This page has been fully proofread once and needs a second look.

ವಿದ್ಯೆ ಅವನಿಗೆ ಸಿದ್ಧಿಸುತ್ತದೆ[^1]
 
ವ.ಟೀ. - ಪೂರ್ವಗುರುಃ = ಪರಮಗುರುಃ, ಆದಿಗುರುಃ= ಪೂರ್ಣಪ್ರಜ್ಞಃ , ಮೂಲಗುರುಃ= ವೇದವ್ಯಾಸಃ, ವಾಸುದೇವಾಖ್ಯಾಂ ದೇವತಾಂ ಚ ಸ್ಮೃತ್ವಾ ವಿದ್ಯಾಮಾರಭೇತ್ ಇತಿ ಭಾವಃ ।
 
ಟೀಕಾರ್ಥ- ಪೂರ್ವಗುರುವೆಂದರೆ ಗುರುಗಳ ಗುರುಗಳೆಂದರ್ಥ; ಆದಿಗುರುವೆಂದರೆ ಶ್ರೀಮದಾಚಾರ್ಯರು. ಮೂಲಗುರುವೆಂದರೆ ವೇದವ್ಯಾಸದೇವರು. ವಾಸುದೇವನೆಂಬ ಮಂತ್ರಪ್ರತಿಪಾದ್ಯದೇವತೆ ಯನ್ನೂ ಸ್ಮರಿಸಿ ವಿದ್ಯಾಭ್ಯಾಸಿಯು ವಿದ್ಯೆಯನ್ನಾರಂಭಿಸಬೇಕು ಎಂದರ್ಥ.
 
ಗುರು, ದೈವದ್ರೋಹದಿಂದಾಗುವ ಅನರ್ಥಗಳು
 
ಅವಜ್ಞಾತಾ ಗುರುಣಾಂ ಚ ದೇವತಾನಾಂ ನ ಸಿದ್ಧ್ಯತಿ ।
ಪ್ರಯಾತಿ ಚ ತಮೋ ಘೋರಂ ಮಂತ್ರಾವಜ್ಞಾಕೃದೇವ ಚ ॥ ೧೧೦ ॥
 
ಯಸ್ತಾರತಮ್ಯವೇತ್ತಾ ಸ್ಯಾದ್ ಗುರೂಣಾಂ ದೇವತಾಸ್ವಪಿ ।
ಭಕ್ತಿಮಾನ್ ಗುರುದೇವೇಷು ತದ್ಭಕ್ತೇಷು ಚ ಸಿದ್ಧ್ಯತಿ ॥ ೧೧೧ ॥
 
ಗುರುದೇವಪ್ರತೀಪಾನಾಂ ವಿಮುಖಸ್ತತ್ಪ್ರಿಯೇ ರತಃ ।
ಅಕಾಮಕ್ರೋಧಲೋಭಶ್ಚ ನ ಚಿರಾತ್ ಸಿದ್ಧಿಮಾಪ್ನುಯಾತ್ ॥ ೧೧೨ ॥
 
ಸಕಾಮೇಭ್ಯಃ ಅಮಿತಗುಣಾ ಯಾऽಕಾಮೈಸ್ತು ಕೃತಾ ಕ್ರಿಯಾ ।
ತಸ್ಮಾದಕಾಮ ಏವಾಲಂ ಭಜೇದ್ ವಿಷ್ಣುಂ ಸನಾತನಮ್ ॥ ೧೧೩ ॥
 
ಅರ್ಥ ಯಾವ ವಿದ್ಯಾಭ್ಯಾಸಕನು ಗುರು, ಪೂರ್ವಗುರು, ಆದಿಗುರು,
ಮೂಲಗುರುಗಳನ್ನು, ಮಂತ್ರಪ್ರತಿಪಾದ್ಯದೇವತೆಯನ್ನೂ ತಿರಸ್ಕರಿಸುವನೋ ಹಾಗೂ ಮಂತ್ರವನ್ನೂ ತಿರಸ್ಕರಿಸುವನೋ ಅವನಿಗೆ ಯಾವುದೇ ಮಂತ್ರಸಿದ್ಧಿಯಾಗುವುದಿಲ್ಲ.
 
[^1]. ಏಳು ಜನ ಮೂಲಗುರುಗಳಿರುವರೆಂದು ಪಂಚರಾತ್ರ ಹೇಳಿದೆ. ಆದ್ದರಿಂದ ಮೂಲಗುರುಗಳನ್ನು ಹೇಳುವಾಗ ಈ ಏಳು ದೇವತೆಗಳನ್ನು ಹೇಳುವ ಸಂಪ್ರದಾಯವಿದೆ :
ವ್ಯಾಸಂ ಚ ಭಾರತೀಂ ವಾಣೀಂ ವಿಧಿಂ ವಾಯುಂ ರಮಾಂ ತಥಾ। ತಥಾ ನಾರಾಯಣಂ ಮೂಲಗುರೂನಾಹುಃ ವಿಪಶ್ಚಿತಃ ॥