This page has not been fully proofread.

22
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಆದಿವರ್ಣತ್ರಯಂ ನಾಭಿಹೃಚ್ಛಿರಸ್ಸು ಯಥಾಕ್ರಮಮ್ ।
ವ್ಯಸನೀಯಂ ಚ ತದ್ವರ್ಣದೇವತಾಧ್ಯಾನಪೂರ್ವಕಮ್ ॥34॥
 
ಅರ್ಥ - ಓಂಕಾರಮಂತ್ರ ಜಪದಲ್ಲಿ ಅಕ್ಷರನ್ಯಾಸಸ್ಥಾನಗಳು ಹೀಗಿವೆ
ಪ್ರಣವದಲ್ಲಿರುವ ಎಂಟು ಅಕ್ಷರಗಳಲ್ಲಿ ಮೊದಲ ಮೂರು ಅಕ್ಷರಗಳಾದ ಅಕಾರ
ಉಕಾರ ಮಕಾರಗಳನ್ನು ಅವುಗಳ ದೇವತೆಗಳಾದ ವಿಶ್ವ-ತೈಜಸ-ಪ್ರಾಜ್ಞರೂಪಗಳ
ಧ್ಯಾನಪೂರ್ವಕವಾಗಿ ನಾಭಿ, ಹೃದಯ, ಶಿರಸ್ಸುಗಳಲ್ಲಿ ನ್ಯಾಸಮಾಡಿಕೊಳ್ಳಬೇಕು'.
 
ವ.ಟೀ. - ಪ್ರಣವವರ್ಣನ್ಯಾಸಪ್ರಕಾರಮಾಹ - ಆದೀತಿ ॥ಅಕಾರೋಕಾರಮಕಾರಾದಿ-
-
 
ವರ್ಣಾಃ ॥
 
ಟೀಕಾರ್ಥ - ಓಂಕಾರದ ವರ್ಣನ್ಯಾಸ ಮಾಡುವ ರೀತಿಯನ್ನು 'ಆದಿವರ್ಣತ್ರಯಂ'
ಇತ್ಯಾದಿ ಶ್ಲೋಕದಲ್ಲಿ ಹೇಳುತ್ತಾರೆ. ಆದಿವರ್ಣತ್ರಯವೆಂದರೆ ಪ್ರಣವದ ಎಂಟು
ಅಕ್ಷರಗಳಲ್ಲಿ ಮೊದಲ ಅಕಾರೋಕಾರಮಕಾರಗಳು ಎಂದರ್ಥ.
 
ಅಷ್ಟಾಕ್ಷರ-ವ್ಯಾಹೃತಿಗಳ ನ್ಯಾಸಸ್ಥಾನಗಳು
 
ಪಜ್ಜಾನುನಾಭಿಹೃದಯವಾಜ್‌ನಾಸಾನೇತ್ರಕೇಷು ಚ ।
ಅಷ್ಟಾಕ್ಷರಾಣಾಂ ನ್ಯಾಸಃ ಸ್ಯಾತ್ ವ್ಯಾಹೃತೀನಾಂ ಪ್ರಜಾಪತಿಃ ॥35॥
 
ಮುನಿಶ್ಚಂದಸ್ತು ಗಾಯತ್ರೀ ದೇವತಾ ಭಗವಾನ್ ಹರಿಃ ।
ಉದ್ಯದಾದಿತ್ಯವರ್ಣಶ್ಚ ಜ್ಞಾನಮುದ್ರಾಭಯೋದ್ಯತಃ ॥3॥
 
ಅರ್ಥ
 
ಅಷ್ಟಾಕ್ಷರಮಂತ್ರದ ಎಂಟು ಅಕ್ಷರಗಳ ನ್ಯಾಸವನ್ನು ಕ್ರಮವಾಗಿ
ಪಾದಗಳಲ್ಲಿ, ಮೊಣಗಂಟು, ನಾಭಿ, ಹೃದಯ, ಬಾಯಿ, ಮೂಗು, ನೇತ್ರ, ತಲೆ-
ಗಳಲ್ಲಿ ಮಾಡಿಕೊಳ್ಳಬೇಕು. ಈ ಎಂಟು ಅಕ್ಷರಗಳಿಗೆ ಎಂಟು ನ್ಯಾಸ ಸ್ಥಾನಗಳಾಗಿವೆ.
 
1. ವಿಶೇಷಾಂಶ - ಪ್ರಣವಮಂತ್ರದ ನ್ಯಾಸಕ್ರಮವು ಹೀಗಿದೆ - ಅಂ ವಿಶ್ವಾಯ ನಮಃ (ನಾಭೌ);
ಉಂ ತೈಜಸಾಯ ನಮಃ (ಹೃದಯ); ಮಂ ಪ್ರಾಜ್ಞಾಯ ನಮಃ (ಶಿರಸಿ).
 
2. ಅಷ್ಟಾಕ್ಷರಗಳ ನ್ಯಾಸಕ್ರಮವು ಹೀಗಿದೆ –
 
ಓಂ ವಿಶ್ವಾಯ ನಮಃ (ಪಾದಯೋಃ); ಓಂ ನಂ ತೈಜಸಾಯ ನಮಃ (ಜಾನ್ನೋಃ);
ಓಂ ಮೋಂ ಪ್ರಾಜ್ಞಾಯ ನಮಃ (ನಾಭೌ); ಓಂ ನಾಂ ತುರ್ಯಾಯ ನಮಃ (ಹೃದಯ);
ಓಂ ರಾಂ ಆತ್ಮನೇ ನಮಃ (ವಾಗಿಂದ್ರಿಯೇ);
 
ಓಂ ಯಂ ಅಂತರಾತ್ಮನೇ ನಮಃ (ನಾಸಾಯಾಂ);