This page has been fully proofread once and needs a second look.

ವ.ಟೀ.- ದ್ವಾದಶಾಕ್ಷರಮಂತ್ರಾಣಾಂ ನಾರಾಯಣಾಷ್ಟಾಕ್ಷರಾದ್ ವ್ಯಾಹೃತಿ-ಚತುಷ್ಟಯಾಚ್ಚ ಉತ್ಪತ್ತಿರ್ಜ್ಞೇಯಾ । ದ್ವಾದಶಾ- ಕ್ಷರಾಣಾಂ ಕೇಶವಾದ್ಯಾ ದ್ವಾದಶದೇವತಾ ಜ್ಞೇಯಾ ಇತ್ಯರ್ಥ: ॥
 
ಟೀಕಾರ್ಥ- ದ್ವಾದಶಾಕ್ಷರಮಂತ್ರದಲ್ಲಿರುವ ಹನ್ನೆರಡು ಅಕ್ಷರಗಳಲ್ಲಿ ಎಂಟಕ್ಷರ ಅಷ್ಟಾಕ್ಷರದಿಂದಲೂ, ನಾಲ್ಕು ಅಕ್ಷರಗಳು ನಾಲ್ಕು ವ್ಯಾಹೃತಿಗಳಿಂದ ಉತ್ಪನ್ನವಾದವೆಂದು ತಿಳಿಯಬೇಕು. ಈ ದ್ವಾದಶಾಕ್ಷರದ ಹನ್ನೆರಡು ಅಕ್ಷರಗಳಿಗೆ ಕೇಶವ,ನಾರಾಯಣ,
ಮಾಧವಾದಿ ಹನ್ನೆರಡು ರೂಪಗಳು ದೇವತೆಗಳಾಗಿವೆ.
 
ವೇದಮಾತೆಗಾಯತ್ರಿಯ ನಿಷ್ಪತ್ತಿ
 
ನಾರಾಯಣಾಷ್ಟಾಕ್ಷರಾಚ್ಯ ವ್ಯಾಹೃತಿತ್ರಿಗುಣಾತ್ ಪುನಃ ।
ವೇದಮಾತಾ ತು ಗಾಯತ್ರೀ ದ್ವಿಗುಣಾ ದ್ವಾದಶಾಕ್ಷರಾತ್ ॥ ೧೪ ॥
 
ಅರ್ಥ - ಮೂರು ಬಾರಿ ಉಚ್ಚರಿಸಲ್ಪಟ್ಟ ಅಷ್ಟಾಕ್ಷರಮಂತ್ರದಿಂದ 8x3:24; ಎರಡುಬಾರಿ ಆವೃತ್ತಿ ಮಾಡಿದ ದ್ವಾದಶಾಕ್ಷರ ಮಂತ್ರ- ದಿಂದ ವೇದಗಳಿಗೆ ಮಾತೆಯೆನಿಸಿದ ಇಪ್ಪತ್ತನಾಲ್ಕು ಅಕ್ಷರಗಳುಳ್ಳ ಗಾಯತ್ರೀಮಂತ್ರವು ಉತ್ಪನ್ನವಾಗಿದೆ.
 
ವ.ಟೀ.-ಗಾಯತ್ರ್ಯುತ್ಪತ್ತಿಮಾಹ ನಾರಾಯಣೇತಿ ॥ ತ್ರಿಗುಣಿತ ವ್ಯಾಹರಣೇ ಅಷ್ಟಾಕ್ಷರಸ್ಯ ಚತುರ್ವಿಂಶತ್ಯಕ್ಷರತ್ವಂ ಭವತಿ । ತಸ್ಮಾತ್ ನಾರಾಯಣಾಷ್ಟಾಕ್ಷರಾತ್ ಗಾಯತ್ರ್ಯುತ್ಪನ್ನೇತ್ಯರ್ಥಃ ।
 
ಟೀಕಾರ್ಥ- ನಾರಾಯಣಾಷ್ಟಾಕ್ಷರಾಚ್ಚ ಎಂಬ ಶ್ಲೋಕದಲ್ಲಿ ಗಾಯತ್ರಿಯು ಉತ್ಪನ್ನವಾದ ಬಗೆಯನ್ನು ಹೇಳುತ್ತಾರೆ. ನಾರಾಯಣಾಷ್ಟಾಕ್ಷರಮಂತ್ರವನ್ನು ಮೂರು ಬಾರಿ ಉಚ್ಚರಿಸಿದರೆ ಇಪ್ಪತ್ತನಾಲ್ಕು ಅಕ್ಷರವಾಗುವುದರಿಂದ ನಾರಾಯಣಾಷ್ಟಾಕ್ಷರ ದಿಂದಲೇ ಗಾಯತ್ರಿಯೂ ಉತ್ಪನ್ನವಾಯಿತೆಂದು ತಿಳಿಯುತ್ತದೆ.[^1]
 
ಗಾಯತ್ರೀವರ್ಣದೇವತೆ - ಪುರುಷಸೂಕ್ತ
 
ಚತುರ್ವಿಂಶನ್ಮೂರ್ತಯೋಽಸ್ಯಾಃ ಕಥಿತಾ ವರ್ಣದೇವತಾಃ ।
 

 
[^1]. ವಿಶೇಷಾಂಶ - ಈ ಶ್ಲೋಕಕ್ಕೆ ಇನ್ನೊಂದು ರೀತಿಯ ವ್ಯಾಖ್ಯಾನವೂ ಇದೆ. "ನಾರಾಯಣಾಷ್ಟಾಕ್ಷರದಿಂದ ಹಾಗು ಮೂರುಬಾರಿ ಉಚ್ಚರಿಸಿದ ವ್ಯಾಹೃತಿ ಹಾಗೂ ಪುನಃ ಇನ್ನೊಂದು ಬಾರಿ ಉಚ್ಚರಿಸಿದ ವ್ಯಾಹೃತಿಯಿಂದ (8+4+4+4+4 =24) ಗಾಯತ್ರಿಯು ಉತ್ಪನ್ನವಾಗುತ್ತದೆ'' ಎಂದು.