This page has been fully proofread once and needs a second look.

ವ. ಟೀ. - ಬ್ರಹ್ಮಬುದ್ಧೌ ಯದ್ರೂಪಂ ಪ್ರಥಮತೋ ವ್ಯಕ್ತಂ ತದ್ರೂಪಾಂತರಾಪೇಕ್ಷಯಾ ಪ್ರಥಮಮುಚ್ಯತೇ ಇತಿ ಸಂಬಂಧಃ ॥
 
ಟೀಕಾರ್ಥ- ಬ್ರಹ್ಮಬುದ್ಧಿಯಲ್ಲಿ ಯಾವ ಅಜಾದಿರೂಪವು ಮೊದಲು ಅಭಿವ್ಯಕ್ತವಾಯಿತೋ ಆ ರೂಪವು ಆನಂದಾದಿರೂಪ ಗಳಿಗಿಂತ ಮೊದಲು ಎಂದು ಪೂರ್ವಾಪರಭಾವವನ್ನು ತಿಳಿಯಬೇಕು.
 
ಮಂತ್ರಗಳ ಅಂಗನ್ಯಾಸಾದಿಗಳು
 
ಅವತಾರಿಕಾ- ತಾರಾದಿಸರ್ವಮಂತ್ರಗಳ ಋಷಿದೇವತೆಯನ್ನು ಹೇಳಲಾಯಿತು. ಹಾಗೂ ಪ್ರಣವ ಅಷ್ಟಾಕ್ಷರಗಳಿಗೆ ಛಂದಸ್ಸು ಮತ್ತು ದೇವತಾಧ್ಯಾನವನ್ನು ಹೇಳಲಾಯಿತು. ಈಗ ಪ್ರಣವಾದಿ ಅಷ್ಟಮಹಾಮಂತ್ರಗಳ ಅಂಗನ್ಯಾಸವನ್ನು ತಿಳಿಸುತ್ತಾರೆ.
 
ಸಮಾಸವ್ಯಾಸಯೋಗೇನ ವ್ಯಾಹೃತೀನಾಂ ಚತುಷ್ಟಯಮ್ ।
ಸತ್ಯಂ ಚಾಂಗಾನಿ ತಾರಸ್ಯ ಪ್ರೋಚ್ಯಂತೇಽಷ್ಟಾಕ್ಷರಸ್ಯ ಚ ॥ ೩೦ ॥
 
ಅರ್ಥ- ಭೂಃ, ಭುವಃ, ಸ್ವಃ ಎಂದು ಬೇರೆಬೇರೆಯಾಗಿಯೂ(ವ್ಯಾಸ)
'ಭೂರ್ಭುವಸ್ವಃ' ಎಂಬ ಸಮುದಿತವಾದ ಒಂದು ವ್ಯಾಹೃತಿಯೂ ಹೀಗೆ ನಾಲ್ಕು ವ್ಯಾಹೃತಿಗಳೂ ಮತ್ತು ಸತ್ಯಂ' ಎಂಬ ಒಂದು ಪದವೂ ಸೇರಿದಾಗ ಓಂಕಾರದ ಪಂಚಾಂಗನ್ಯಾಸವೇರ್ಪಡುತ್ತದೆ.
[^1]
 
 
 
 
[^1]. ವಿಶೇಷಾಂಶ - ಪ್ರಣವದ ಅಂಗನ್ಯಾಸದ ಕ್ರಮ
ಅಸ್ಯ ಶ್ರೀ ಪ್ರಣವಮಹಾಮಂತ್ರಸ್ಯ ಅಂತರ್ಯಾಮಿ ಋಷಿಃ । ಪರಮಾತ್ಮಾ ದೇವತಾ । ದೈವೀ ಗಾಯತ್ರೀ ಛಂದಃ ಪ್ರಣವ ಮಂತ್ರ ಜಪೇ ವಿನಿಯೋಗಃ ।
ಅಂಗನ್ಯಾಸಃ - ಓಂ ಭೂಃ(ಅನಿರುದ್ಧಾಯ) ಹೃದಯಾಯ ನಮಃ । ಓಂ ಭುವಃ ಶಿರಸೇ ಸ್ವಾಹಾ । ಓಂ ಸುವಃ ಶಿಖಾಯೈ ವಷಟ್ । ಓಂ ಭೂರ್ಭುವಸ್ವಃ ಕವಚಾಯ ಹುಮ್ । ಸತ್ಯಂ ಅಸ್ತ್ರಾಯ ಫಟ್ । ಇತಿ ದಿಗ್ಬಂಧಃ ।
ಅಷ್ಟಾಕ್ಷರದ ಅಂಗನ್ಯಾಸಕ್ರಮ - ಅಸ್ಯ ಶ್ರೀನಾರಾಯಣಾಷ್ಟಾಕ್ಷರ ಮಂತ್ರಸ್ಯ ಅಂತರ್ಯಾಮಿ ಋಷಿಃ । ದೈವೀಗಾಯತ್ರೀ ಛಂದಃ ।
ಪರಮಾತ್ಮಾ ದೇವತಾ ।
ಓಂ ಕೃದ್ಧೋಲ್ಕಾಯ ಹೃದಯಾಯ ನಮಃ । ಮಹೋಲ್ಕಾಯ ಶಿರಸೇ ಸ್ವಾಹಾ । ವೀರೋಲ್ಕಾಯ ಶಿಖಾಯೈ ವಷಟ್ । ದ್ಯೂಲ್ಕಾಯ ಕವಚಾಯ ಹುಮ್ । ಸಹಸ್ರೋಲ್ಕಾಯ