This page has been fully proofread once and needs a second look.

ನ ಯಜ್ಞಾ ನ ಚ ತೀರ್ಥಾನಿ ನೋಪವಾಸವ್ರತಾನಿ ಚ।
ದೈವತಾನಿ ಚ ಸರ್ವಾಣಿ ತ್ರಾತುಂ ತಂ ಶಕ್ನುಯುಃ ಕ್ವಚಿತ್ ॥ ೭೨ ॥
 
ಅರ್ಥ- ಹರಿಯನ್ನು ಭಕ್ತಿಯಿಂದ ಪೂಜಿಸದ ವ್ಯಕ್ತಿಯು ಮಾಡಿದ ಯಜ್ಞಗಳಾಗಲೀ, ಪುಣ್ಯತೀರ್ಥಸೇವನೆಯಾಗಲೀ, ವ್ರತೋಪವಾಸ ಗಳಾಗಲೀ, ಸಮಸ್ತದೇವತೆಗಳಾಗಲೀ, ವಿಷ್ಣುವನ್ನು ಬಿಟ್ಟ ಆ ವ್ಯಕ್ತಿಯನ್ನು ರಕ್ಷಿಸಲಾರವು.
 
ಹರಿಸರ್ವೋತ್ತಮ ಪ್ರಶಂಸೆ - ಉಪಸಂಹಾರ
 
ಹರಿರ್ಹಿ ಸರ್ವದೇವಾನಾಂ ಪರಮ: ಪೂರ್ಣಶಕ್ತಿಮಾನ್ ।
ಸ್ವತಂತ್ರೋಽನ್ಯ ತದ್ವಶಾ ಹಿ ಸರ್ವೇऽತಃ ಸ ಜಗದ್ಗುರುಃ ॥ ೭೩ ॥
 
ಅರ್ಥ - ಸಮಸ್ತದೇವತೆಗಳಿಂದಲೂ ಶ್ರೀಹರಿಯೇ ಶ್ರೇಷ್ಠನೂ, ಪೂರ್ಣಶಕ್ತನೂ, ಸ್ವತಂತ್ರನೂ ಆಗಿರುವನು. ಉಳಿದ ಬ್ರಹ್ಮಾದಿ ದೇವತೆಗಳೆಲ್ಲರೂ ಅವನ ವಶರಾಗಿದ್ದು ಸೇವಕರಾಗಿರುತ್ತಾರೆ. ಆದ್ದರಿಂದಲೇ ಶ್ರೀಹರಿಯು 'ಜಗದ್ಗುರು' ಎನ್ನಿಸಿರುವನು.
 
ಬ್ರಹ್ಮಾದಯಶ್ಚ ತದ್ಭಕ್ತ್ಯಾ ಭಾಗಿನೋ ಭೋಗಮೋಕ್ಷಯೋಃ ।
ತಸ್ಮಾಜ್ಞೇಯಶ್ಚ ಪೂಜ್ಯಶ್ಚ ವಂದ್ಯೋ ಧೈಯಃ ಸದಾ ಹರಿಃ ॥ ೭೪ ॥
 
॥ ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತೇ ತಂತ್ರಸಾರಸಂಗ್ರಹೇ ಪ್ರಥಮೋsಧ್ಯಾಯಃ ॥
 
ಅರ್ಥ- ಬ್ರಹ್ಮಾದಿದೇವತೆಗಳೂ ಸಹ ಭಗವಂತನ ಆರಾಧನಾದಿ- ಗಳಿಂದಲೇ ಸುಖಾದಿಭೋಗಗಳಿಗೂ, ಕಡೆಗೆ ಮೋಕ್ಷಕ್ಕೂ ಭಾಗಿ- ಗಳಾಗುವರು. ಆದ್ದರಿಂದ ಭಗವಂತನ ಮಹಾಮಹಿಮೆಯನ್ನು ತಿಳಿದು ಅವನನ್ನೇ ಎಂದಿಗೂ ಪೂಜಿಸಬೇಕು. ವಂದಿಸಿ ಧ್ಯಾನಿಸ- ಬೇಕು.
 
ಇಲ್ಲಿಗೆ ತಂತ್ರಸಾರಸಂಗ್ರಹಸಟೀಕೆಯ ಕನ್ನಡಾನುವಾದದಲ್ಲಿ
ಮೊದಲನೆಯ ಅಧ್ಯಾಯವು ಮುಗಿದುದು
 
॥ಶ್ರೀಕೃಷ್ಣಾರ್ಪಣಮಸ್ತು!!