥ ।
ತಿಲೈರ್ವಾಥ ತಂಡುಲೈರ್ವಾಽಪಿ ಮಧುರೈಭಿರೇವ ವಾ ॥21
 
ಬ್ರಹ್ಮವೃಕ್ಷಸಮಿದ್ದೀರ್ವಾ ಸಮಿದ್ದಿರ್ವಾಽಮೃತೋದ್ಯವೈ: ।
ಅಮೃತಾಃ ಸಮಿಧೋ ಜೇಯಾಃ ಸರ್ವತ್ರ ಚತುರಂಗುಲಾಃ ॥22॥
 
೭೩
 
ભે ઈ
 
ಅರ್ಥ - ಅಗ್ನಿ ಹಾಗೂ ಅಗ್ನಂತರ್ಗತ ಪರಶುರಾಮನ ಪ್ರೀತಿಗೋಸ್ಕರವಾಗಿ
ಶಾಸ್ತ್ರದಲ್ಲಿ ಹೇಳಿದ ದ್ರವ್ಯಗಳಿಂದ ವಿಧಿವತ್ತಾಗಿ ಹೋಮಿಸಬೇಕು.
 
ಯಜ್ಞದ್ರವ್ಯಗಳು
 
ತುಪ್ಪ, ಚರು, ಎಳ್ಳು, ಪಾಯಸ, ಹಾಲನ್ನು ಸುರಿಸುವ
ಕ್ಷೀರಿವೃಕ್ಷಗಳ ಸಮಿತ್ತುಗಳು, ತುಪ್ಪ-ಹಾಲು-ಜೇನು ಇವುಗಳ ಮಿಶ್ರಣವೆನಿಸಿದ
ಮಧುರತ್ರಯ, ಪಾಲಾಶಸಮಿತ್ತು (ಮುತ್ತುಗ), ಅಮೃತ ಉಳ್ಳ ಸಮಿತ್ತು, ಅಶ್ವತ್ಥ
ಮೊದಲಾದವು ಹೋಮದ್ರವ್ಯಗಳು. ಅಮೃತವಳ್ಳಿಯಿಂದ ಹೋಮಿಸುವುದಾದರೆ
ಅದು ನಾಲ್ಕು ಅಂಗುಲ ಪ್ರಮಾಣವಿರಬೇಕು. ಇತರ ಸಮಿತ್ತುಗಳಿಗೆ ಈ
ನಿಯಮವಿರುವುದಿಲ್ಲ.
 
ಹೋಮವಿಧಿ ಉಪಸಂಹಾರ
 
ಏವಮೇವ ತು ದೀಕ್ಷಾಯಾಮಾನೈವಾಹುತಿಕ್ರಿಯಾ
 
ಪೂಜಾ ಚ ಕಾರ್ಯಾ ವಿಧಿವತ್ ಪೂರ್ವಂ ಸರ್ವಹುತೇಷ್ಟಪಿ ॥23॥
 
ಅರ್ಥ
 
ವೈಷ್ಣವದೀಕ್ಷೆಯನ್ನು ನೀಡುವಾಗ, ಶಿಷ್ಯನಿಗೆ ಪ್ರಣವಮಂತ್ರಾದಿ
ಹೋಮಕುಂಡನಿರ್ಮಾಣ, ಅಗ್ನಿಸ್ಥಾಪನೆ,
 
ಉಪದೇಶಕಾಲದಲ್ಲಿಯೂ
 
ಹೀಗೆ
 
ಹದಿನಾರು ಸಂಸ್ಕಾರಗಳು, ವಿಷ್ಣುವೀರ್ಯತ್ವಸಿದ್ಧಿಹೋಮಗಳನ್ನೂ ಮಾಡಬೇಕು.
 
ಹದಿನಾರು ಸಂಸ್ಕಾರಗಳನ್ನು ವ್ಯಾಹೃತಿಯಿಂದಲೇ ಮಾಡಬೇಕು.
 
'ಅಗ್ನಃ ಗರ್ಭಾಧಾನಾಖ್ಯಂ ಕರ್ಮ ಸಂಪಾದಯಾಮಿ' ಇತ್ಯಾದಿಯಾಗಿ ಸಂಕಲ್ಪಿಸಿ,
ವ್ಯಾಹೃತಿದೇವತೆಗಳಾದ ವಾಸುದೇವಾದಿಗಳನ್ನು ಪುಷ್ಪದಿಂದ ಅರ್ಚಿಸಬೇಕು. ನಾಲ್ಕು
ವ್ಯಾಹೃತಿಗಳಿಂದ ನಾಲ್ಕು ಆಜ್ಯಾಹುತಿಗಳನ್ನು ನೀಡಬೇಕು. ನಂತರ 'ಗರ್ಭಾಧಾನ ಕೃತಂ
ಸ್ವಾಮಿನ್' ಎಂದು ಕೈ ಮುಗಿದು ಪ್ರಾರ್ಥಿಸಬೇಕು. ಇದೇ ರೀತಿ ಉಳಿದ ಸಂಸ್ಕಾರಗಳನ್ನು
 
ಮಾಡಬೇಕು.