This page has been fully proofread once and needs a second look.

ಕೇಶವೋ ಮಧುಸೂದನಃ ಸಂಕರ್ಷಣದಾಮೋದರೌ ।
ಸವಾಸುದೇವಪ್ರದ್ಯುಮ್ನಾ ದಕ್ಷೋಚ್ಚಕರಶಂಖಿನಃ ॥ ೨೪ ॥
 
ಅರ್ಥ-ಕೇಶವ, ಮಧುಸೂದನ, ಸಂಕರ್ಷಣ, ದಾಮೋದರ, ವಾಸುದೇವ, ಪ್ರದ್ಯುಮ್ನ ಈ ಆರು ಮೂರ್ತಿಗಳು ಮೇಲಿನ ಬಲಕೈಯ್ಯಲ್ಲಿ ಶಂಖವನ್ನು ಧರಿಸಿವೆ.
 
ವಿಷ್ಣುಮಾಧವಾನಿರುದ್ಧಪುರುಷೋತ್ತಮಾಧೋಕ್ಷಜಾಃ ।
ಜನಾರ್ದನಶ್ಚ ವಾಮೋಚ್ಚಕರಸ್ಥಿತದರಾ ಮತಾಃ ॥ ೨೫ ॥
 
ಅರ್ಥ- ವಿಷ್ಣು, ಮಾಧವ, ಅನಿರುದ್ಧ, ಪುರುಷೋತ್ತಮ, ಅಧೋಕ್ಷಜ, ಜನಾರ್ದನ ಇವುಗಳು ಮೇಲಿನ ವಾಮಕರದಲ್ಲಿ ಶಂಖವನ್ನು ಧರಿಸಿವೆ.
 
ಗೋವಿಂದಶ್ಚ ತ್ರಿವಿಕ್ರಮಸ್ಸಶ್ರೀಧರಹೃಷಿಕಪಾಃ ।
ನೃಸಿಂಹಾಚ್ಯುತಶ್ಚೈವ ವಾಮಾಧಃಕರಶಂಖಿನಃ ॥ ೨೬ ॥
 
ಅರ್ಥ - ಗೋವಿಂದ, ತ್ರಿವಿಕ್ರಮ, ಶ್ರೀಧರ, ಹೃಷಿಕೇಶ, ನೃಸಿಂಹ, ಅಚ್ಯುತ ಇವು ಕೆಳಗಿನ ಎಡಗೈಯ್ಯಲ್ಲಿ ಶಂಖವನ್ನು ಧರಿಸಿವೆ.
 
ವಾಮನಃಸನಾರಾಯಣಃ ಪದ್ಮನಾಭ ಉಪೇಂದ್ರಕಃ ।
ಹರಿಃ ಕೃಷ್ಣಶ್ಚ ದಕ್ಷಾಧಃಕರೇ ಶಂಖಧರಾ ಮತಾಃ ॥ ೨೭ ॥
 
ಅರ್ಥ- ವಾಮನ, ನಾರಾಯಣ, ಪದ್ಮನಾಭ, ಉಪೇಂದ್ರ, ಹರಿ, ಕೃಷ್ಣ ಈ ಆರುರೂಪಗಳು ಕೆಳಗಿನ ಬಲಗೈಯ್ಯಲ್ಲಿ ಶಂಖವನ್ನು ಧರಿಸಿರುತ್ತವೆ.
 
ವ.ಟೀ. - ಗಾಯತ್ರ್ಯಕ್ಷರದೇವತಾಲಕ್ಷಣಮಾಹ - ಕೇಶವ ಇತಿ ॥ ದಕ್ಷಭಾಗೋನ್ನತಕರೇ ಶಂಖಯುಕ್ತಾಃ । ಏವಮನ್ಯತಾಪಿ ॥೨೪-೨೭॥
 
ಟೀಕಾರ್ಥ- ಗಾಯತ್ರಿಯ ಇಪ್ಪತ್ತನಾಲ್ಕು ಅಕ್ಷರಗಳ ದೇವತೆಗಳ ಲಕ್ಷಣವನ್ನು ಹೇಳುವರು 'ಕೇಶವ' ಎಂಬಿತ್ಯಾದಿ ಶ್ಲೋಕಗಳಿಂದ. 'ಬಲಭಾಗದ ಮೇಲಿನ ಕರದಲ್ಲಿ ಶಂಖದಿಂದ ಕೂಡಿದವುಗಳು' ಎಂದರ್ಥ,[^1] ಉಳಿದ ಕಡೆಯೂ ಹೀಗೆಯೇ ತಿಳಿಯಬೇಕು.
 

 
[^1]. (ಕ್ರಮವಾಗಿ 25,26,27ನೇ ಶ್ಲೋಕಗಳಲ್ಲಿ ವಾಮೋಚ್ಚಕರೇ = ಮೇಲಿನ ಎಡಕೈಯ್ಯಲ್ಲಿ ; ವಾಮಾಧಃಕರ=ಕೆಳಗಿನ ಎಡಕೈಯ್ಯಲ್ಲಿ; ದಕ್ಷಾಧಃಕರೇ = ಕೆಳಗಿನ ಬಲಕೈಯ್ಯಲ್ಲಿ ಎಂಬುದಾಗಿ)