This page has been fully proofread once and needs a second look.

ಟೀಕಾರ್ಥ - ಪುರುಷಸೂಕ್ತದಲ್ಲಿರುವ ಹದಿನೈದು ಋಕ್ಕು(ಮಂತ್ರ)ಗಳು ಅನುಷ್ಟುಪ್ ಛಂದಸ್ಸಿನಲ್ಲಿವೆ. 'ಯಜ್ಞೇನ ಯಜ್ಞ' ಎಂಬ ಹದಿನಾರನೆಯ ಮಂತ್ರವು ತ್ರಿಷ್ಟುಪ್ಛಂದಸ್ಸಿನಲ್ಲಿದೆ. ಇದು ಋಗ್ವೇದಿಗಳಿಗೆ ನಿಯಮವಾಗಿರುತ್ತದೆ. ಆಪಸ್ತಂಬರಿಗೆ
(ಯಜುರ್ವೇದಿಗಳಿಗೆ) ಹದಿನೈದು ಮಂತ್ರಗಳು ತ್ರಿಷ್ಟುಪ್ ಛಂದಸ್ಸಿನಲ್ಲಿರುತ್ತವೆ.
 
ವಿಷ್ಣು ಷಡಕ್ಷರಮಂತ್ರ ನ್ಯಾಸಾದಿಗಳು
 
ವಿಷ್ಣುಶಬಶ್ಚತುರ್ಥ್ಯಂತೋಹೃದಯೇತಃ ಷಡಕ್ಷರ: ।
ತಾರವತ್ ಸರ್ವಮಸ್ಯಾಪಿ ಶ್ಯಾಮೋ ಧ್ಯೇಯೋ ಹರಿಃ ಸ್ವಯಮ್
॥ ೪೪ ॥
 
ಅರ್ಥ- ಚತುರ್ಥೀವಿಭಕ್ತ್ಯಂತವಾದ ವಿಷ್ಣವೇ ಎಂಬ ಶಬ್ದಹಾಗೂ ನಮಃ ಶಬ್ದವು ಸೇರಿದರೆ 'ವಿಷ್ಣವೇ ನಮಃ' ಎಂಬ ವಿಷ್ಣುಷಡಕ್ಷರ ಮಂತ್ರವಾಗುತ್ತದೆ. ಋಷಿ, ಛಂದಸ್ಸು ಎಲ್ಲವೂ ಪ್ರಣವದಲ್ಲಿ ಹೇಳಿದಂತೆಯೇ ಆದರೆ ಧ್ಯೇಯವಾದ ವಿಷ್ಣುರೂಪವಾದರೂ ನೀಲವರ್ಣವಾಗಿದೆ.
 
ವ.ಟಿ. - ಹೃದಯೇತಃ = ನಮಃಸಹಿತಃ ।
 
ಟೀಕಾರ್ಥ - ಹೃದಯೇತಃ ಎಂದರೆ ಹೃದಯಸ್ಥಾನದಲ್ಲಿ ನ್ಯಾಸ ಮಾಡುವ ನಮಃ ಎಂಬ ಪದದಿಂದ ಕೂಡಿರುವ ಎಂದರ್ಥ.
 
ವರ್ಣಾ ಏವ ಷಡಂಗಾನಿ ಷಣಯೋರ್ಭೇದಯೋಗತಃ ।
ಪಜ್ಜಾನುನಾಭಿಹೃನ್ನಾಸಾಕೇಷು ನ್ಯಾಸಶ್ಚ ವರ್ಣಶಃ ॥ 45 ॥
 
ಅರ್ಥ - 'ವಿಷ್ಣವೇ ನಮಃ' ಎಂಬ ಮಂತ್ರದ ಅಕ್ಷರಗಳಿಂದಲೇ ಷಡಂಗನ್ಯಾಸ ಮಾಡಿಕೊಳ್ಳಬೇಕು. 'ಷ್ಣ' ಎಂಬಲ್ಲಿರುವ ಷಕಾರ-ಣಕಾರಗಳನ್ನು ಬಿಡಿಸಿ ಬೇರೆ ಮಾಡಿದಾಗ ಆರುವರ್ಣಗಳಾಗಿ ಷಡಂಗನ್ಯಾಸ ಮಾಡಿಕೊಳ್ಳಬಹುದಾಗಿದೆ. ಕಾಲು, ಜಾನು, ನಾಭಿ, ಎದೆ, ಮೂಗು, ಶಿರಸ್ಸುಗಳಲ್ಲಿ ವರ್ಣನ್ಯಾಸವನ್ನು ಮಾಡಬೇಕು.[^1]
 

 
 
 
[^1]. ವಿಶೇಷಾಂಶ - ವಿಷ್ಣುಷಡಕ್ಷರಮಂತ್ರನ್ಯಾಸಾದಿಗಳು
ಪ್ರಾಣಾಯಾಮ- ವಿಷ್ಣವೇ ನಮಃ ಇತಿ ಪ್ರಾಣಾಯಾಮಃ ।
ಋಷಿನ್ಯಾಸಃ -
ಅಸ್ಯ ಶ್ರೀ ವಿಷ್ಣು ಷಡಕ್ಷರಮಂತ್ರಸ್ಯ ಅಂತರ್ಯಾಮಿ ಋಷಿಃ । ದೈವೀಗಾಯತ್ರೀ ಛಂದಃ । ವಿಷ್ಣುರ್ದೇವತಾ । ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀವಿಷ್ಣುಪ್ರೇರಣಯಾ
ಶ್ರೀವಿಷ್ಣುಪ್ರೀತ್ಯರ್ಥ೦ ವಿಷ್ಣುಷಡಕ್ಷರಮಂತ್ರಜಪೇ ವಿನಿಯೋಗಃ ।