This page has been fully proofread once and needs a second look.

ವ.ಟೀ.- ಪ್ರಾಣಾಯಾಮಃ - ಕುಂಭಕೇ ವಿಹಿತತ್ವಾದಿತಿ ಶೇಷಃ । ಕಿಂ ಕೃತ್ವಾ? ರೇಚಯಿತ್ವಾ । ವಾಮತಃ ಶ್ವಾಸಸ್ಯ ಅಧೋ ವಿಸರ್ಜನಂ ಕೃತ್ವಾ। ದಕ್ಷಿಣತಃ ಶ್ವಾಸಸ್ಯ ಊರ್ಧ್ವವಿಸರ್ಜನಂ ಕೃತ್ವಾ ; ದಕ್ಷಿಣತೋ ರೇಚನಮ್, ವಾಮತಃ ಪೂರಣಮಿತಿ ವಾ । ಕುಂಭಕಃ = ಶ್ವಾಸನಿರೋಧಃ । ತ್ರಿರ್ದ್ವಾದಶಾವೃತೈಃ = ಷಟ್ತ್ರಿಂಶೈಃ, ದ್ವ್ಯೇಕ- ದ್ವಾದಶಕೇನ ವಾ । ಶಕ್ತ್ಯಭಾವೇ ದ್ವಿರ್ದ್ವಾದಶಕೇನ = ಚತುರ್ವಿಂಶೈಃ । ಏಕಾದ್ವಾದಶೈಃ । ಗಾಯತ್ರ್ಯಾ ದಶತಾರಕೈಃ ಓಂ ಭೂರಿತ್ಯಾರಭ್ಯ - ಸುವರೋಮಿತ್ಯಂತೈಃ ಗಾಯತ್ರ್ಯಾ ದಶಪ್ರಣ:ವೈಃ ।
 
ಟೀಕಾರ್ಥ- ಪ್ರಾಣಾಯಾಮವನ್ನು ತಿಳಿಸುತ್ತಾರೆ. 'ಕುಂಭಕೇ' ಎಂಬುದರ ನಂತರ 'ವಿಹಿತತ್ವಾತ್' ಎಂಬ ಪದವನ್ನು ತಿಳಿಯಬೇಕು. ಸುಷುಮ್ನಾನಾಡಿಯಲ್ಲಿ ವಾಯುನಿರೋಧವು ವಿಧಿಸಲ್ಪಟ್ಟ ಕಾರಣದಿಂದ ಎಂದರ್ಥ. ಏನು ಮಾಡಿ ಕುಂಭಕ ಮಾಡಬೇಕು? ಎಂದರೆ 'ರೇಚನ ಮಾಡಿ' ಎಂದು ಉತ್ತರ. ಮೂಗಿನ ಎಡಭಾಗದ ರಂಧ್ರದಿಂದ ಒಳಗಿರುವ ಗಾಳಿಯನ್ನು ಹೊರದಬ್ಬಿ, ಬಲಭಾಗದ ರಂಧ್ರದಿಂದ ಶುದ್ಧಗಾಳಿಯನ್ನು ಮೇಲಕ್ಕಳೆದು- ಕೊಂಡು (ಒಳತೆಗೆದುಕೊಂಡು, ಕುಂಭಕವನ್ನು ಮಾಡಬೇಕು ಎಂದರ್ಥ. ಅಥವಾ, ಬಲಭಾಗದ ಹೊಳ್ಳೆಯಿಂದ ಗಾಳಿಯನ್ನು ಹೊರಗೆ ಹಾಕಿ, ಎಡಭಾಗದ ಹೊಳ್ಳೆಯಿಂದ ಶುದ್ಧಗಾಳಿಯನ್ನು ಸೆಳೆದುಕೊಳ್ಳಬಹುದು. ಯಾವ ಕ್ರಮವನ್ನು ಅನುಸರಿಸಿರುತ್ತೇ- ವೆಯೋ ಹಾಗೆಯೇ ಮುಂದುವರೆಸಿಕೊಂಡು ಹೋಗಬೇಕು.
 
ಶ್ಲೋಕದಲ್ಲಿರುವ ತ್ರಿರ್ಧ್ವಾದಶಾವೃತೈಃ ಎಂದರೆ ದ್ವಾದಶವನ್ನು ಮೂರರಿಂದ ಗುಣಿಸಿದರೆ ಬರುವಷ್ಟು ಎಂದರ್ಥ. ಅಂದರೆ 36 ಬಾರಿ ಅಥವಾ ದ್ವಿರ್ದ್ವಾದಶಕದಿಂದಲೂ, ಏಕದ್ವಾದಶಕದಿಂದಲು ಪ್ರಾಣಾಯಾಮ ಮಾಡಬಹುದು. ಇಪ್ಪತ್ತನಾಲ್ಕು ಬಾರಿ,
ಹನ್ನೆರಡುಬಾರಿಯಾದರೂ ಓಂಕಾರವನ್ನು ಉಚ್ಚರಿಸುತ್ತಾ ಪ್ರಾಣಾಯಾಮ ಮಾಡಬಹುದು.
ಶಕ್ತಿ ಇದ್ದವರು 36, ಅಶಕ್ತರಾದರೆ 24 ಅಥವಾ 12 ಬಾರಿ ಜಪಿಸ- ಬಹುದು.
ಅಥವಾ ಹತ್ತು ಓಂಕಾರಗಳಿರುವ ಗಾಯತ್ರೀಯಿಂದಲಾದರೂ ಪ್ರಾಣಾಯಾಮ ವಿಹಿತವಾಗಿದೆ. ಓಂಕಾರದಿಂದ ಪ್ರಾಣಾಯಾಮ ಸನ್ನ್ಯಾಸಿಗಳಿಗಾದರೆ,ದಶೋಂಕಾರ ಗಾಯತ್ರೀಯಿಂದ ಗೃಹಸ್ಥರಿಗೆ.
ದಶ೦ಕಾರಗಾಯತ್ರಿಯ ಸ್ವರೂಪವು ಹೀಗಿದೆ- 'ಓಂ(1) ಭೂಃ, ಓಂ(2) ಭುವಃ, ಓಂ(3)ಸ್ವಃ, ಓಂ(4) ಮಹಃ, ಓಂ(5) ಜನಃ, ಓಂ(6) ತಪಃ, ಓಂ(7) ಸತ್ಯಮ್, ಓಂ(8) ತತ್ಸವಿತುರ್ವರೇಣ್ಯಂ
ಭರ್ಗೊ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ । ಓಂ(9) ಆಪೋ ಜ್ಯೋತೀರಸೋsಮೃತಂ ಬ್ರಹ್ಮ ಭೂರ್ಭುವಃ ಸ್ವರೋಮ್(10) ಎಂಬುದಾಗಿ.
 

 
 
 
ಮುದ್ರೇಯಂ ಸರ್ವಪಾಪಘ್ನಾ ವಾನಪ್ರಸ್ಥಗೃಹಸ್ಥಯೋಃ ॥