This page has been fully proofread once and needs a second look.

ಅಯಂ ವಿಶೇಷಃ । ಜ್ಞಾನಮುದ್ರಾ ಅಭಯೇನ ಚ ಉದ್ಯತಾಃ = ಯುಕ್ತಾಃ । ಅನೇನ ವರಾಭಯಸ್ಥಾನೇ ಅಜಾದಿಷು ತ್ರಯಾಣಾಂ ಟಂಕ್ಯಾದೀನಾಂ ಟಂಕಾದ್ಯಾಯುಧಯುಕ್ತತ್ವಂ ಜ್ಞೇಯಮ್। ಅಥವಾ ಜ್ಞಾನಾಭಯೇ ತಾಭ್ಯಾಂ ಯುಕ್ತದ್ವಿಹಸ್ತತ್ವಂ ಜ್ಞೇಯಮ್।
 
ಟೀಕಾರ್ಥ- ಐವತ್ತು ಅಕ್ಷರಗಳಿಂದ ಪ್ರತಿಪಾದ್ಯ ಅಜಾದಿಮೂರ್ತಿ- ಗಳೂ ಸಹ ಮೂಲರೂಪದಂತೆ ಪ್ರದೀಪವರ್ಣಗಳಾಗಿವೆ. ಇದನ್ನು 'ತಾದೃಗ್ರೂಪಾಃ' ಎಂಬ ಪದ ತಿಳಿಸುತ್ತದೆ. ಇಲ್ಲಿ ಹೇಳಿರುವ ಐವತ್ತು ಅಜಾದಿರೂಪಗಳೂ ಎರಡು ಕೈಗಳನ್ನು ಹೊಂದಿದ್ದು
ಜ್ಞಾನಮುದ್ರೆ ಹಾಗೂ ಅಭಯಮುದ್ರೆಯನ್ನು ಹೊಂದಿವೆ. ಈ ಅಜಾದಿ ಐವತ್ತು ಮೂರ್ತಿಗಳಲ್ಲಿ ಟಂಕೀ, ದಂಡೀ, ಧನ್ವಿ ಈ ಮೂರನ್ನು ಹೊರತು ಪಡಿಸಿ ಉಳಿದ 47ರೂಪಗಳು ಜ್ಞಾನ-ಅಭಯಮುದ್ರೆಯಿಂದ ಕೂಡಿವೆ. ಈ ಮೂರು ಮಾತ್ರ ಚೇಣ,
ದಂಡ ಹಾಗೂ ಧನುಸ್ಸನ್ನು ಧರಿಸಿವೆ.
 
ವ.ಟೀ. - ವ್ಯಾಹೃತಿದೇವತಾಲಕ್ಷಣಮಾಹ - ವಾಸುದೇವಾದಿಕಾ ಇತಿ ॥
 
ಟೀಕಾರ್ಥ-ವ್ಯಾಹೃತಿಪ್ರತಿಪಾದ್ಯದೇವತೆಗಳಾದ ವಾಸುದೇವಾದಿ- ಗಳ ಲಕ್ಷಣವನ್ನು 'ವಾಸುದೇವಾದಿಕಾಃ' ಎಂಬುದರಿಂದ ವರ್ಣಿಸುತ್ತಾರೆ.
 
ವಾಸುದೇವಾದಿಮೂರ್ತಿಗಳ ಲಕ್ಷಣ
 
ವಾಸುದೇವಾದಿಕಾ: ಶುಕ್ಲರಕ್ತಪೀತಾಸಿತೋಜ್ಜ್ವಲಾಃ ।
ಶಂಖಚಕ್ರಗದಾಬ್ಜೇತಃ ಪ್ರಥಮೋ ಮುಸಲೀ ಹಲೀ ॥ ೨೨ ॥
 
ಸಶಂಖಚಕ್ರಪರಸ್ತೃತೀಯಃ ಶಾರ್ಙ್ಗಬಾಣವಾನ್ ।
ಸಶಂಖಚಕ್ರಸ್ತುರ್ಯಸ್ತು ಚಕ್ರಶಂಖಾಸಿಚರ್ಮವಾನ್ ॥ ೨೩ ॥
 
ಅರ್ಥ- ಚತುರ್ಮೂರ್ತಿಗಳಲ್ಲಿ ವಾಸುದೇವನ ಬಣ್ಣ ಬಿಳಿ, ಸಂಕರ್ಷಣನ ಬಣ್ಣ ಕೆಂಪು, ಪ್ರದ್ಯುಮ್ನನದು ಹಳದಿ, ಅನಿರುದ್ಧ ನದು ನೀಲಬಣ್ಣವಾಗಿದೆ. ಈ ಮೂರ್ತಿಗಳಲ್ಲಿ ವಾಸುದೇವನು ಚಕ್ರ-ಶಂಖ-ಗದಾ-ಪದ್ಮ ಆಯುಧಗಳನ್ನು ಹೊಂದಿರುವನು. ಸಂಕರ್ಷಣನು ಒನಕೆ, ನೇಗಿಲು, ಚಕ್ರ ಹಾಗೂ ಶಂಖ ಧರಿಸಿದ್ದಾನೆ. ಪ್ರದ್ಯುಮ್ನನು ಶಾರ್ಙ್ಗಧನುಸ್ಸು, ಬಾಣ, ಶಂಖ ಹಾಗೂ ಚಕ್ರಗಳನ್ನು ಧರಿಸಿದ್ದಾನೆ. ಅನಿರುದ್ಧನಾದರೋ ಚಕ್ರ,ಶಂಖ,ಖಡ್ಗ ಹಾಗೂ ಗುರಾಣಿಗಳನ್ನು ಧರಿಸಿದ್ದಾನೆ.