This page has been fully proofread once and needs a second look.

ಸಕೃತ್ ಸಕೃತ್ ಪುಷ್ಪಮನ್ಯೈರ್ಹೋಮಸ್ತಸ್ಯ ಚತುರ್ಗುಣಃ ॥೬೬ ॥
 
ವಿಸರ್ಜಯಿತ್ವಾ ನೈವೇದ್ಯಂ ಮೂಲೇನ ತ್ರಿಃಸಮರ್ಚ್ಯ ಚ ।
ಧೂಪದೀಪೌ ಪುನರ್ದತ್ವಾ ಪುನರ್ಮೂಲೇನ ಪೂರ್ವವತ್ ॥ ೬೭॥
 
ಅರ್ಥ ಈ ನಿತ್ಯಹೋಮವಾದ ಅನುಯಾಗದಲ್ಲಿ ಅಷ್ಟಾಕ್ಷರ ಮಂತ್ರದಿಂದ ಪುಷ್ಪಾಂಜಲಿ ಹಾಗೂ ಹೋಮಗಳನ್ನು ನೂರೆಂಟು ಬಾರಿ ಮಾಡಬೇಕು. ಬೇರೆ ದ್ವಾದಶಾಕ್ಷರಾದಿ ಮಂತ್ರಗಳು, ವರಾಹಾದಿ ಮುಂದೆ ಹೇಳುವ ಮಂತ್ರಗಳು, ಪೀಠಾವರಣದೇವತೆ- ಗಳಿಗೂ ಒಂದೊಂದು ಬಾರಿ ಪುಷ್ಪವನ್ನು ಅರ್ಪಿಸಿ, ನಾಲ್ಕು ನಾಲ್ಕು ಬಾರಿ ಅದೇ ಮಂತ್ರಗಳಿಂದ ಹೋಮಿಸಬೇಕು.
 
ನಂತರ ನೈವೇದ್ಯವನ್ನು 'ಅಮೃತಾಪಿಧಾನಮಸಿ' ಎಂದು ಉತ್ತರಾ ಪೋಶನ ನೈವೇದ್ಯವನ್ನು ವಿಸರ್ಜಿಸುವುದು. ಪುನಃ ಮೂಲಮಂತ್ರ ದಿಂದ ಮೂರುಬಾರಿ ಪುಷ್ಪಾಂಜಲಿಯನ್ನರ್ಪಿಸಿ ಪೂಜಿಸಬೇಕು.
 
ವ.ಟೀ.- ಪೀಠಾವರಣದೇವತಾಮಂತ್ರೈ: ಏಕವಾರಂ ಪುಷ್ಪ- ಸಮರ್ಪಣಮ್ । ಚತುರ್ವಾರಂ ಹೋಮ; ಮೂಲೇನ = ಅಷ್ಟಾಕ್ಷರೇಣ ।
 
ಟೀಕಾರ್ಥ- ಪೀಠಾವರಣದೇವತಾಮಂತ್ರಗಳಿಂದ ಒಂದೊಂದು ಬಾರಿ ಪುಷ್ಪ ಸಮರ್ಪಣೆ ಮಾಡಬೇಕು. ನಾಲ್ಕು ಬಾರಿ ಹೋಮ ಮಾಡಬೇಕು. ಇಲ್ಲಿರುವ ಮೂಲೇನ ಎಂದರೆ ನಾರಾಯಣಾಷ್ಟಾಕ್ಷರಮಂತ್ರದಿಂದ ಎಂದರ್ಥ.
 
॥ ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತೇ ಶ್ರೀಮತ್ತಂತ್ರಸಾರಸಂಗ್ರಹೇ ಶ್ರೀವಸುಧೇಂದ್ರರಚಿತವ್ಯಾಖ್ಯಾನೇ ಪ್ರಥಮೋಪಧ್ಯಾಯಃ ॥
 
ಪುನಃ ಅಷ್ಟಾಕ್ಷರಜಪ- ಧ್ಯಾನಾದಿಗಳು
 
ಅರ್ಚಯಿತ್ವಾ ಪುನರ್ಧ್ಯಾತ್ವಾ ಜಪೇದಷ್ಟೋತ್ತರಂ ಶತಮ್ ।
ಪುನರ್ಧ್ಯಾಯೇದ್ಧರಿಂ ಸರ್ವದೇವದೇವೇಶ್ವರಂ ಪ್ರಭುಮ್ II ೬೮ ॥
 
ಅರ್ಥ- ಹೀಗೆ ಮಂತ್ರಗಳಿಂದ ಪುಷ್ಪಾಂಜಲಿಯನ್ನು ಅರ್ಪಿಸಿದ ನಂತರ 'ಜಿತಂತೇ ಪುಂಡರೀಕಾಕ್ಷ' ಇತ್ಯಾದಿ ಸ್ತೋತ್ರಪಾಠಗಳಿಂದ ಪ್ರದಕ್ಷಿಣನಮಸ್ಕಾರಪೂರ್ವಕವಾಗಿ ಮೂರು ಬಾರಿ ಪುಷ್ಪಾಂಜಲಿ ಯಿಂದ ಹರಿಯನ್ನು ಪೂಜಿಸಬೇಕು. ನಂತರ 'ಉದ್ಯದ್ಭಾಸ್ವತ್' ಇತ್ಯಾದಿ ಮಂತ್ರದಿಂದ ಹರಿಯನ್ನು ಧ್ಯಾನಿಸಿ, ಮೂಲ