This page has been fully proofread once and needs a second look.

ತಂತ್ರಸಾರಸಂಗ್ರಹ ಸವ.ಟೀ.- ದ್ವಾದಶಾಕ್ಷರಮಂತ್ರಾಣಾಂ ನಾರಾಯಣಾಷ್ಟಾಕ್ಷರಾದ್ ವ್ಯಾಹೃತಿ-ಚತುಷ್ಟಯಾಚ್ಚ ಉತ್ಪತ್ತಿರ್ಜ್ಞೇಯಾ । ದ್ವಾದಶಾ- ಕ್ಷರಾಣಾಂ ಕೇಶವಾದ್ಯಾ ದ್ವಾದಶದೇವತಾ ಜ್ಞೇಯಾ ಇತ್ಯರ್ಥ: ॥
 
ಟೀಕಾ ಅಧ್ಯಾಯ 1
 
ವ.ಟೀ.
 
ದ್ವಾದಶಾಕ್ಷರಮಂತ್ರಾಣಾಂ ನಾರಾಯಣಾಷ್ಟಾಕ್ಷರಾದ್ ವ್ಯಾಹೃತಿ
ರ್ಥ-
ಚತುಷ್ಟಯಾಚ್ಚ ಉತ್ಪತ್ತಿರ್ಜ್ಞೆಯಾ । ದ್ವಾದಶಾಕ್ಷರಾಣಾಂ ಕೇಶವಾದ್ಯಾ ದ್ವಾದಶದೇವತಾ
ಜೇಯಾ ಇತ್ಯರ್ಥ: ॥
ಟೀಕಾರ್ಥ
 
ದ್ವಾದಶಾಕ್ಷರಮಂತ್ರದಲ್ಲಿರುವ ಹನ್ನೆರಡು ಅಕ್ಷರಗಳಲ್ಲಿ ಎಂಟಕ್ಷರ
ಅಷ್ಟಾಕ್ಷರದಿಂದಲೂ, ನಾಲ್ಕು ಅಕ್ಷರಗಳು ನಾಲ್ಕು ವ್ಯಾಹೃತಿಗಳಿಂದ ಉತ್ಪನ್ನವಾದವೆಂದು
ತಿಳಿಯಬೇಕು. ಈ ದ್ವಾದಶಾಕ್ಷರದ ಹನ್ನೆರಡು ಅಕ್ಷರಗಳಿಗೆ ಕೇಶವ,ನಾರಾಯಣ,

ಮಾಧವಾದಿ ಹನ್ನೆರಡು ರೂಪಗಳು ದೇವತೆಗಳಾಗಿವೆ.
 

 
ವೇದಮಾತೆಗಾಯತ್ರಿಯ ನಿವೃತ್ತಿ
 
ಷ್ಪತ್ತಿ
 
ನಾರಾಯಣಾಷ್ಟಾಕ್ಷರಾಚ್ಯ ವ್ಯಾಹೃತಿತ್ರಿಗುಣಾತ್ ಪುನಃ ।

ವೇದಮಾತಾ ತು ಗಾಯತ್ರೀ ದ್ವಿಗುಣಾ ದ್ವಾದಶಾಕ್ಷರಾತ್ ॥14 ೧೪
 
10
 

 
ಅರ್ಥ - ಮೂರು ಬಾರಿ ಉಚ್ಚರಿಸಲ್ಪಟ್ಟ ಅಷ್ಟಾಕ್ಷರಮಂತ್ರದಿಂದ 8x3:24;
ಎರಡುಬಾರಿ ಆವೃತ್ತಿ ಮಾಡಿದ ದ್ವಾದಶಾಕ್ಷರ ಮಂತ್ರ- ದಿಂದ ವೇದಗಳಿಗೆ ಮಾತೆ-
ಯೆನಿಸಿದ ಇಪ್ಪತ್ತನಾಲ್ಕು ಅಕ್ಷರಗಳುಳ್ಳ ಗಾಯತ್ರೀಮಂತ್ರವು ಉತ್ಪನ್ನವಾಗಿದೆ.
 

 
ವ.ಟೀ.
 
-ಗಾಯತ್ರ್ಯುತ್ಪತ್ತಿ ಮಾಹ ನಾರಾಯಣೇತಿ ॥ ತ್ರಿಗುಣಿತ ವ್ಯಾಹರಣೇ
ಅಷ್ಟಾಕ್ಷರಸ್ಯ ಚತುರ್ವಿಂಶತ್ಯಕ್ಷರತ್ವಂ ಭವತಿ । ತಸ್ಮಾತ್ ನಾರಾಯಣಾಷ್ಟಾಕ್ಷರಾತ್
ಗಾಯತ್ರ್ಯುತ್ಪನ್ನೇತ್ಯರ್ಥಃ ।
 
--
 

 
ಟೀಕಾರ್ಥ- ನಾರಾಯಣಾಷ್ಟಾಕ್ಷರಾಚ್ ಎಂಬ ಶ್ಲೋಕದಲ್ಲಿ ಗಾಯತ್ರಿಯು
ಉತ್ಪನ್ನವಾದ ಬಗೆಯನ್ನು ಹೇಳುತ್ತಾರೆ. ನಾರಾಯಣಾಷ್ಟಾಕ್ಷರಮಂತ್ರವನ್ನು ಮೂರು ಬಾರಿ
ಉಚ್ಚರಿಸಿದರೆ ಇಪ್ಪತ್ತನಾಲ್ಕು ಅಕ್ಷರವಾಗುವುದರಿಂದ ನಾರಾಯಣಾಷ್ಟಾಕ್ಷರ ದಿಂದಲೇ
ಗಾಯತ್ರಿಯೂ ಉತ್ಪನ್ನವಾಯಿತೆಂದು ತಿಳಿಯುತ್ತದೆ.
 
[^1]
 
ಗಾಯತ್ರೀವರ್ಣದೇವತೆ - ಪುರುಷಸೂಕ್ತ

 
ಚತುರ್ವಿಂಶನ್ಮೂರ್ತಯೋಽಸ್ಯಾಃ ಕಥಿತಾ ವರ್ಣದೇವತಾಃ ।
 

 
 
 
[^1]. ವಿಶೇಷಾಂಶ -
ಈ ಶ್ಲೋಕಕ್ಕೆ ಇನ್ನೊಂದು ರೀತಿಯ ವ್ಯಾಖ್ಯಾನವೂ ಇದೆ.
"ನಾರಾಯಣಾಷ್ಟಾಕ್ಷರದಿಂದ ಹಾಗು ಮೂರುಬಾರಿ ಉಚ್ಚರಿಸಿದ ವ್ಯಾಹೃತಿ ಹಾಗೂ ಪುನಃ
ಇನ್ನೊಂದು ಬಾರಿ ಉಚ್ಚರಿಸಿದ ವ್ಯಾಹೃತಿಯಿಂದ (8+4+4+4+4 =24) ಗಾಯತ್ರಿಯು
ಉತ್ಪನ್ನವಾಗುತ್ತದೆ'' ಎಂದು.
 
1. ವಿಶೇಷಾಂಶ