This page has been fully proofread once and needs a second look.

ಋಷಿಶ್ಚ ದೇವತೈಕೋಽಹಂ ತಾರಾದೀನಾಂ ವಿಶೇಷತಃ ।
ಛಂದೋಮದೀಯಾ ಗಾಯತ್ರೀ ತಾರಾಷ್ಟಾಕ್ಷರಯೋರ್ಮತಾ ॥ ೧೭ ॥
 
ಅರ್ಥ-ಪ್ರಣವಾದಿಮಹಾಮಂತ್ರಗಳಿಗೂ ಮುಖ್ಯವಾಗಿ ದ್ರಷ್ಟಾರ ನೆನಿಸಿದ ಋಷಿಯೂ, ಮಂತ್ರಪ್ರತಿಪಾದ್ಯದೇವತೆಯೂ ನಾನೇ
ಆಗಿರುವೆನು. ಓಂಕಾರ ಹಾಗೂ ಅಷ್ಟಾಕ್ಷರಮಂತ್ರಗಳಿಗೆ ಛಂದಸ್ಸು 'ದೈವೀಗಾಯತ್ರಿ' ಎಂದು ಕರೆಯಲಾಗಿದೆ.
 
ವ.ಟೀ. - ಋಷ್ಯಾದಿಕಮಾಹ - ಋಷಿರಿತಿ ॥ ಪ್ರಣವಾಷ್ಟಾಕ್ಷರಯೋಃ ಅಂತರ್ಯಾಮಿಋಷಿತ್ವ, ಪರಮಾತ್ಮದೇವತಾಕತ್ವಂ ವಿಶೇಷತೋ ಮತಮ್ ।
 
ಟೀಕಾರ್ಥ - ಜಪಿಸಬೇಕಾದ ಮಂತ್ರಗಳಿಗೆ ಋಷಿ, ಛಂದಸ್ಸು, ದೇವತೆಗಳನ್ನು ಇಲ್ಲಿ ಹೇಳುತ್ತಿರುವರು. ಅಂತರ್ಯಾಮಿಯೇ ಋಷಿಯು, ಪರಮಾತ್ಮನೇ ದೇವತೆಯೆಂದು ತಿಳಿಯಬೇಕು[^1].
 
 
 

 
[^1]. ವಿಶೇಷಾಂಶ - ಬ್ರಹ್ಮದೇವನು ಕೇಳಿದ ಪ್ರಶ್ನೆಗಳಲ್ಲಿ ಜಪ್ಯವಾದ ಮಂತ್ರಗಳಾವುವು? ಎಂದು. ಅದಕ್ಕೆ ಉತ್ತರವನ್ನು ಇಲ್ಲಿ ನೀಡಲಾಗಿದೆ.
ಯಾವುದೇ ಮಂತ್ರ ಜಪಿಸುವಾಗ, ಅಧ್ಯಯನಾದಿಗಳನ್ನು ಮಾಡು ವಾಗ ಋಷಿ, ಛಂದಸ್ಸು, ದೇವತೆಗಳನ್ನು ತಿಳಿದು ಜಪಿಸಬೇಕು.
ದೇವರ್ಷಿಛಂದಾಂಸಿ ಸಮ್ಯಗೇವ ವಿಚಾರಯೇತ್ ।
ಮಂತ್ರದೇವತೆಯನ್ನು ತಿಳಿಯದಿದ್ದರೆ ಮೃತ್ಯುವು; ಛಂದೋಜ್ಞಾನ ವಿಲ್ಲವಾದರೆ ಮಂತ್ರಜಪವು ವ್ಯರ್ಥವು :
ಮೃತ್ಯು: ಸ್ಯಾದ್ ದೇವತಾऽಜ್ಞಾನೇ ಛಂದೋಽಜ್ಞಾನೇ ತು ನಿಷ್ಪಲಮ್ ।
ಛಂದಸ್ಸನ್ನು ತಿಳಿಯುವಾಗ ಅಕ್ಷರಗಣನೆಯನ್ನು ಮಾತ್ರ ತಿಳಿಯು ವುದಲ್ಲದೆ, ಛಂದೋದೇವತೆಗಳನ್ನೂ ತಿಳಿಯಬೇಕು : ಛಂದಸ್ತ್ವೇನ ಮುನಿತ್ವೇನ ತಾಸಾಂ ಸ್ಮೃತಿರುದಾಹೃತಾಃ (ಋಗ್ವಾಷ್ಯ);
ಋಷಿಚ್ಛಂದೋ ದೈವತಾನಿ ಜ್ಞಾತ್ವಾऽರ್ಥ೦ ಚೈವ ಭಕ್ತಿತಃ;
ಯೋ ಹವಾsವಿದಿತಾರ್ಷಛಂದೋದೈವತಬ್ರಾಹ್ಮಣೇನ ಯಜತಿ ಯಾಜಯತಿ.......ಸ್ಥಾಣುಂವರ್ಛತಿ !!
ಋಷಿಚ್ಛಂದೋ ದೈವತಾನಿ ಬ್ರೂಯಾತ್ ತಸ್ಯ ಕ್ರಮಾತ್ ಸುಧೀಃ ।
ಅಂತರ್ಯಾಮೀತಿ ಗಾಯತ್ರೀ ಪರಮಾತ್ಮೈತ್ಯನುಕ್ರಮಾತ್ ॥
ಋಷಿರ್ನಾರಾಯಣಸ್ತಸ್ಯ ದೇವತಾ ಶ್ರೀಶ ಏವ ಚ ।
ಛಂದಸ್ತು ದೈವೀಗಾಯತ್ರೀ ಪ್ರಣವೋ ಬೀಜಮುಚ್ಯತೇ ॥