This page has been fully proofread once and needs a second look.

ಭಗವತ್ಸಾಮ್ಯಾದಿಚಿಂತನೆಯ ನಿಷೇಧ
 
ಮುಕ್ತಾವಪಿ ಚ ಸಂಸಾರೇ ನಾತ್ಮನೋ ವಿಷ್ಣುತಾಂ ಕ್ವಚಿತ್ ।
ಬ್ರಹ್ಮರುದ್ರಾದಿಭಾವಂ ವಾ ಸಾಮ್ಯಂ ವಾऽऽಧಿಕ್ಯಮೇವ ವಾ ॥ ೧೦೭ ॥
 
ಅತದ್ವಶತ್ವಮಥವಾ ಯಃ ಸ್ಮರೇತ್ ಸ ತು ಸಿದ್ಧಿಭಾಕ್ ।
ನಾನ್ಯಥಾ ಸಿದ್ಧಿಮಾಪ್ನೋತಿ ಕಲ್ಪಕೋಟಿಶತೈರಪಿ ॥ ೧೦೮ ॥
 
ಅರ್ಥ - ಯಾವ ಸಾಧಕನು ತನ್ನನ್ನು, ಮುಕ್ತಿಯಲ್ಲಾಗಲೀ, ಸಂಸಾರದಲ್ಲಾಗಲೀ ತಾನು ಭಗವಂತ ಹಾಗೂ ಬ್ರಹ್ಮಾದಿದೇವತೆ ಗಳಿಗೆ ಅಭಿನ್ನನೆಂದು, ಅವರಿಗಿಂತ ಅಧಿಕನೆಂದಾಗಲೀ, ಅವರಿಗೆ ಸಮಾನನೆಂದಾಗಲೀ, ತಾನು ಯಾರ ವಶದಲ್ಲಿಯೂ ಇರದೇ ಸ್ವತಂತ್ರನೆಂದು ಬಗೆಯುವನೋ ಅವನು ಕೋಟಿಕಲ್ಪಜನ್ಮವೆತ್ತಿ ಸಾಧನೆ ಮಾಡುತ್ತಿದ್ದರೂ ಸಿದ್ಧನಾಗಲಾರನು. ಬದಲಾಗಿ ಈ ರೀತಿ ಭಾವನೆಯನ್ನು ಹೊಂದದೆ ತಾನು ಭಗವಂತ ಹಾಗೂ ಭಗವದ್ಭಕ್ತರ ಅಧೀನನಾಗಿದ್ದೇನೆ ಎಂದು ತಿಳಿದ ಸಾಧಕನು
ಮಾತ್ರ ಶೀಘ್ರದಲ್ಲಿ ಸಿದ್ಧನಾಗುತ್ತಾನೆ.
 
ದ್ವಾದಶಗುರುಗಳ ಸ್ಮರಣೆಯ ಮಹಿಮೆ
 
ಸ್ಮೃತ್ವಾ ಗುರುಂ ಪೂರ್ವಗುರುಮಾದಿಮೂಲಗುರೂ ತಥಾ ।
ದೇವತಾಂ ವಾಸುದೇವಂ ಚ ವಿದ್ಯಾಭ್ಯಾಸೀ ತು ಸಿದ್ಧಿಭಾಕ್ ॥ ೧೦೯ ॥
 
ಅರ್ಥ - ವಿದ್ಯಾಭ್ಯಾಸದ ಆರಂಭಕಾಲದಲ್ಲಿ ತನಗೆ ನೇರವಾಗಿ ವಿದ್ಯೆಯನ್ನು ನೀಡುತ್ತಿರುವ ಗುರುಗಳನ್ನು (ಗುರುಂ) ತನ್ನ ಗುರುಗಳ ಗುರುಗಳಾದ ಪರಮಗುರುವನ್ನು (ಪೂರ್ವಗುರುಂ) ಆದಿಗುರುಗಳಾದ ಶ್ರೀಮನ್ಮಧ್ವಾಚಾರ್ಯರನ್ನೂ, ಮೂಲಗುರು- ಗಳಾದ ಶ್ರೀವೇದವ್ಯಾಸದೇವರನ್ನೂ (ಮೂಲಗುರುಂ) ಮಂತ್ರಪ್ರತಿ-
ಪಾದ್ಯದೇವತೆಯಾದ ವಾಸುದೇವನನ್ನೂ ಸ್ಮರಿಸಿ ಶಾಸ್ತ್ರಾಭ್ಯಾಸ ಪ್ರಾರಂಭಮಾಡಿದರೆ ಆ
 
ವಿದ್ಯಾಃ ಕರ್ಮಣಿ ಚ ಸದಾ ಗುರೋಃ ಪ್ರಾಪ್ತಾ ಫಲಪ್ರದಾ ।
ಅನ್ಯಥಾ ನೈವ ಫಲದಾಃ ಪ್ರಸನ್ನೋಕ್ತಾಃ ಫಲಪ್ರದಾಃ ॥
- ಭಾಗ.ತಾ. 6/8/43
ದಂಡೋSಪಿ ಭಗವಚ್ಚೀರ್ಣೋ ಮಮೈಷೋಽನುಗ್ರಹಃ ಕೃತಃ ।
ಇತಿ ಭಕ್ತ್ಯಾ ಚಿಂತಯತಾಂ ಶುಭಕಾರೀ ಭವತ್ಯಲಮ್ ॥
- ಭಾಗ.ತಾ. 10/14/30