This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 2
 
ಮೂಲಮಂತ್ರಸ್ಯ ಚಾಂಗಾನಾಂ ನ್ಯಾಸಃ ಸ್ನಾನಾದನಂತರಮ್ ।
ಪ್ರತಿಮಾಯಾಂ ಸನ್ನಿಧಿಕೃಚ್ಚಿಷ್ಟೇ ಮಾಹಾತ್ಮ ಕೃದ್ದವೇತ್ ॥11।
 
ಅರ್ಥ - ಹೀಗೆ ಪೂಜಾಪ್ರತಿಮೆಗೂ, ಪ್ರತಿಷ್ಠಿತ ಹಾಗೂ ಪ್ರತಿಷ್ಠಾಪಿಸಲ್ಪಡುವ
ಪ್ರತಿಮೆಗಳಿಗೂ ಕಲಶೋದಕದಿಂದ ಅಭಿಷೇಕಮಾಡಬೇಕು. ಹಾಗೆಯೇ ಸನ್ಯಾಸ
ದೀಕ್ಷೆಹೊಂದಲಿರುವ ಶಿಷ್ಯನಿಗೂ ಕಲಶೋದಕದಿಂದ ಅಭಿಷೇಕ ಮಾಡಬೇಕು.
ಸ್ನಾನಾನಂತರ ಪ್ರತಿಮೆ ಹಾಗೂ ಶಿಷ್ಯನ ಅಂಗಗಳಲ್ಲಿ ಅಕಾರಾದಿ ಅಕ್ಷರನ್ಯಾಸ
ತತ್ವನ್ಯಾಸಗಳನ್ನೂ ಮಾಡಬೇಕು. ಇದರಿಂದಾಗಿ ಪ್ರತಿಮೆಯಲ್ಲಿ ಸನ್ನಿಧಾನವುಂಟಾಗಿ
ಭಗವಂತನು ಅನುಗ್ರಹೋನ್ಮುಖನಾಗುವನು. ಶಿಷ್ಯನಲ್ಲಿ ಭಕ್ತಿಜ್ಞಾನಾದಿಮಹತ್ವ-
ವುಂಟಾಗುತ್ತದೆ.
 
ವ.ಟಿ. - ತತ್ ಫಲಮಾಹ - ಪ್ರತಿಮಾಯಾಮಿತ್ಯಾದಿನಾ ॥
 
ಟೀಕಾರ್ಥ ಹೀಗೆ ಅಭಿಷೇಕ, ಅಂಗನ್ಯಾಸಾದಿಗಳಿಂದ ಲಭಿಸುವ ಫಲವನ್ನು
ಪ್ರತಿಮಾಯಾಂ ಇತ್ಯಾದಿಗಳಿಂದ ಹೇಳುವರು.
 
ಮೂಲಮಂತ್ರಜಪಿಸಿ ಅಭಿಷೇಕವನ್ನು ಮಾಡಿ ನಂತರವೂ ಯಥಾಶಕ್ತಿ ಮೂಲಮಂತ್ರ, ಪ್ರಣವ
ಆಯಾಯಾ ಮೂರ್ತಿಮಂತ್ರಗಳನ್ನೂ ಜಪಿಸಬೇಕು. ಹಾಗೂ ಪ್ರತಿಮೆಗಳ ಅಂಗೋಪಾಂಗಗಳಲ್ಲಿ
ತತ್ತ್ವನ್ಯಾಸ ಮಾತೃಕಾನ್ಯಾಸಗಳನ್ನೂ ಮಾಡಬೇಕು.
 
ಅಭಿಷೇಕಾತ್ ಪುರಾ ವಾಪಿ ಪಶ್ಚಾದ್ವಾ ಪರಮಾತ್ಮನಿ ।
 
ತತ್ವನ್ಯಾಸಾದಿಧ್ಯಾನಾಂತಂ ಕೃತ್ವಾ ಪೂಜಾಂ ಸಮಾಚರೇತ್ ॥ - ಪದ್ಯಮಾಲಾ ೭೯
 
'ಅರ್ಚಾಯಾಮ್' ಎಂದು ವಿಶೇಷವಾಗಿ ಹೇಳಿದ್ದರಿಂದ ಸನ್ಮಾಸದೀಕ್ಷೆಯನ್ನು ಹೊಂದುವ
ಶಿಷ್ಯನಿಗೆ ಅಭಿಷೇಕಕ್ಕೆ ಮೊದಲು ಸಾವಿರಜಪ ವಿಧಿಸಿರುವುದಿಲ್ಲ 'ಶಿಷ್ಯ ತು ಅಭಿಷೇಕಾತ್
ಪೂರ್ವ೦ ನ ಜಪೋ ಅಪೇಕ್ಷಿತಃ' – ತತ್ವಕಣಿಕಾ;
 
ಅಥವಾ, 'ಅರ್ಚಾಯಾಮ್' ಎಂಬುದನ್ನು ಉಪಲಕ್ಷಣಯಾ ಇಟ್ಟುಕೊಂಡು ಶಿಷ್ಯನಲ್ಲಿಯೂ
ಅಭಿಷೇಕಕ್ಕೆ ಮೊದಲು ಹಾಗೂ ಅನಂತರವೂ ಯಥಾಶಕ್ತಿ ಮೂಲಮಂತ್ರಜಪವನ್ನು
ಎಂದು ಛಲಾರೀಯ ವ್ಯಾಖ್ಯಾನದಲ್ಲಿ ಹೇಳಿದ್ದಾರೆ. "ಯದ್ವಾ,
ಅರ್ಚಾಯಾಮಿತ್ಯುಪಲಕ್ಷಣಮ್ ! ಶಿಷ್ಯಽಪಿ ಪ್ರತಿಮಾವತ್ ಜಪಾದಿಸರ್ವಂ ಕಾರ್ಯಂ''
1. ವಿಶೇಷಾಂಶ -
 
ಮಾಡಬಹುದು
 
ಶಿಷ್ಯನಿಗೆ ದೀಕ್ಷೆ ಕೊಡುವಾಗ ಮಾಡುವ ಕಲಶಪೂಜೆಯಲ್ಲಿ ಸನ್ಯಾಸಿಗಳು ತಾವು ನಾಲ್ಕೂ
ವೇದಗಳ ಆದ್ಯಂತ ಶ್ಲೋಕ(ಮಂತ್ರ)ಗಳನ್ನು ಸನ್ನಿಧಾನವಿಶೇಷಕ್ಕಾಗಿ ಪಠಿಸಬೇಕು. ದೀಕ್ಷಿತನಿಗೆ
ಅಭಿಷೇಕಮಾಡುವಾಗಲೂ ಮೊದಲು ಪುರೋಹಿತರೇ ಕಲಶೋದಕದಿಂದ ಪ್ರೋಕ್ಷಿಸುವರು.
ನಂತರ ಸಾಸನೀಡುವ ಗುರುಗಳೂ ಪ್ರೋಕ್ಷಿಸುತ್ತಾರೆ. ಇದಾದ ಮೇಲೆ ಅಬ್‌ಲಿಂಗಮಂತ್ರ-