This page has not been fully proofread.

೧೯೨
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಭಗವತ್ಪಾಮ್ಯಾದಿಚಿಂತನೆಯ ನಿಷೇಧ
 
ಮುಕ್ತಾವಪಿ ಚ ಸಂಸಾರೇ ನಾತ್ಮನೋ ವಿಷ್ಣುತಾಂ ಕ್ವಚಿತ್ ।
ಬ್ರಹ್ಮರುದ್ರಾದಿಭಾವಂ ವಾ ಸಾಮ್ಯಂ ವಾಧಿಕ್ಯಮೇವ ವಾ ॥107॥
 
ಅತತ್ವಶತ್ವಮಥವಾ ಯಃ ಸ್ಮರೇತ್ ಸ ತು ಸಿದ್ದಿಭಾಕ್ ।
ನಾನ್ಯಥಾ ಸಿದ್ಧಿಮಾವೋತಿ ಕಲ್ಪಕೋಟಿಶತೈರಪಿ
 
॥10811
 
ಅರ್ಥ - ಯಾವ ಸಾಧಕನು ತನ್ನನ್ನು, ಮುಕ್ತಿಯಲ್ಲಾಗಲೀ, ಸಂಸಾರದಲ್ಲಾಗಲೀ
ತಾನು ಭಗವಂತ ಹಾಗೂ ಬ್ರಹ್ಮಾದಿದೇವತೆಗಳಿಗೆ ಅಭಿನ್ನನೆಂದು, ಅವರಿಗಿಂತ
ಅಧಿಕನೆಂದಾಗಲೀ, ಅವರಿಗೆ ಸಮಾನನೆಂದಾಗಲೀ, ತಾನು ಯಾರ ವಶದಲ್ಲಿಯೂ
ಇರದೇ ಸ್ವತಂತ್ರನೆಂದು ಬಗೆಯುವನೋ ಅವನು ಕೋಟಿಕಲ್ಪಜನ್ಮವೆತ್ತಿ ಸಾಧನೆ
ಮಾಡುತ್ತಿದ್ದರೂ ಸಿದ್ಧನಾಗಲಾರನು. ಬದಲಾಗಿ ಈ ರೀತಿ ಭಾವನೆಯನ್ನು ಹೊಂದದೆ
ತಾನು ಭಗವಂತ ಹಾಗೂ ಭಗವದ್ಭಕ್ತರ ಅಧೀನನಾಗಿದ್ದೇನೆ ಎಂದು ತಿಳಿದ ಸಾಧಕನು
ಮಾತ್ರ ಶೀಘ್ರದಲ್ಲಿ ಸಿದ್ಧನಾಗುತ್ತಾನೆ.
 
ದ್ವಾದಶಗುರುಗಳ ಸ್ಮರಣೆಯ ಮಹಿಮೆ
 
ಕೃತ್ವಾ ಗುರುಂ ಪೂರ್ವಗುರುಮಾದಿಮೂಲಗುರೂ ತಥಾ ।
ದೇವತಾಂ ವಾಸುದೇವಂ ಚ ವಿದ್ಯಾಭ್ಯಾಸೀತು ಸಿದ್ಧಿಭಾಕ್ I109
 
ಅರ್ಥ - ವಿದ್ಯಾಭ್ಯಾಸದ ಆರಂಭಕಾಲದಲ್ಲಿ ತನಗೆ ನೇರವಾಗಿ ವಿದ್ಯೆಯನ್ನು
ನೀಡುತ್ತಿರುವ ಗುರುಗಳನ್ನು (ಗುರುಂ) ತನ್ನ ಗುರುಗಳ ಗುರುಗಳಾದ ಪರಮ
ಗುರುವನ್ನು (ಪೂರ್ವಗುರುಂ) ಆದಿಗುರುಗಳಾದ ಶ್ರೀಮನ್ಮಧ್ವಾಚಾರ್ಯರನ್ನೂ,
ಮೂಲಗುರುಗಳಾದ ಶ್ರೀವೇದವ್ಯಾಸದೇವರನ್ನೂ (ಮೂಲಗುರುಂ) ಮಂತ್ರಪ್ರತಿ
ಪಾದ್ಯದೇವತೆಯಾದ ವಾಸುದೇವನನ್ನೂ ಸ್ಮರಿಸಿ ಶಾಸ್ತ್ರಾಭ್ಯಾಸಪ್ರಾರಂಭಮಾಡಿದರೆ ಆ
 
ವಿದ್ಯಾಃ ಕರ್ಮಣಿ ಚ ಸದಾ ಗುರೋಃ ಪ್ರಾಪ್ತಾ ಫಲಪ್ರದಾ ।
ಅನ್ಯಥಾ ನೈವ ಫಲದಾಃ ಪ್ರಸನ್ನೋಕ್ತಾಃ ಫಲಪ್ರದಾಃ ॥
ದಂಡೋSಪಿ ಭಗವಚ್ಚರ್ಣ ಮಮೈಷೋಽನುಗ್ರಹಃ ಕೃತಃ ।
ಇತಿ ಭಕ್ಯಾ ಚಿಂತಯತಾಂ ಶುಭಕಾರೀ ಭವತ್ಯಲಮ್ ॥
 
- ಭಾಗ.ತಾ. 6/8/43
 
- ಭಾಗ.ತಾ. 10/14/30