This page has not been fully proofread.

ಚತುರ್ಥೋಽಧ್ಯಾಯಃ
 
ಆಸನಾದಿಗಳಲ್ಲಿನ ತಾರತಮ್ಯ
 
ಆಸಾ ಶೌಚಂ ಪ್ರಾಣಯ
 
ನಿಷ್ಪರಿಗ್ರಹಪೂರ್ವಕಾಃ ।
 
ತಪ ಆದ್ಯಾ ಕ್ರಮಾತ್ ಸರ್ವೆ ಉತ್ತರೋತ್ತರತೋSಧಿಕಾಃ ।
ಸರ್ವಸ್ಮಾತ್ ಶ್ರವಣಾದ್ಯಾಸ್ತು ಮುಖ್ಯಾ ಮುಕ್ತಿಪ್ರಸಾಧನೇ II140
 
ಅಜ್ಞಸ್ಯ ಶ್ರವಣಂ ಶ್ರೇಷ್ಠಮ್ ಅಯುಕ್ತಃ ಮನನಂ ತಥಾ ।
ಧ್ಯಾನಂ ನಿಶ್ಚಿತತತ್ತ್ವಸ್ಯ ತಸ್ಮಾತ್ ಶಾಸ್ತಾವಮರ್ಶನಮ್ 141
 
-
 
ಅರ್ಥ ಆಸನ, ಶೌಚ, ಪ್ರಾಣಾಯಾಮ, ವೈರಾಗ್ಯ, ಅಹಿಂಸೆ, ಸತ್ಯ,
ಆಸ್ತೇಯ ಮೊದಲಾದವುಗಳು, ತಪಸ್ಸು, ತುಷ್ಟಿ ಇವುಗಳೆಲ್ಲವೂ ಕ್ರಮವಾಗಿ
ಮೊದಲು ಮೊದಲು ಉಕ್ತವಾದವುಗಳಿಗಿಂತ ಮುಂದು ಮುಂದು ಹೇಳಿದವುಗಳು
ಶ್ರೇಷ್ಠವಾಗಿರುತ್ತವೆ.
 
೨೦೭
 
ಹಿಂದೆ ಹೇಳಿದ ಎಲ್ಲಾ ಆಸನಾದಿಗಳಿಗಿಂತಲೂ ಶ್ರವಣ, ಮನನ, ಶಾಸ್ತ್ರಾಥ-
ವಿಮರ್ಶೆಯೆಂಬ ನಿದಿಧ್ಯಾಸನಗಳು ಮೋಕ್ಷಸಾಧನೆಯಲ್ಲಿ ಪ್ರಧಾನಸಾಧನಗಳು.
ಶಾಸ್ತ್ರಜ್ಞಾನರಹಿತರಾದವರಿಗೆ ಗುರುಮುಖದಿಂದ ಶಾಸ್ತ್ರಾರ್ಥಶ್ರವಣವೇ ಮುಖ್ಯ-
ವಾಗಿರುತ್ತವೆ ಹೊರತು ಮನನಾದಿಗಳಲ್ಲ. ಶಾಸ್ತ್ರಶ್ರವಣಮಾಡಿದ್ದರೂ ಶಾಸ್ತ್ರ-
ಪ್ರಮೇಯದಲ್ಲಿ ಸಂಶಯವಿರುವವನಿಗೆ ದಾರ್ಡ್ಯಕ್ಕಾಗಿ ಮನನವು ಮುಖ್ಯವಾಗಿ-
ರುತ್ತದೆ.
 
ಶ್ರವಣ-ಮನನಾದಿಗಳಿಂದ ಅಜ್ಞಾನ, ಸಂಶಯ, ವಿಪರ್ಯಯಗಳನ್ನು ಕಳೆದು
ಕೊಂಡು ತತ್ವನಿಶ್ಚಯವುಳ್ಳವನಿಗೆ ಧ್ಯಾನವು ಹಾಗೂ
ಹಾಗೂ ಶಾಸ್ತ್ರಾವಮರ್ಶವು
ಮಾಡಬೇಕು. (???))
 
ರೇಚಯಿತ್ವಾ ದಕ್ಷಿಣತಃ ಪೂರಯಿತ್ವಾಚ ವಾಮತಃ ।
ಕುಂಭಕಶ್ಚ ಸುಷುಮ್ಮಾಯಾಂ ವಿಷ್ಣುಂ ವಾಯುಂ ಚ ಸಂಸ್ಮರೇತ್ ॥
 
ಪ್ರಾಣಾಯಾಮ ಮಾಡುವಾಗ ಮಂತ್ರ, ಮಂತ್ರದೇವತೆ, ವಾಯು, ಭಗವಂತ ಇವರನ್ನು
ಸ್ಮರಿಸುತ್ತಾ ಇದ್ದರೆ ಈ ಪ್ರಾಣಾಯಾಮ 'ನಿದಿಧ್ಯಾಸನ'ವೆನಿಸುತ್ತದೆ.
 
ಕೇವಲ ವಿಷ್ಣುವಿನ ಸ್ಮರಣೆ ಮಾತ್ರವಿದ್ದರೆ ಇದು 'ಧ್ಯಾನ' ಎಂಬ ಪ್ರಕಾರದ ಪ್ರಾಣಾಯಾಮ.
 
ಭಗವಂತನ ಸ್ಮರಣೆಯಿಲ್ಲದೆ ಕೇವಲ ಮಂತ್ರಸ್ಮರಣೆಯು 'ನಿಯಮ'ವೆನಿಸುತ್ತದೆ.