This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಏಕಸ್ಯ ಶಿಷ್ಯತಾಂ ಪ್ರಾಪ್ಯ ತದಾಜ್ಞಾಂ ನ ವಿನಾ ಸಮಮ್ ।

ಅವರಂ ವಾ ವ್ರಜೇದುಚ್ಚಗುಣಸ್ಟೇಶ್ಚೇನ್ ನೈವ ದುಷ್ಯತಿ 1113311
 
೨೦
॥ ೧
 
೩ ॥
 
ಅರ್ಥ - ಒಬ್ಬ ಗುರುವಿನ ಶಿಷ್ಯತನವನ್ನು ಹೊಂದಿ, ಅವರ ಅನುಮತಿಯಿಲ್ಲದೆ
ಅವರ ಸಮಾನನನ್ನಾಗಲೀ, ಅವರಿಗಿಂತ ಅಧಮಗುರುಗಳನ್ನಾಗಲೀ ಹೊಂದ-
ಬಾರದು. ಹಿಂದಿನ ಗುರುಗಳು ಅನುಮತಿ ನೀಡಿದಲ್ಲಿ ಹೊಂದಬಹುದು. ಆದರೆ
ಮೊದಲಿನ ಗುರುಗಳಿಗಿಂತ ಜ್ಞಾನಭಕ್ತಾತ್ಯಾದಿಗಳಲ್ಲಿ ಅಧಿಕರಾದ ಗುರುಗಳು ದೊರೆತರೆ
ಹಿಂದಿನ ಗುರುಗಳ ಅನುಮತಿಯಿಲ್ಲದೇನೇ ಉತ್ತಮ ಗುರುವನ್ನು ಹೊಂದಿದರೂ
ದೋಷವಿಲ್ಲ.
 

 
ವಿಶೇಷತೋ ಗುಣತ್ವಶ್ಚ ಸ್ಯಾದ್ ದೇವೇಷ್ಟಪ್ಯೇವಮೇವ ಹಿ

ತಸ್ಮಾದುತ್ತಮವಾಮಾಚಾರ್ಯಂ ದೇವೇಶಂ ಚಾಶ್ರಯೇದ್ ಹರಿಮ್ 1134
 
೧೩೪ ॥
 
ಅರ್ಥ - ಉತ್ತಮಗುರುಗಳನ್ನು ಹೊಂದುವುದರಿಂದ ವಿಶೇಷವಾದ ಜ್ಞಾನಾದಿ-
ಗಳನ್ನು ಸಂಪಾದಿಸಬಹುದು. ಗುರುಗಳನ್ನು ಸ್ವೀಕರಿಸುವ ವಿಷಯದಲ್ಲಿ ಮಾನವರಲ್ಲಿ
ಮಾತ್ರವಲ್ಲದೆ ದೇವತೆ- ಗಳಲ್ಲಿಯೂ ಇದೇ ನ್ಯಾಯವನ್ನು ಇಟ್ಟುಕೊಳ್ಳಬೇಕು.
ಆದ್ದರಿಂದ ಸರ್ವರಿಗೂ ಉತ್ತಮರಾದ ಗುರುಗಳು ಬ್ರಹ್ಮ-ವಾಯುಗಳು, ನಂತರ

ವಿದ್ಯಾಭಿಮಾನಿನಿಯರಾದ ಸರಸ್ವತೀ-ಭಾರತಿಯರು, ನಂತರ ಗರುಡಾದಿಗಳನ್ನು
ಗುರುತೇನ ಸ್ವೀಕರಿಸಬೇಕು. ಹೀಗೆ ಉತ್ತಮರಾದ ಗುರುಗಳನ್ನೂ, ಸರ್ವೋತ್ತಮ-
ನಾದ ಶ್ರೀಹರಿಯನ್ನು ಆಶ್ರಯಿಸಿ ಕೃತಾರ್ಥರಾಗಬೇಕು.
 
[^1]
 
[^1]
. ವಿಶೇಷಾಂಶ -
 
ಬ್ರಹ್ಮದೇವರೇ ಸರ್ವದಾ ಸರ್ವರಿಗೂ ಮುಖ್ಯ ಗುರುವೆನಿಸಿದ್ದಾರೆ. ಇತರ ದೇವತೆಗಳೂ ಸಹ
ತಾರತಮ್ಯಾನುಸಾರ- ವಾಗಿ ಗುರುಗಳೇ ಆಗಿರುವರು.
 

ತಸ್ಮಾದ್ ಬ್ರಹ್ಮಾ ಗುರುರ್ಮುಖ್ಯಃ ಸರ್ವಷಾಮೇವ ಸರ್ವದಾ ।
 

ಅನ್ವೇSಪಿ ಸ್ವಾತ್ಮನೋ ಮುಖ್ಯಾಃ ಕ್ರಮಾದ್ ಗುರವ ಈರಿತಾಃ ॥ ಮ.ಭಾ.ತಾ.ನಿ. ೧/೧೧೯

ಹಿಂದೆ ಹೊಂದಿದ್ದ ಗುರುವಿಗಿಂತ ಉತ್ತಮನು ದೊರೆತಾಗ ವಿಚಾರ ವಿಲ್ಲದೆ ಸ್ವೀಕರಿಸಬಹುದು.
ಪೂರ್ವಗುರುವಿಗೆ ಸಮಾನನಾದರೆ ವಿಕಲ್ಪವು. ಅನುಜ್ಞೆ ಪಡೆಯಬೇಕಿಲ್ಲ. ಪೂರ್ವಗುರುವಿನ

ಅನುಮತಿ ಇಲ್ಲದೆ ಇತರ ಅಧಮಗುರುವನ್ನು ಪಡೆಯು-
ವುದಾದಲ್ಲಿ ಗುರುಲಂಘನದೋಷವು.
ಇದರ ಪರಿಣಾಮ ಗೌರವರೌರವ ನರಕವು.
 

"ಗುರುಮಂತ್ರಪರಿತ್ಯಾಗೀ ರೌರವಂ ನರಕಂ ವ್ರಜೇತ್''