This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ವ.ಟೀ.
 
ದ್ವಾದಶಾಕ್ಷರಮಂತ್ರಾಣಾಂ ನಾರಾಯಣಾಷ್ಟಾಕ್ಷರಾದ್ ವ್ಯಾಹೃತಿ-
ಚತುಷ್ಟಯಾಚ್ಚ ಉತ್ಪತ್ತಿರ್ಜ್ಞೆಯಾ । ದ್ವಾದಶಾಕ್ಷರಾಣಾಂ ಕೇಶವಾದ್ಯಾ ದ್ವಾದಶದೇವತಾ
ಜೇಯಾ ಇತ್ಯರ್ಥ: ॥
ಟೀಕಾರ್ಥ
 
ದ್ವಾದಶಾಕ್ಷರಮಂತ್ರದಲ್ಲಿರುವ ಹನ್ನೆರಡು ಅಕ್ಷರಗಳಲ್ಲಿ ಎಂಟಕ್ಷರ
ಅಷ್ಟಾಕ್ಷರದಿಂದಲೂ, ನಾಲ್ಕು ಅಕ್ಷರಗಳು ನಾಲ್ಕು ವ್ಯಾಹೃತಿಗಳಿಂದ ಉತ್ಪನ್ನವಾದವೆಂದು
ತಿಳಿಯಬೇಕು. ಈ ದ್ವಾದಶಾಕ್ಷರದ ಹನ್ನೆರಡು ಅಕ್ಷರಗಳಿಗೆ ಕೇಶವ,ನಾರಾಯಣ,
ಮಾಧವಾದಿ ಹನ್ನೆರಡು ರೂಪಗಳು ದೇವತೆಗಳಾಗಿವೆ.
 
ವೇದಮಾತೆಗಾಯತ್ರಿಯ ನಿವೃತ್ತಿ
 
ನಾರಾಯಣಾಷ್ಟಾಕ್ಷರಾಚ್ಯ ವ್ಯಾಹೃತಿತ್ರಿಗುಣಾತ್ ಪುನಃ ।
ವೇದಮಾತಾ ತು ಗಾಯತ್ರೀ ದ್ವಿಗುಣಾ ದ್ವಾದಶಾಕ್ಷರಾತ್ ॥14॥
 
10
 
ಅರ್ಥ - ಮೂರು ಬಾರಿ ಉಚ್ಚರಿಸಲ್ಪಟ್ಟ ಅಷ್ಟಾಕ್ಷರಮಂತ್ರದಿಂದ 8x3:24;
ಎರಡುಬಾರಿ ಆವೃತ್ತಿ ಮಾಡಿದ ದ್ವಾದಶಾಕ್ಷರಮಂತ್ರದಿಂದ ವೇದಗಳಿಗೆ ಮಾತೆ-
ಯೆನಿಸಿದ ಇಪ್ಪತ್ತನಾಲ್ಕು ಅಕ್ಷರಗಳುಳ್ಳ ಗಾಯಮಂತ್ರವು ಉತ್ಪನ್ನವಾಗಿದೆ.
 
ವ.ಟೀ.
 
ಗಾಯತ್ಯುತ್ಪತ್ತಿ ಮಾಹ ನಾರಾಯಣೇತಿ ॥ ತ್ರಿಗುಣಿತವ್ಯಾಹರಣೇ
ಅಷ್ಟಾಕ್ಷರಸ್ಯ ಚತುರ್ವಿಂಶತ್ಯಕ್ಷರತ್ವಂ ಭವತಿ । ತಸ್ಮಾತ್ ನಾರಾಯಣಾಷ್ಟಾಕ್ಷರಾತ್
ಗಾಯತ್ಯುತನ್ನೇತ್ಯರ್ಥಃ ।
 
--
 
ಟೀಕಾರ್ಥ ನಾರಾಯಣಾಷ್ಟಾಕ್ಷರಾಚ್ಯ ಎಂಬ ಶ್ಲೋಕದಲ್ಲಿ ಗಾಯತ್ರಿಯು
ಉತ್ಪನ್ನವಾದ ಬಗೆಯನ್ನು ಹೇಳುತ್ತಾರೆ. ನಾರಾಯಣಾಷ್ಟಾಕ್ಷರಮಂತ್ರವನ್ನು ಮೂರು ಬಾರಿ
ಉಚ್ಚರಿಸಿದರೆ ಇಪ್ಪತ್ತನಾಲ್ಕು ಅಕ್ಷರವಾಗುವುದರಿಂದ ನಾರಾಯಣಾಷ್ಟಾಕ್ಷರದಿಂದಲೇ
ಗಾಯತ್ರಿಯೂ ಉತ್ಪನ್ನವಾಯಿತೆಂದು ತಿಳಿಯುತ್ತದೆ.
 
ಗಾಯತ್ರೀವರ್ಣದೇವತೆ - ಪುರುಷಸೂಕ್ತ
ಚತುರ್ವಿಂಶನ್ಮೂರ್ತಯೋಽಸ್ಯಾಃ ಕಥಿತಾ ವರ್ಣದೇವತಾಃ ।
 
ಈ ಶ್ಲೋಕಕ್ಕೆ ಇನ್ನೊಂದು ರೀತಿಯ ವ್ಯಾಖ್ಯಾನವೂ ಇದೆ.
"ನಾರಾಯಣಾಷ್ಟಾಕ್ಷರದಿಂದ ಹಾಗು ಮೂರುಬಾರಿ ಉಚ್ಚರಿಸಿದ ವ್ಯಾಹೃತಿ ಹಾಗೂ ಪುನಃ
ಇನ್ನೊಂದುಬಾರಿ ಉಚ್ಚರಿಸಿದ ವ್ಯಾಹೃತಿಯಿಂದ (8+4+4+4+4 =24) ಗಾಯತ್ರಿಯು
ಉತ್ಪನ್ನವಾಗುತ್ತದೆ'' ಎಂದು.
 
1. ವಿಶೇಷಾಂಶ