This page has been fully proofread once and needs a second look.

೨೦೨
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಪ್ರತಿಮಾಲಕ್ಷಣೈರ್ಯಾವದ್ ಯುಕ್ತ ಆಚಾರ್ಯ ಉತ್ತಮಃ ।

ಸರ್ವವಿತ್ತಪಸಾ ಯುಕ್ತ ಆಜ್ಞಾಶಕ್ತಿಯುತೋ ಹರೇ ॥130
 
-
 
೧೩೦ ॥
 
ಅರ್ಥ - ಪ್ರತಿಮಾನಿರ್ಮಾಣದಲ್ಲಿ ಹೇಳಿದ ಲಕ್ಷಣಗಳಿಂದ ಯುಕ್ತನಾದವನೂ,
ಸರ್ವವನ್ನೂ ಬಲ್ಲವನೂ, ತಪಸ್ವಿಯಾದ- ವನೂ, ಭಗವಂತನ ಆಜ್ಞೆಯಂತಿರುವ
ಶ್ರುತಿಸ್ಮೃತಿಗಳಲ್ಲಿ ಹೇಳಿದ 'ಸಕಲಕರ್ಮಗಳನ್ನು ಮಾಡಲು ಶಕ್ತಿಯಿರುವ ಗುರುವೇ
ಉತ್ತಮ ಗುರುವು'.
 
[^1]
 
ಗುರುಗಳ ವಿಚಾರ
 

 
ಯಾವದಕ್ಕೋದ್ಭಕ್ತೋ ಯಥಾ ಲ: ಗುಬ್ಧೈಃ ಗುಣಯುಕ್ತೋ ಹಿ ವೈಷ್ಣವಃ ।

ಗುರುಃ ಸತ್ಸಂಪ್ರದಾಯಜ್ಞಃ ತಾರತಮ್ಯೇನ ಸಿದ್ದಿದ
 
ಧಿದಃ 131 ೧೩೧
 

 
ಅರ್ಥ
 
- ತನ್ನ ಯೋಗ್ಯತಾನುಸಾರ ಭಗವಂತನಲ್ಲಿ ಭಕ್ತಿಮಾಡು- ವವನು,
ಯಥಾಶಕ್ತಿ ಶಾಸ್ತ್ರಾದಿಪಾಂಡಿತ್ಯವುಳ್ಳವನೂ, ವೈಷ್ಣವ ದೀಕ್ಷೆಯನ್ನು ಪಡೆದವನೂ,
ಸತ್ಸಂಪ್ರದಾಯವನ್ನು ತಿಳಿದ ಎಲ್ಲ ಸ್ತೋವೋತ್ತಮರೂ ತಾರತಮ್ಯದಿಂದ ಗುರುಗಳೇ
ಆಗಿರುವರು. ಇವರು ತಾರತಮ್ಯಾನುಸಾರವಾಗಿಯೇ ಫಲವನ್ನು ನೀಡುವರು.
 
-
 

 
ಉತ್ತಮಾದುತ್ತಮಾ ಸಿದ್ದಿ:ಧಿಃ ಧರ್ಮಮೋಕ್ಷಾದಿಷು ಸುಸ್ಫುಟಮ್ ।

ತಸ್ಮಾದುತ್ತಮ ಆಚಾರ್ಯೇ ಲಬ್ಧೇ ನಾತೋಽವರಂ ವ್ರಜೇತ್ 132
೧೩೨ ॥
 
ಅರ್ಥ - ಉತ್ತಮರಾದ ಗುರುವಿನಿಂದ ಬರುವ ಸಿದ್ಧಿಯೂ ಸಹ ಉತ್ತಮವೇ
ಆಗಿರುತ್ತದೆ. ಉತ್ತಮಗುರುಗಳಿಂದಲೇ ಧರ್ಮ, ಜ್ಞಾನ, ವೈರಾಗ್ಯ, ಮೋಕ್ಷಾದಿಗಳಲ್ಲಿ
ಹೆಚ್ಚಿನ ಸಿದ್ಧಿಯನ್ನು ಪಡೆಯಬಹು- ದಾಗಿದೆ. ಆದ್ದರಿಂದ ಉತ್ತಮಗುರುಗಳು ಸಿಕ್ಕಿದಾಗ
ಅವರನ್ನು ಹೊಂದದೆ ಅಧಮಗುರುಗಳನ್ನು ಅರಸಬಾರದು. ಇದರಿಂದ

ಸಿದ್ಧಿಯಾಗಲಾರದು.
 

 
[^
1]. ದ್ವಾತ್ರಿಂಶಲ್ಲಕ್ಷಣೈರ್ಯುಕ್ಕೇತೋ ಗುರುರುತ್ತಮ ಉಚ್ಯತೇ ।

ಬ್ರಹ್ಮೈವ ತಾದೃಶಸ್ತಸ್ಯ ಸಮೋ ನಾನ್ನೋಯೋSಸ್ತಿ ಕಶ್ಚನ ॥ - ಸನ್ಮಾಸನ್ನ್ಯಾಸಪದ್ಧತಿ

ಈ ಲಕ್ಷಣವಾದರೋ ಶ್ರೀಮನ್ಮಧ್ವಾಚಾರ್ಯರಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ ಎಂದು
ಶ್ರೀತ್ರಿವಿಕ್ರಮಪಂಡಿತಾಚಾರ್ಯರು ತಿಳಿಸಿದ್ದಾರೆ - "ಪ್ರತ್ಯಕ್ಷಮೇವ ಚೈತಲ್ಲಕ್ಷಣಂ ದೃಶ್ಯತೇ
ಭಗವತಿ ಭಾಷ್ಯಕಾರೇ'' – ತತ್ವ ಪ್ರದೀಪ.