This page has been fully proofread once and needs a second look.

ದೇವಸ್ಯ ಪೃಷ್ಠಭಾಗೇ ಓಂ ಉಪಬರ್ಹಣರೂಪಾಯೈ ತಮೋSಭಿ ಮಾನಿನ್ಯೈ ದುರ್ಗಾಯೈ ನಮಃ ।
(ಸೋಪಾನ ಸ್ಥಲೇ)
ಪೂರ್ವೇ ಓಂ ಆತ್ಮನೇ ನಮಃ । ದಕ್ಷಿಣೇ ಓಂ ಅಂತರಾತ್ಮನೇ ನಮಃ
ಪಶ್ಚಿಮೇ ಓಂ ಪರಮಾತ್ಮನೇ ನಮಃ । ಉತ್ತರೇ ಓಂ ಜ್ಞಾನಾತ್ಮನೇ ನಮಃ ।
ಪೂರ್ವಾದಿ ಕಮಲಾಷ್ಟಪತ್ರೇಷು-
ಓಂ ಛತ್ರಧಾರಿಣ್ಯೈ ವಿಮಲಾಯೈ ನಮಃ ।
ಓಂ ಚಾಮರಧಾರಿಣ್ಯೈ ಉತ್ಕರ್ಷಿಣ್ಯೈ ನಮಃ ।
ಓಂ ವ್ಯಜನಧಾರಿಣ್ಯೈ ಜ್ಞಾನಾಯೈ ನಮಃ ।
ಓಂ ದರ್ಪಣಧಾರಿಣ್ಯೈ ಕ್ರಿಯಾಯೈ ನಮಃ।
ಓಂ ಗಾನಕರ್ತ್ರ್ಯೈ ಯೊಗಾಯೈ ನಮಃ।
ಓಂ ನೃತ್ಯಂತ್ಯೈ ಪ್ರಹ್ವ್ಯೈ ನಮಃ ।
ಓಂ ವಾದ್ಯಹತ್ಸಾಯೈ ಸತ್ಯಾಯೈ ನಮಃ ।
ಓಂ ಸ್ತೋತ್ರಕರ್ತ್ರ್ಯೈ ಈಶಾನಾಯೈ ನಮಃ ।
ಏತಾಭಿಃ ಕೃತಸೇವಾಂ ಸಮರ್ಪಯಂತ್ಯೈ ಮಧ್ಯೆ ಅನುಗ್ರಹಾಯೈ ನಮಃ।
ಅನುಗ್ರಹಾಖ್ಯ ಶಕ್ತೌ। ಸಹಸ್ರ ಫಣಾಮಂಡಲ ಮಂಡಿತಾಯ ತಲ್ಪಾಕಾರಾಯ ಹರೇರ್ಯೋಗಾಸನರೂಪಾಯ ಶ್ರೀಮದನಂತಾಯನಮಃ
॥ ಇತಿ ಪೀಠಪೂಜಾಂ ಸಮರ್ಪಯಾಮಿ ॥
ಹೀಗೆ ಪೀಠಪೂಜೆಯಾದ ನಂತರ ಯೋಗಪೀಠಸ್ವರೂಪವಾದ ಅನಂತಾಸನದಲ್ಲಿರುವ ಪ್ರತಿಮೆಯಲ್ಲಿ ಸ್ವಹೃದಯಸ್ಥ ಬಿಂಬ ಮೂರ್ತಿಯನ್ನು ಆವಾಹಿಸಬೇಕು.
ಆವಾಹನಪ್ರಕಾರ -
ಅಷ್ಟೈಶ್ವರ್ಯಯುಕ್ತನಾದ ನಿರ್ಮಲನೂ, ಬಿಳಿತಾವರೆಯಲ್ಲಿರುವ ವನೂ, ಶಂಖಚಕ್ರಗದಾಪದ್ಮ ಧರಿಸಿ ಸರ್ವಾಭರಣಭೂಷಿತನೂ, ವನಮಾಲಾಧರನೂ ಆದ ನಾರಾಯಣನನ್ನು ಮಾನಸ
ಉಪಚಾರಗಳಿಂದ ಪೂಜಿಸಬೇಕು. ಹೃದಯಕಮಲವನ್ನು ಓಂ ಯಂ ಓಂ' ಎಂಬ ವಾಯುಬೀಜದಿಂದ ಅರಳಿಸಬೇಕು.ಜ್ಞಾನಾರ್ಕ ದಿಂದ ಅರಳಿದೆ ಎಂದು ಭಾವಿಸಿ, ಸುಷುಮ್ನಾ ಮಾರ್ಗದಿಂದ ಬ್ರಹ್ಮರಂಧ್ರಕ್ಕೆ ದೇವನನ್ನು ತಂದು ಎಡ ಹೊಳ್ಳೆಯಲ್ಲಿರುವ-
ನೆಂದು ಚಿಂತಿಸಿ, ಅಲ್ಲಿಂದ ತನ್ನ ಬೊಗಸೆಯಲ್ಲಿ ಬಂದಿದ್ದಾನೆಂದು ತಿಳಿದು, ಪ್ರತಿಮೆಯಲ್ಲಿ ಪುಷ್ಪವನ್ನೇರಿಸಿ ಭಗವಂತನು ಹೃದಯ- ದಿಂದ ಪ್ರತಿಮೆಯಲ್ಲಿ ನೆಲೆಸಿರುವನೆಂದು ಚಿಂತಿಸಬೇಕು. ನಂತರ
ಪುರುಷಸೂಕ್ತ ಹಾಗೂ ಮೂಲಮಂತ್ರಗಳಿಂದ ಆವಾಹನೆ ಮಾಡಬೇಕು.
ಭೋ ಸ್ವಾಮಿನ್ ಜಗತಾಂನಾಥ ಯಾವತ್ಪೂಜಾವಸಾನಕಮ್ ।