This page has not been fully proofread.

ವೇದಮಾತೆ ಗಾಯತ್ರಿಯ ನಿಷ್ಪತ್ತಿ
 
ತದ್ದೇದಃ ಪೌರುಷಂ ಸೂಕ್ತಂ ವೇದಾಃ ಪುರುಷಸೂಕ್ತಗಾಃ ॥15॥
ಅರ್ಥ ಗಾಯತ್ರಿಯ ಇಪ್ಪತ್ತನಾಲ್ಕು 'ತತ್' ಮೊದಲಾದ ಅಕ್ಷರಗಳಿಗೆ
ಕೇಶವಾದಿ ಇಪ್ಪತ್ತನಾಲ್ಕು ಮೂರ್ತಿಗಳು ವರ್ಣದೇವತೆಗಳೆನಿಸಿವೆ. ಗಾಯತ್ರಿಯ
ಮೂರುಪಾದಗಳಿಂದ ಪುರುಷಸೂಕ್ತದ ಮೂರುವರ್ಗಗಳೂ ಅಭಿವ್ಯಕ್ತವಾದವು.
ವರ್ಗತ್ರಯಾತ್ಮಕವಾದ ಪುರುಷಸೂಕ್ತದಿಂದ ಋಕ್,ಯಜುಃ,ಸಾಮವೆಂಬ ಮೂರು
ವೇದಗಳು ಅಭಿವ್ಯಕ್ತವಾದವು.
 
ವ.ಟೀ.
 
ಮೂರ್ತಯಃ । ತದ್ವೇದಃ = ಗಾಯಭೇದಃ ।
 
ಗಾಯಕ್ಷರದೇವತಾಃ ಕೇಶವಾದಿಕೃಷ್ಣಾಂತಾ ಚತುರ್ವಿಂಶತಿ-
-
 
ಟೀಕಾರ್ಥ
 
ಗಾಯತ್ರಿಯಲ್ಲಿರುವ ಇಪ್ಪತ್ತನಾಲ್ಕು ತತ್ಸವಿತುಃ ಮೊದಲಾದ
ಅಕ್ಷರಗಳಿಗೆ ಕೇಶವ ಮೊದಲಾಗಿ ಶ್ರೀಕೃಷ್ಣಪರ್ಯಂತ ರೂಪಗಳು ದೇವತೆಗಳು. ತದ್ಭದ
ಎಂದರೆ ತ್ರಿಪಾದವುಳ್ಳ ಗಾಯತ್ರಿಯಿಂದ ಭಿನ್ನವೆಂದರ್ಥ; ಅಭಿವ್ಯಕ್ತವಾಗಿವೆ ಎಂದು ಭಾವ.
 
11
 
ವೈದಿಕಾಸ್ಸರ್ವಶಬ್ದಾಶ್ಚ ತಸ್ಮಾತ್ ಸರ್ವಾಭಿಧೋ ಹ್ಯಹಮ್ ।
ಪಂಚಾಶದ್ವರ್ಣಭಿನ್ನಾಶ್ಚ ಸರ್ವಶಬ್ದಾ ಅತೋಽಪಿ ಚ ।16॥
 
ಅರ್ಥ - ಪುರಾಣೇತಿಹಾಸಾದಿಗಳು, ವಿಷ್ಣು ಷಡಕ್ಷರ ಮೊದಲಾದ ಮಂತ್ರಪ್ರಪಂಚ,
ಸಂಸ್ಕೃತಶಬ್ದಗಳೆಲ್ಲವೂ ವೇದಗಳಿಂದಲೇ ಅಭಿವ್ಯಕ್ತಗಳಾಗಿವೆ. ಆದ್ದರಿಂದಲೇ ನಾನು
ಸರ್ವಶಬ್ದವಾಚ್ಯನಾಗಿದ್ದೇನೆ. ನನ್ನನ್ನು ಪ್ರಧಾನವಾಗಿ ತಿಳಿಸುವ ಓಂಕಾರದಿಂದ
ಅಭಿವ್ಯಕ್ತಿ ಹೊಂದಿದ ಐವತ್ತು ಅಕ್ಷರಗಳೇ ಶಬ್ದಪ್ರಪಂಚವನ್ನೆಲ್ಲ ವ್ಯಾಪಿಸಿರುವು-
ದರಿಂದಲೂ ನಾನು ಸರ್ವಶಬ್ದವಾಚ್ಯನಾಗಿರುವೆನು.
 
ಪಂಚಾಶದಿತಿ ॥ ಅತಮ್ಮ
 
ಸರ್ವಶಬ್ದಾಭಿ-
ವ.ಟೀ.
ಧೇಯೋsಸ್ತೀತಿ ಸಂಬಂಧಃ ।
 
ಟೀಕಾರ್ಥ – ಸಮಸ್ತಶಬ್ದಪ್ರಪಂಚವೂ ವೇದಗಳಿಂದಲೇ ಅಭಿವ್ಯಕ್ತಗಳಾಗಿವೆ. ಆದ್ದರಿಂದ
ನಾನು ಸರ್ವಶಬ್ದವಾಚ್ಯನಾಗಿರುವೆನು. ಇದು ಸರ್ವಶಬ್ದವಾಚ್ಯತ್ವದಲ್ಲಿ ಒಂದು ಯುಕ್ತಿ-
ಯಾಯಿತು. 'ಪಂಚಾಶತ್' ಎಂಬುದರಿಂದ ಮತ್ತೊಂದು ಯುಕ್ತಿಯನ್ನು ಹೇಳುತ್ತಿರುವರು.
ನನ್ನನ್ನು ತಿಳಿಸುವ ಓಂಕಾರದಿಂದ ಅಭಿವ್ಯಕ್ತಗಳಾದ ಐವತ್ತು ಅಕ್ಷರಗಳಿಂದಲೇ ಶಬ್ದ
ಪ್ರಪಂಚವೆಲ್ಲ ತುಂಬಿರುವುದರಿಂದಲೂ ನಾನು ಸರ್ವಶಬ್ದವಾಚ್ಯನೆಂದು ಭಾವ.
 
ಪ್ರಣವಾದಿಮಂತ್ರಗಳ ಋಷಿದೇವತೆಗಳು
 
ಯುಕ್ಯಂತರಂ ಚಾಹ