This page has been fully proofread once and needs a second look.

ಅವತಾರಿಕಾ- ಸರ್ವತ್ರ ಪೂಜ್ಯನಾರು? ಅವನನ್ನು ಪೂಜಿಸುವ ರೀತಿ ಯಾವುದು ? ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ.
 
ಪೂಜ್ಯಶ್ಚ ಭಗವಾನ್ನಿತ್ಯಂ ಚಕ್ರಾಬ್ಜಾದಿಕಮಂಡಲೇ।
ಹೃದಯೇ ವಾ ಚಲೇ ವಾಽಪಿ ಜಲೇ ವಾ ಕೇವಲ ಸ್ಥಲೇ ॥ 48 ॥
 
ಅರ್ಥ- ಶ್ರೀಮನ್ನಾರಾಯಣನೇ ಸರ್ವತ್ರಪೂಜ್ಯನು. ಅವನನ್ನು ಚಕ್ರಾಬ್ಜ, ಭದ್ರಕ ಮೊದಲಾದ ಮಂಡಲಗಳಲ್ಲಿಯೂ ಆಯಾಯ ದೇವತಾಯಂತ್ರಗಳಲ್ಲಿ ಆವಾಹಿಸಿ ಪೂಜಿಸಬೇಕು. ಅಥವಾ ಪ್ರತಿಮೆ, ಸಾಲಿಗ್ರಾಮಾದಿ ಅಚಲಪ್ರತೀಕಗಳಲ್ಲಿ, ದೇವಾಲಯ- ಗಳಲ್ಲಿರುವ ಸ್ಥಿರಪ್ರತಿಮೆಗಳಾಗಲೀ, ಗುರು ಯತಿಗಳು ಮೊದಲಾದ
ಚಲಪ್ರತಿಮೆಗಳಾಗಲೀ, [^1] , ಕೇವಲ ಭೂಮಿಯಲ್ಲಿ ಮಂಡಲ ಬರೆದು, ಭೂಸ್ಥಂಡಿಲದಲ್ಲಿಯೇ ಮಂಡಲ ಬರೆದು ಭೂಸ್ಥಂಡಿಲ ದಲ್ಲಿಯೇ ಭಗವಂತನನ್ನು ಪೂಜಿಸಬಹುದು.
 
ವ.ಟೀ. - ಪೂಜಾವಿಧಾನಮಾಹ - ಪೂಜ್ಯ ಇತಿ ॥ ಚಕ್ರಾಂಬ್ಜಂ ಏಕಂ ಮಂಡಲಮ್ ।
 

 
 
 
ವ್ಯಾಹೃತಿಗಳ ಮೊದಲು ಓಂಕಾರಗಳೂ, ಗಾಯತ್ರಿ ಮಂತ್ರದ ಆದಿ- ಯಲ್ಲಿ ಒಂದು ಓಂಕಾರ ಹೀಗೆ ಆರು ಓಂಕಾರಗಳು. ಇದು ಯತಿ ಹಾಗೂ ವಾನಪ್ರಸ್ಥರಿಗೆ ಯೋಗ್ಯವಾಗಿದೆ.
ಯತಿಗಳಿಗೆ ಗಾಯತ್ರಿಯು ಆವಶ್ಯಕವೇ?
ದ್ವಿಜನಾದವನು ಗಾಯತ್ರೀಪ್ರಧಾನಕವಾದ ಸಂಧ್ಯಾವಂದನೆ- ಯನ್ನು ಬಿಟ್ಟರೆ ಬದುಕಿರುವಾಗಲೇ ಶೂದ್ರನಾಗುವನು. ಸನ್ಯಾಸಿಯು ಮನೆ, ಮಡದಿ, ಮಠ ಎಲ್ಲವನ್ನೂ ಬಿಡಬಹುದು. ಆದರೆ ತಂದೆ ಉಪದೇಶಿಸಿದ ವೇದಮಾತೆಯನ್ನು ತ್ಯಜಿಸಬಾರದು.
'ಸರ್ವಂ ಚ ಸನ್ನ್ಯಸೇದ್ ವಿದ್ವಾನ್ ವೇದಮೇಕಂ ನ ಸಂತ್ಯಜೇತ್'.
ಕುಟೀಚಕ, ಬಹೂದಕ, ಹಂಸ, ಪರಮಹಂಸನಾಗಲೀ ವೇದಮಾತೆ ಯನ್ನು ತ್ಯಜಿಸಬಾರದು. ತ್ಯಜಿಸಿದರೆ ಚಂಡಾಲನಿಗಿಂತಲೂ ಅಧಮನೆನಿಸುವನು.
"ಗಾಯತ್ರೀರಹಿತಾಃ ಸರ್ವೆ ಚಂಡಾಲಾದಧಮಃ ಸ್ಮೃತಃ"
ಈ ಮಾತುಗಳೆಲ್ಲ ವ್ಯಾಹೃತಿಸಹಿತವಾದ ಗಾಯತ್ರಿಯನ್ನು ಕುರಿತೇ ಹೇಳುತ್ತಿವೆ. ಬ್ರಹ್ಮಗಾಯತ್ರೀಯಾದರೋ ವ್ಯಾಹೃತಿರಹಿತ- ವಾದದ್ದು. ಆದ್ದರಿಂದ ಯತಿಗಳೂ ಸಹ ವಿಶ್ವಾಮಿತ್ರಗಾಯತ್ರಿ- ಯನ್ನು ಹತ್ತಕ್ಕೆ ಕಡಿಮೆಯಾಗದಂತೆ ಜಪಿಸಲೇಬೇಕು. ಆದರೆ ಸಂಧ್ಯಾವಂದನೆಯಲ್ಲಿ ಅರ್ಘ್ಯಪರ್ಯಂತ ಮಾಡಿ ಗಾಯತ್ರಿ ಯನ್ನು ಜಪಿಸುವುದು. ಉಪಸ್ಥಾನಾದಿಗಳಿಲ್ಲ.
[^1]. ಸನ್ಯಾಸಿಗಳನ್ನು ಭಿಕ್ಷೆಗೆ ಆಹ್ವಾನಿಸಿದಾಗ ಪ್ರತಿಮೆ ಹಾಗೂ ಸನ್ನ್ಯಾಸಿಗಳ ಅಂತರ್ಯಾಮಿ ಪೂಜೆ ನಡೆಯುವುದರಿಂದ ಸನ್ನ್ಯಾಸಿಭಿಕ್ಷೆಗೆ ವಿಶೇಷಸ್ಥಾನವಿದೆ.