This page has been fully proofread once and needs a second look.

ಉದ್ಯದ್ಭಾಸ್ವತ್ಸಮಾಭಾಸಶ್ಚಿದಾನಂದೈಕದೇಹವಾನ್ ।
ಚಕ್ರಶಂಖಗದಾಪದ್ಮಧರೋ ಧ್ಯೇಯೋಽಹಮೀಶ್ವರಃ ॥ ೧೮ ॥
 
ಲಕ್ಷ್ಮೀಧರಾಭ್ಯಾಮಾಶ್ಲಿಷ್ಟಃ ಸ್ವಮೂರ್ತಿಗಣಮಧ್ಯಗಃ ।
ಬ್ರಹ್ಮವಾಯುಶಿವಾಹೀಶವಿಪೈ: ಶಕ್ರಾದಿಕೈರಪಿ ॥ ೧೯ ॥
 
ಸೇವ್ಯಮಾನೋSಧಿಕಂ ಭಕ್ತ್ಯಾ ನಿತ್ಯನಿಃಶೇಷಶಕ್ತಿಮಾನ್ ।
ಮೂರ್ತಯೋಽಷ್ಟಾವಸಿ ಧೈಯಾಶ್ಚಕ್ರಶಂಖವರಾಭಯೈಃ ।
ಯುಕ್ತಾಃ ಪ್ರದೀಪವರ್ಣಾಶ್ಚ ಸರ್ವಾಭರಣಭೂಷಿತಾಃ ॥ ೨೦ ॥
 
ಅರ್ಥ -ಉದಯಿಸುವ ಸೂರ್ಯನಂತೆ ಕಾಂತಿಯುಳ್ಳ, ಸಚ್ಚಿದಾ- ನಂದರೂಪಿಯಾದ, ಚಕ್ರಶಂಖಗದಾಪದ್ಮಗಳನ್ನು ಧರಿಸಿರುವ, ಶ್ರೀದೇವಿಭೂದೇವಿಯಿಂದ ಆಲಿಂಗಿತನಾಗಿರುವ, ವಿಶ್ವಾದಿ ಎಂಟು ಮೂರ್ತಿಗಳ ಮಧ್ಯೆ ಕುಳಿತಿರುವ, ಬ್ರಹ್ಮ-ವಾಯು,ರುದ್ರಶೇಷ- ಗರುಡ ಇಂದ್ರಾದಿದೇವತೆಗಳಿಂದ ಸೇವ್ಯನಾದ, ನಿತ್ಯವೂ
ಪರಿಪೂರ್ಣಶಕ್ತಿಯುಳ್ಳವನೂ ಆದ ನನ್ನನ್ನು ಭಕ್ತಿಯಿಂದ ಧ್ಯಾನ ಮಾಡಬೇಕು. ಹಾಗೆಯೇ ದೀಪದಂತೆ ಪ್ರಕಾಶಮಾನಗಳೂ ಸರ್ವಾ- ಭರಣಗಳಿಂದ ಅಲಂಕೃತಗಳೂ, ಚಕ್ರ ಶಂಖ ವರ ಅಭಯಗಳನ್ನು ಧರಿಸಿರುವವೂ ಆದ ವಿಶ್ವತೈಜಸಾದಿ ಎಂಟು ಮೂರ್ತಿಗಳನ್ನು ಧ್ಯಾನ ಮಾಡಬೇಕು.
 
ವ.ಟೀ. - ಧೈಯಸ್ವರೂಪಮಾಹ - ಉದ್ಯದಿತಿ ॥ ಮೂರ್ತಯಃ = ಪ್ರಣವಾಷ್ಟಾಕ್ಷರ-ವರ್ಣಮೂರ್ತಯಃ ।
 
ಏವಮಷ್ಟಾಕ್ಷರೋ ಮಂತ್ರೋ ಧೈಯಃ ಸರ್ವಾರ್ಥಸಾಧಕಃ ॥ ಪಾದ್ಮ2.54-18 ಗಾಯತ್ರೀಛಂದಸ್ಸಿಗೆ ಮುಖ್ಯಾಭಿಮಾನಿ ಲಕ್ಷ್ಮೀ ದೇವಿಯಾದರೆ ಸರಸ್ವತಿಯೂ ಅಭಿಮಾನಿಯೇ ಅಭಿಮಾನಿನೀ ತು ಗಾಯಾತ್ರ್ಯಾ: ಮುಖ್ಯಾ ಶ್ರೀಃ ಪರಿಕೀರ್ತಿತಾ ।
ಬ್ರಹ್ಮಾಣೀ ಅಮುಖ್ಯತೋ ಜೇಯಾ ........
ಹೀಗೆ ಸರಸ್ವತಿ ಹಾಗೂ ಲಕ್ಷ್ಮೀದೇವಿಯರಿಬ್ಬರಲ್ಲೂ ಗಾಯತ್ರೀ ಶಬ್ದವಿದ್ದರೂ ಲಕ್ಷ್ಮೀದೇವಿಯನ್ನೇ ತೆಗೆದುಕೊಳ್ಳಬೇಕೆಂದು ಮದೀಯಾ ಗಾಯತ್ರಿ ಎನ್ನಲಾಗಿದೆ. ಇದನ್ನೇ ದೈವೀಗಾಯತ್ರೀ ಎನ್ನಲಾಗಿದೆ :
 
ಗಾಯತ್ರೀ ಯತ್ರ ದೈವೀ ಸ್ಯಾತ್ ತತ್ರ ಶ್ರೀಃ ಪರಿಕೀರ್ತಿತಾ ।