This page has been fully proofread once and needs a second look.

೧೯೪
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಅಷ್ಟೇ ಅಲ್ಲದೆ ಘೋರವಾದ ತಮಸ್ಸಿಗೆ ಬೀಳುವನು. ಆದ್ದರಿಂದ ಮಂತ್ರ,
ಮಂತ್ರದೇವತೆ, ಗುರುಗಳಲ್ಲಿ ಅಚಲಭಕ್ತಿಶ್ರದ್ಧೆಯನ್ನು ಹೊಂದಿರಬೇಕು.
 

 
ಭಕ್ತಿಯನ್ನು ಮಾಡಿದರೆ ಸಾಲದು. ಆ ಭಕ್ತಿ ಗುರುದೇವತೆಗಳಲ್ಲಿ ತಾರತಮ್ಯ-
ಜ್ಞಾನಪೂರ್ವಕವಾಗಿರಬೇಕು.
 

 
ಹರಿಗುರುದೇವತೆಗಳಲ್ಲಿ ಯೋಗ್ಯತಾನುಸಾರ ಭಕ್ತಿಮಾಡುತ್ತಾ, ಅವರಲ್ಲಿ ಎಂದೂ
ದ್ವೇಷಭಾವ ತಾಳದೆ ಕಾಮ-ಕ್ರೋಧಾದಿಗಳಿಗೆ ತುತ್ತಾಗದ ಸಾಧಕನಿಗೆ ಕೂಡಲೇ
ಮಂತ್ರಸಿದ್ಧಿಸುತ್ತದೆ.
 

 
ಫಲಕಾಮನೆಯಿಂದ ಮಾಡುವ ಮಂತ್ರಜಪಾದಿಕಾರ್ಯಗಳಿಗಿಂ- ತಲೂ ಭಗವಂತನ
ಪ್ರೀತ್ಯುದ್ದೇಶಕವಾಗಿ ಮಾಡಿದರೆ ಅನಂತ ಪಟ್ಟು ಫಲಾಧಿಕ್ಯವಿರುತ್ತದೆ. ಆದ್ದರಿಂದ
ನಿಷ್ಕಾಮನೆಯಿಂದ ವಿಷ್ಣುವನ್ನು ಯಜಿಸಬೇಕು.
 

 
ವೇದೋಕ್ತಧನ್ವಂತರೀಮಂತ್ರ
 

 
ಅಯಂ ಮೇ ಹಸ್ತ ಇತಿ ಚ ಮಂತ್ರಃ ಪೂರ್ವೋಕ್ತವತ್ ಸ್ಮೃತಃ ।
ಅಕಾ

ಅತ್ರೋಕ್ತಾ
ಸ್ತು ಕ್ರಿಯಾಃ ಸರ್ವಮಂತೇಷ್ಟು ವಪ್ಯುಪಲಕ್ಷಣಮ್ ॥114
೧೧೪ ॥
ಅರ್ಥ - ಅಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರಃ ।

ಅಯಂ ಮೇ ವಿಶ್ವಭೇಷಜೋಽಯಂ ಶಿವಾಭಿಮರ್ಶನಃ ॥
 

ಎಂಬ ಋಗ್ವೇದ(10/60/12)ದಲ್ಲಿ ಬರುವ ಮಂತ್ರವೂ ಸಹ ಹಿಂದೆ ಹೇಳಿದ
ಧನ್ವಂತರೀಮಂತ್ರದ ವೈದಿಕಮಂತ್ರವಾಗಿದೆ. ಧನ್ವಂತರಿ ಮಂತ್ರದಲ್ಲಿ ಹೇಳಿದ ಹವನ-
ಹೋಮ ಸಮಿತ್ತು, ಜಪ-ತರ್ಪಣಾದಿ ಗಳನ್ನು ಇಲ್ಲಿ ಹೇಳಿದ ಮಂತ್ರಗಳಿಗೆಲ್ಲ
ಅನ್ವಯವಾಗುತ್ತದೆ ಎಂದು ತಿಳಿಯಬೇಕು'.
 
[^1].
 
[^1]
. ಅಂಗನ್ಯಾಸಾದಿಗಳು -
 

 
ಅಸ್ಯ ಶ್ರೀ ಧನ್ವಂತರಿವೈದಿಕಮಂತ್ರಸ್ಯ ಬ್ರಹ್ಮಾ ಋಷಿಃ । ಅನುಷ್ಟುಪ್ ಛಂದಃ ।

ಓಂ ಅಯಂ ಮೇ ಹಸ್ತೋ ಭಗವಾನ್ - ಹೃದಯಾಯ ನಮಃ ।

ಓಂ ಅಯಂ ಮೇ ಭಗವತ್ತರಃ – ಶಿರಸೇ ಸ್ವಾಹಾ ।
 

ಓಂ ಅಯಂ ಮೇ ವಿಶ್ವಭೇಷಜಃ - ಶಿಖಾಯ್ಸಯೈ ವಷಮ್ಟ್
 
www
 

ಓಂ ಅಯಂ ಶಿವಾಭಿಮರ್ಶನಃ - ಕವಚಾಯ ಹುಮ್
 

ಓಂ ಅಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರಃ । ಅಯಂ ಮೇ ವಿಶ್ವಭೇಷ-