This page has not been fully proofread.

೨೧೬
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
ಹರಿಣಾ ಸ್ವಯಮ್ ।
 
ನಿರ್ದೋಷಾಖಿಲಸಂಪೂರ್ಣಗುಣೇನ
 
ಬ್ರಹ್ಮಣೇ ಕಥಿತಾತ್ ತಂತ್ರಸಾರಾದ್ ಉದ್ಘತ್ಯ ಸಾದರಮ್ ।
ಆನಂದತೀರ್ಥಮುನಿನಾ ಕೃತೋ ಗ್ರಂಥೋಽಯಮಂಜಸಾ ॥163॥
 
ಗ್ರಂಥೋSಯಂ ಪಾಠಮಾತ್ರೇಣ ಸಕಲಾಭೀಷ್ಟಸಿದ್ಧಿದಃ ।
 
ಕಿಮು ಜ್ಞಾನಾದ್ ಅನುಷ್ಠಾನಾದ್ ಉಭಯಸ್ಮಾತ್ ಪುನಃ ಕಿಮು 164
ಅರ್ಥ ದೋಷಗಂಧರಹಿತನೂ, ಸಮಸ್ತಗುಣಪೂರ್ಣನೂ ಆಗಿರುವ
ಶ್ರೀಭಗವಂತನಿಂದ ತಾನೇ ಸ್ವಯಂ ಚತುರ್ಮುಖಬ್ರಹ್ಮದೇವನಿಗೆ ಆದರಪೂರ್ವಕ
ವಾಗಿ ಉಪದೇಶಿಸಲ್ಪಟ್ಟ ತಂತ್ರಸಾರ'ವೆಂಬ ಗ್ರಂಥದಿಂದ ಕೆಲವು ಪ್ರಧಾನಾಂಶ-
ಗಳನ್ನು ಸಂಗ್ರಹಮಾಡಿ ಆನಂದತೀರ್ಥರೆಂಬ ಅಭಿಧಾನದಿಂದ ಶೋಭಿಸುತ್ತಿರುವ
ನನ್ನಿಂದ ರಚಿಸಲ್ಪಟ್ಟಿದೆ. ಈ ಗ್ರಂಥವಾದರೂ ಅರ್ಥಾನುಸಂಧಾನವಿಲ್ಲದೆ ಪಠಿಸಿದರೂ
ಸಮಸ್ತ ಇಷ್ಟಾರ್ಥಗಳನ್ನು ಸಲ್ಲಿಸುವುದು(??). ಹೀಗಿರಲು ಅರ್ಥಾನುಸಂಧಾನ-
ಪೂರ್ವಕ ಪಠಿಸಿದರೆ ಸರ್ವಾಭೀಷ್ಟಸಿದ್ಧಿಯಾಗುವುದೆಂದು ಹೇಳುವುದೇನು? ಇಲ್ಲಿ
ಹೇಳಿದ ಕರ್ಮಾನುಷ್ಠಾನ ಮಾಡಿದರಂತೂ ಇಷ್ಟಾರ್ಥಗಳು ಕೈಗೂಡುವುದರಲ್ಲಿ
ಸಂಶಯವೇ ಇರುವುದಿಲ್ಲ. ಜ್ಞಾನಪೂರ್ವಕವಾಗಿ ಕರ್ಮಾನುಷ್ಠಾನ ಮಾಡಿದರಂತೂ
ಸಕಲಾಭೀಷ್ಟಗಳೂ ಲಭಿಸುವುದೆಂದು ಸುತರಾಂ ಸಿದ್ಧವೇ!
 
ಆಚಾರ್ಯರ ಸ್ವರೂಪಕಥನ; ಲಘುವಾಯುಸ್ತುತಿ
 
ಯಸ್ಯ ತ್ರೀಣ್ಯದಿತಾನಿ ವೇದವಚನೇ ರೂಪಾಣಿ ದಿವ್ಯಾನ್ಯಲಂ
ಬಟ್ ತದ್ದರ್ಶ ತಮಿತಮೇವ ನಿಹಿತಂ ದೇವಸ್ಯ ಭರ್ಗೋ ಮಹತ್ ।
ವಾಯೋ ರಾಮವಚೋನಯಂ ಪ್ರಥಮಕಂ ಪೃ ದ್ವಿತೀಯಂ ವಪು-
ರ್ಮಧೈ ಯತ್ತು ತೃತೀಯಮೇತದಮುನಾ ಗ್ರಂಥಃ ಕೃತಃ ಕೇಶವೇ ॥165॥
ಯಾವ ಹನುಮ,ಭೀಮ, ಮಧ್ವರೆಂದು ಮೂರು ವಾಯುದೇವರ
ದಿವ್ಯರೂಪಗಳು ಬಳಿತ್ಸಾ ಮೊದಲಾದ ವೇದಮಂತ್ರಗಳಲ್ಲಿ ಹೇಳಲ್ಪಟ್ಟಿರುತ್ತವೆಯೋ
ಅಂತಹ ವಾಯುದೇವರ ಮೂಲರೂಪವು ಪೂರ್ಣವಾದ ಬಲ ಹಾಗೂ ಜ್ಞಾನ-
ವುಳ್ಳದ್ದಾಗಿದೆ. ಭಗವಂತನ ಆದೇಶದಂತೆ ಭಗವತೇರಿತವಾಗಿ ಹನುಮದಾದಿ
ಮೂರು ರೂಪಗಳಿಂದ ಅವತಾರ ಮಾಡಿರುತ್ತಾರೆ. ಆ ಮೂರು ರೂಪಗಳಲ್ಲಿ
 
ಅರ್ಥ
 
-