This page has been fully proofread once and needs a second look.

ಶ್ರೀಶ್ರೀ ೧೦೦೮ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು,
 

 
ಜಗದ್ಗುರು
 
ಶ್ರೀಮನ್ಮಧ್ವಾಚಾರ್ಯಮೂಲಮಹಾಸಂಸ್ಥಾನ
 

ಶ್ರೀರಾಘವೇಂದ್ರಗುರುಸಾರ್ವಭೌಮರ ಮಠ,

ಮಂತ್ರಾಲಯ, ಆಂಧ್ರಪ್ರದೇಶ,
 

 
ಅನುಗ್ರಹವಚನ -೧
 

 
ಶ್ರೀಮದಾಚಾರ್ಯರ ತಂತ್ರಸಾರಗ್ರಂಥ''ವು ಶ್ರೀಮದಾಚಾರ್ಯರ ಅಪೂರ್ವ ಕೃತಿಯಾಗಿದೆ.
ಸರ್ವಜ್ಞರಾದ ಶ್ರೀಮದಾಚಾರ್ಯರು ತಿಳಿಯದ ವಿಷಯವೇ ಇರುವುದಿಲ್ಲ. ಇದೊಂದು
ಕಲ್ಪವೃಕ್ಷ- ವಾಗಿದೆ. ಮಂತ್ರಾಧ್ಯಾಯದಲ್ಲಿರುವ ಒಂದೊಂದು ಮಂತ್ರವೂ ವಿಶಿಷ್ಟಫಲವನ್ನು ನೀಡಲು
ಸಮರ್ಥವಾಗಿವೆ.
 

 
ಏಳುಕೋಟಿವೈಷ್ಣವಮಂತ್ರವಿದೆಯೆಂದು ಶ್ರೀರಾಘವೇಂದ್ರ- ತೀರ್ಥರು ತಮ್ಮ ಪ್ರಾತಃಸಂಕಲ್ಪಗದ್ಯದಲ್ಲಿ
ತಿಳಿಸಿರುತ್ತಾರೆ. ಇವು- ಗಳಲ್ಲಿ ಅತ್ಯಂತವೀರ್ಯವತ್ತಾದ ಎಪ್ಪತ್ತನಾಲ್ಕು ಮಂತ್ರಗಳನ್ನು
ಋಷಿ-ದೇವತೆ-ಛಂದಸ್ಸು ಸಹಿತವಾಗಿ ತಂತ್ರಸಾರದಲ್ಲಿ ನಿರೂಪಿಸ ಲಾಗಿದೆ. ತಂತ್ರಸಾರಸಂಗ್ರಹಕ್ಕೆ
ಇಪ್ಪತ್ತಕ್ಕೂ ಹೆಚ್ಚು ವ್ಯಾಖ್ಯಾನ- ಗಳಿವೆ. ಅವುಗಳಲ್ಲಿ ಶ್ರೀರಾಘವೇಂದ್ರಮಠದ ಪರಂಪರೆಯಲ್ಲಿ ಬಂದ ಶ್ರೀ
ವಸುಧೇಂದ್ರ- ತೀರ್ಥರ ವ್ಯಾಖ್ಯಾನವು ಸಂಕ್ಷೇಪ- ವಾದರೂ ಗಾಂಭೀರ್ಯಶೈಲಿಯಲ್ಲಿ ರಚಿತವಾಗಿದೆ.
 

 
ವಿದ್ವಾಂಸರಾದ ಶ್ರೀವೇದವ್ಯಾಸಾಚಾರ್ಯರು ವಸುಧೇಂದ್ರ- ತೀರ್ಥರ ಟೀಕಾಸಹಿತ
ತಂತ್ರಸಾರಸಂಗ್ರಹವನ್ನು ಕನ್ನಡದಲ್ಲಿ ಅನುವಾದ ಮಾಡಿದ್ದಾರೆ. ಈ ಕಾರ್ಯಕ್ಕಾಗಿ ಅವರು
ಅಭಿನಂದಾ- ರ್ಹರು. ಇವರಿಗೆ ಮೂಲರಾಮಚಂದ್ರದೇವರು ವಿಶೇಷವಾಗಿ

ಇತೋಪ್ಯಧಿಕವಾಗಿ
ಅನುಗ್ರಹಿಸಲಿ ಎಂದು ನಮ್ಮ ಉಪಾಸ್ಯ- ಮೂರ್ತಿ ಮೂಲರಾಮಚಂದ್ರದೇವರನ್ನು
 
ಪ್ರಾರ್ತಿ
 
ಇತೋಪ್ಯಧಿಕವಾಗಿ
 
ಪ್ರಾರ್ಥಿ
ಸುವೆವು.
 

ಇತಿ
ನಾರಾಯಣಸ್ಮರಣೆಗಳು
 

ಶ್ರೀಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು