This page has not been fully proofread.

೨೦೨
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಪ್ರತಿಮಾಲಕ್ಷರ್ಯಾವದ್ ಯುಕ್ತ ಆಚಾರ್ಯ ಉತ್ತಮಃ ।
ಸರ್ವವಿತ್ತಪಸಾ ಯುಕ್ತ ಆಜ್ಞಾಶಕ್ತಿಯುತೋ ಹರೇ ॥130
 
-
 
ಅರ್ಥ - ಪ್ರತಿಮಾನಿರ್ಮಾಣದಲ್ಲಿ ಹೇಳಿದ ಲಕ್ಷಣಗಳಿಂದ ಯುಕ್ತನಾದವನೂ,
ಸರ್ವವನ್ನೂ ಬಲ್ಲವನೂ, ತಪಸ್ವಿಯಾದವನೂ, ಭಗವಂತನ ಆಜ್ಞೆಯಂತಿರುವ
ಶ್ರುತಿಸ್ಮೃತಿಗಳಲ್ಲಿ ಹೇಳಿದ 'ಸಕಲಕರ್ಮಗಳನ್ನು ಮಾಡಲು ಶಕ್ತಿಯಿರುವ ಗುರುವೇ
ಉತ್ತಮ ಗುರುವು'.
 
ಗುರುಗಳ ವಿಚಾರ
 
ಯಾವದಕ್ಕೋ ಯಥಾ ಲ: ಗುಯು ಹಿ ವೈಷ್ಣವಃ ।
ಗುರುಃ ಸಂಪ್ರದಾಯಜ್ಞಃ ತಾರತಮ್ಯನ ಸಿದ್ದಿದ
 
॥131॥
 
ಅರ್ಥ
 
ತನ್ನ ಯೋಗ್ಯತಾನುಸಾರ ಭಗವಂತನಲ್ಲಿ ಭಕ್ತಿಮಾಡುವವನು,
ಯಥಾಶಕ್ತಿ ಶಾಸ್ತ್ರಾದಿಪಾಂಡಿತ್ಯವುಳ್ಳವನೂ, ವೈಷ್ಣವದೀಕ್ಷೆಯನ್ನು ಪಡೆದವನೂ,
ಸಂಪ್ರದಾಯವನ್ನು ತಿಳಿದ ಎಲ್ಲ ಸ್ತೋತ್ತಮರೂ ತಾರತಮ್ಯದಿಂದ ಗುರುಗಳೇ
ಆಗಿರುವರು. ಇವರು ತಾರತಮ್ಯಾನುಸಾರವಾಗಿಯೇ ಫಲವನ್ನು ನೀಡುವರು.
 
-
 
ಉತ್ತಮಾದುತ್ತಮಾ ಸಿದ್ದಿ: ಧರ್ಮಮೋಕ್ಷಾದಿಷು ಸುಟಮ್ ।
ತಸ್ಮಾದುತ್ತಮ ಆಚಾರ್ಯ ಲಬ್ ನಾತೋಽವರಂ ವ್ರಜೇತ್ 132॥
ಅರ್ಥ - ಉತ್ತಮರಾದ ಗುರುವಿನಿಂದ ಬರುವ ಸಿದ್ಧಿಯೂ ಸಹ ಉತ್ತಮವೇ
ಆಗಿರುತ್ತದೆ. ಉತ್ತಮಗುರುಗಳಿಂದಲೇ ಧರ್ಮ, ಜ್ಞಾನ, ವೈರಾಗ್ಯ, ಮೋಕ್ಷಾದಿಗಳಲ್ಲಿ
ಹೆಚ್ಚಿನ ಸಿದ್ಧಿಯನ್ನು ಪಡೆಯಬಹುದಾಗಿದೆ. ಆದ್ದರಿಂದ ಉತ್ತಮಗುರುಗಳು ಸಿಕ್ಕಿದಾಗ
ಅವರನ್ನು ಹೊಂದದೆ ಅಧಮಗುರುಗಳನ್ನು ಅರಸಬಾರದು. ಇದರಿಂದ
ಸಿದ್ಧಿಯಾಗಲಾರದು.
 
1. ದ್ವಾತ್ರಿಂಶಲಕ್ಷರ್ಯುಕ್ಕೇ ಗುರುರುತ್ತಮ ಉಚ್ಯತೇ ।
ಬ್ರಹ್ಮವ ತಾದೃಶಸ್ತಸ್ಯ ಸಮೋ ನಾನ್ನೋSಸ್ತಿಕಶ್ಚನ ॥ - ಸನ್ಮಾಸಪದ್ಧತಿ
ಈ ಲಕ್ಷಣವಾದರೋ ಶ್ರೀಮನ್ಮಧ್ವಾಚಾರ್ಯರಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ ಎಂದು
ಶ್ರೀತ್ರಿವಿಕ್ರಮಪಂಡಿತಾಚಾರ್ಯರು ತಿಳಿಸಿದ್ದಾರೆ - "ಪ್ರತ್ಯಕ್ಷಮೇವ ಚೈತಲ್ಲಕ್ಷಣಂ ದೃಶ್ಯತೇ
ಭಗವತಿ ಭಾಷ್ಯಕಾರೇ'' – ತತ್ವ ಪ್ರದೀಪ.