This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಮೊದಲನೆಯ ರೂಪವು ಹನುಮರೂಪವಾಗಿದ್ದು ಶ್ರೀರಾಮನ ಮಾತುಗಳನ್ನು
ಸೀತಾಮಾತೆಗೂ, ಸೀತೆಯ ಮಾತುಗಳನ್ನು ಶ್ರೀರಾಮಚಂದ್ರದೇವನಿಗೂ ತಲುಪಿಸಿ
ರುವಂತಹದು. ಎರಡನೆಯ ದ್ದಾದ ಭೀಮಸೇನರೂಪವು ಶತ್ರುಗಳಿಗೆ ಅತಿ
ಭಯಂಕರವಾಗಿದ್ದು ಕೌರವಸೇನೆಯನ್ನು ನಾಶಮಾಡಿತು. ಮೂರನೆಯ ಮಧ್ವರೂಪ-
ರೂಪ
ವಾದರೋ ಶ್ರೀಹರಿಯ ಸರ್ವೋತ್ತಮತ್ವ ಪ್ರತಿಪಾದಕ ಗ್ರಂಥ- ಗಳನ್ನು ರಚಿಸಿದ್ದು
ಭಗವಂತನಿಗೆ ಆನಂದವುಂಟುಮಾಡುವ ಶಾಸ್ತ್ರರಚನೆಯಿಂದಾಗಿ 'ಮಧ್' ಎಂದು
ಪ್ರಸಿದ್ಧವಾಗಿದೆ. ಇಂತಹ ಮೂರನೆಯ ಮಧ್ವರೂಪದಿಂದಲೇ ಪರಮಾತ್ಮನ
ಪ್ರೀತಿಗಾಗಿ ಈ ತಂತ್ರಸಾರಸಂಗ್ರಹವೆಂಬ ಗ್ರಂಥವು ರಚಿಸಲ್ಪಟ್ಟಿತು. ಆಪ್ತರಿಂದ

ರಚಿತವಾದ್ದರಿಂದ ಸಜ್ಜನರು ಸ್ವೀಕರಿಸಿ ಉದ್ಧಾರವಾಗಬೇಕು.
 
ಇತಿ
 

 
ಗ್ರಂಥಸಮಾಪ್ತಿ - ಉತ್ತರಮಂಗಳಾಚರಣೆ
 

 
ಅಶೇಷದೋಷೋಜ್ಜಿಝಿತಪೂರ್ಣಸದ್ಗುಣಂ
 

ಸದಾ ವಿಶೇಷಾಪಗತೋರುರೂಪಮ್ ।

ನಮಾಮಿ ನಾರಾಯಣಮಪ್ರತೀಪಂ

ಸದಾ ಪ್ರಿಯೇಭ್ಯಃ ಪ್ರಿಯಮಾದರೇಣ ॥166 ೧೬೬
 

 
॥ ಇತಿ
ಶ್ರೀಮದಾನಂದತೀರ್ಥಭಗವತ್ಪಾದಪ್ರಣೀತಿತಶ್ರೀಮತ್ತಂತ್ರಸಾರ ಸಂಗ್ರ
ಹೇ ಚತುರ್ಥೋಧ್ಯಾಯಃ ॥ ॥ಸಮಾಪ್ಲೋತೋಯಂ ಗ್ರಂಥಃ ॥
 

 
ಅರ್ಥ
 
- ಸಮಸ್ತದೋಷದೂರನೂ, ಸರ್ವಸದ್ಗುಣಭರಿತನೂ, ಸರ್ವದಾ
ತಾರತಮ್ಯವಿಲ್ಲದ ಅನಂತಾನಂತರೂಪವುಳ್ಳವನೂ, ಅಪ್ರತಿಮನೂ, ಪ್ರೀತಿ-
ವಿಷಯಗಳಾದ ಸಮಸ್ತವಸ್ತುಗಳಿಗಿಂತಲೂ ಅತ್ಯಂತ ಪ್ರಿಯತಮನೂ
 
ತಾರತಮ್ಯವಿಲ್ಲದ
 
ಆದ ನಾರಾಯಣನನ್ನು ಅತ್ಯಾದರ- ದಿಂದ ನಮಸ್ಕರಿಸುತ್ತೇನೆ.
 

 
೨೧೭
 

 
ಇಲ್ಲಿಗೆ ತಂತ್ರಸಾರಸಂಗ್ರಹಸಟೀಕೆಯ ಕನ್ನಡಾನುವಾದದಲ್ಲಿ

ನಾಲ್ಕನೆಯ ಅಧ್ಯಾಯವು ಮುಗಿದುದು
 

 
ಶ್ರೀಮಧ್ವೇಶಾರ್ಪಣಮಸ್ತು ॥